ಕೃಷ್ಣ ಜನ್ಮಾಷ್ಟಮಿ 2022: ಇಲ್ಲಿದೆ ಜನ್ಮಾಷ್ಟಮಿಯ ಶುಭಾಶಯಗಳು, ಸಂದೇಶಗಳು
ಭಾರತದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾದ ಜನ್ಮಾಷ್ಟಮಿಯನ್ನು ವಿಷ್ಣುವಿನ ಎಂಟು ಅವತಾರವಾದ ಕೃಷ್ಣನ ಜನ್ಮದಿನದಂದು ಆಚರಿಸಲಾಗುತ್ತದೆ. ಇದನ್ನು ಭಾರತದಲ್ಲಿ ಆಚರಿಸಲಾಗುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಆಚರಿಸಲಾಗುತ್ತದೆ. ಈ ದಿನ ಹಿಂದೂಗಳು ಪೂಜೆಗಳನ್ನು ಆಯೋಜಿಸುತ್ತಾರೆ, ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಮನೆಗಳನ್ನು ಅಲಂಕರಿಸುತ್ತಾರೆ, ಇಡೀ ದಿನ ಉಪವಾಸ ಮಾಡುತ್ತಾರೆ. ಬಡವರಿಗೆ ಪ್ರಸಾದ ಹಾಗೂ ದಾನವನ್ನೂ ನೀಡುತ್ತಾರೆ.
ಕೃಷ್ಣನ ಜನ್ಮದಿನದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬಹುದಾದ ಕೆಲವು ಸಂದೇಶಗಳು ಇಲ್ಲಿದೆ. ಇವುಗಳನ್ನು Facebook, WhatsApp, ಅಥವಾ ಇತರ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಲು ಸಹ ಬಳಸಬಹುದು.
ಕೃಷ್ಣ ಜನ್ಮಾಷ್ಟಮಿ ಶುಭಾಶಯ ತಿಳಿಸಲು ವಾಟ್ಸಪ್ ಸ್ಟಿಕ್ಕರ್ ಬಳಕೆ ಹೇಗೆ?
ಕೃಷ್ಣ ಜನ್ಮಾಷ್ಟಮಿ 2022: ಸಂದೇಶಗಳು ಮತ್ತು ಶುಭಾಶಯಗಳು
-ಶ್ರೀಕೃಷ್ಣ ನಿಮಗೆ ಸಂತೋಷ, ಪ್ರೀತಿ ಮತ್ತು ನೆಮ್ಮದಿಯನ್ನು ನಿರಂತರವಾಗಿ ನೀಡಲಿ. ಜನ್ಮಾಷ್ಟಮಿಯಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು!
-ಈ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಮಧುರವಾದ ಕೆಲ ವಿಷಯಗಳು ನಿಮಗೆ ಸಂತೋಷ ಮತ್ತು ಆನಂದವನ್ನು ತರುತ್ತವೆ ಎಂದು ನಾನು ಭಾವಿಸುತ್ತೇನೆ. ಜನ್ಮಾಷ್ಟಮಿಯ ಶುಭಾಶಯಗಳು!
-ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತದ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಸರಿಯಾದ ಮಾರ್ಗವನ್ನು ತೋರಿಸಿದಂತೆಯೇ ನಿಮಗೆ ಸರಿಯಾದ ಮಾರ್ಗವನ್ನು ತೋರಿಸಲಿ- ಜನ್ಮಶಮಿಯ ಶುಭಾಶಯಗಳು!
-ನಿಮ್ಮ ಎಲ್ಲಾ ಸಮಸ್ಯೆಗಳು ಮತ್ತು ಚಿಂತೆಗಳನ್ನು ಹೋಗಲಾಡಿಸಲು ನಾನು ಕೃಷ್ಣನನ್ನು ಪ್ರಾರ್ಥಿಸುತ್ತೇನೆ. ಜೈ ಶ್ರೀ ಕೃಷ್ಣ! ಜನ್ಮಾಷ್ಟಮಿಯ ಶುಭಾಶಯಗಳು.
-ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ ತತ್ವಗಳನ್ನು ನೆನಪಿನಲ್ಲಿಡಿ ಮತ್ತು ಯಾವಾಗಲೂ ಧರ್ಮದ ಮಾರ್ಗವನ್ನು ಅನುಸರಿಸಿ. ಜನ್ಮಾಷ್ಟಮಿಯ ಶುಭಾಶಯಗಳು!
ಕೃಷ್ಣ ಜನ್ಮಾಷ್ಟಮಿ 2022: ಉಲ್ಲೇಖಗಳು
-"ಎಲ್ಲೆಲ್ಲಿ ಎಲ್ಲಾ ಅತೀಂದ್ರಿಯಗಳ ಒಡೆಯನಾದ ಕೃಷ್ಣನಿದ್ದಾನೋ ಮತ್ತು ಎಲ್ಲೆಲ್ಲಿ ಸರ್ವೋಚ್ಚ ಬಿಲ್ಲುಗಾರನಾದ ಅರ್ಜುನನಿದ್ದಾನೋ ಅಲ್ಲಿ ಐಶ್ವರ್ಯ, ವಿಜಯ, ಅಸಾಧಾರಣ ಶಕ್ತಿ ಮತ್ತು ನೈತಿಕತೆ ಇರುತ್ತದೆ" - ಭಗವದ್ಗೀತೆ
-"ನೀವು ಮಾಡಬೇಕಾದ ಎಲ್ಲಾ ಕೆಲಸವನ್ನು ಮಾಡಿ. ಆದರೆ ಅದನ್ನು ದುರಾಸೆಯಿಂದ, ಅಹಂಕಾರದಿಂದ, ಕಾಮದಿಂದ, ಅಸೂಯೆಯಿಂದ ಮಾಡಬೇಡಿ. ಪ್ರೀತಿ, ಸಹಾನುಭೂತಿ, ನಮ್ರತೆ ಮತ್ತು ಭಕ್ತಿಯಿಂದ ಮಾಡಿ " ಜನ್ಮಾಷ್ಟಮಿಯ ಶುಭಾಶಯಗಳು!
-ಶ್ರೀಕೃಷ್ಣನು ನಿಮ್ಮ ಮನೆಗೆ ಬಂದು ನಿಮ್ಮನ್ನು ಎಲ್ಲಾ ಚಿಂತೆ ಮತ್ತು ದುಃಖದಿಂದ ದೂರ ಮಾಡಲಿ. ಜನ್ಮಾಷ್ಟಮಿಯ ಶುಭಾಶಯಗಳು!
-"ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಹೃದಯದಿಂದ ಉಡುಗೊರೆಯನ್ನು ನೀಡಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೆ ಇರುವಾಗ ಉಡುಗೊರೆಯು ಶುದ್ಧವಾಗಿರುತ್ತದೆ" ಜೈ ಶ್ರೀ ಕೃಷ್ಣ!
-ಪ್ರೀತಿ ಉತ್ಸಾಹವಾಗಿದ್ದು ಅದನ್ನು ಸ್ವೀಕರಿಸಲು ಸೌಮ್ಯವಾದ ಮನಸ್ಸು ಬೇಕು. ಜನ್ಮಾಷ್ಟಮಿಯ ಶುಭಾಶಯಗಳು!
Recommended Video