ಮಹಾ ಶಿವರಾತ್ರಿ 2026: ಆಚರಣೆ ವಿಧಾನಗಳು, ಮಹತ್ವ, ದಿನಾಂಕ, ಪೂಜಾ ಸಮಯಗಳ ವಿವರ
Maha Shivratri 2026: ಇನ್ನೇನು ಕೆಲವೇ ದಿನಗಳಲ್ಲಿ ಮಹಾ ಶಿವರಾತ್ರಿ ಹಬ್ಬ ಬರಲಿದೆ. ಈ ಹಬ್ಬವನ್ನು ಇಡೀ ದೇಶಾದ್ಯಂತ ಭಕ್ತಿಭಾವದಿಂದ ಆಚರಣೆ ಮಾಡಲಾಗುತ್ತದೆ. ಹಾಗಾದ್ರೆ, ಈ ವೇಳೆ ಭಕ್ತರು ಯಾವೆಲ್ಲಾ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಗವಾನ್ ಶಿವನ ಆರಾಧನೆಗೆ ಸಮರ್ಪಿತವಾದ ಮಹಾ ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಮಹಾ ಶಿವರಾತ್ರಿ ಭಾನುವಾರ, ಫೆಬ್ರವರಿ 15, 2026ರಂದು ಬರುತ್ತಿದ್ದು, ಶಿವಭಕ್ತರು ಉಪವಾಸ, ಜಾಗರಣೆ ಹಾಗೂ ವಿಶೇಷ ಪೂಜೆಯ ಮೂಲಕ ಶಿವನ ಕೃಪೆ ಪಡೆಯಲು ಸಿದ್ಧರಾಗುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲಾ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ ಗಮನಿಸಿ.

ಮಹಾ ಶಿವರಾತ್ರಿ ಶಿವ-ಶಕ್ತಿ ತತ್ವಗಳ ದಿವ್ಯ ಸಂಯೋಗವನ್ನು ಸೂಚಿಸುವ ಪವಿತ್ರ ರಾತ್ರಿ ಎಂದು ನಂಬಲಾಗಿದೆ. ಈ ದಿನ ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿ ಶಿವಪೂಜೆ ಸಲ್ಲಿಸುವುದರಿಂದ ಆತ್ಮಶಕ್ತಿ, ಮನೋಸ್ಥೈರ್ಯ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ವಿಶ್ವಾಸವಿದೆ. ಆದ್ದರಿಂದ ಈ ಹಬ್ಬವನ್ನು ಶಿವನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
ಮಹಾ ಶಿವರಾತ್ರಿ ದಿನಾಂಕ ಮತ್ತು ತಿಥಿ ವಿವರ
* ಮಹಾ ಶಿವರಾತ್ರಿ ವ್ರತ: ಭಾನುವಾರ, ಫೆಬ್ರವರಿ 15, 2026
* ಉಪವಾಸ ಮುರಿಯುವ ದಿನ: ಸೋಮವಾರ, ಫೆಬ್ರವರಿ 16, 2026
* ಚತುರ್ದಶಿ ತಿಥಿ ಆರಂಭ: ಫೆಬ್ರವರಿ 15, ಸಂಜೆ 05:04
* ಚತುರ್ದಶಿ ತಿಥಿ ಅಂತ್ಯ: ಫೆಬ್ರವರಿ 16, ಸಂಜೆ 05:34
ಉತ್ತರ ಮತ್ತು ದಕ್ಷಿಣ ಭಾರತದ ಪಂಚಾಂಗಗಳಲ್ಲಿ ಚಾಂದ್ರ ಮಾಸಗಳ ಹೆಸರಿನಲ್ಲಿ ವ್ಯತ್ಯಾಸ ಇದ್ದರೂ, ಮಹಾ ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಒಂದೇ ದಿನ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ದಿನ ರಾತ್ರಿಯ ಪೂಜೆಗೆ ವಿಶೇಷ ಮಹತ್ವ ಇದ್ದು, ನಿಶಿತ ಕಾಲವನ್ನು ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ.
ನಿಶಿತ ಕಾಲ ಮತ್ತು ನಾಲ್ಕು ಪ್ರಹಾರ ಪೂಜೆ ಸಮಯ
* ನಿಶಿತ ಕಾಲ ಪೂಜೆ: ಫೆಬ್ರವರಿ 16ರ ರಾತ್ರಿ 12:09 ರಿಂದ 01:01 ಗಂಟೆಯವರೆಗೆ
* ಪ್ರಥಮ ಪ್ರಹಾರ: ಫೆಬ್ರವರಿ 15ರ ಸಂಜೆ 06:11 ರಿಂದ ರಾತ್ರಿ 09:23 ಗಂಟೆಯವರೆಗೆ
* ದ್ವಿತೀಯ ಪ್ರಹಾರ: ರಾತ್ರಿ 09:23 ರಿಂದ 12:35 ಗಂಟೆಯವರೆಗೆ
* ತೃತೀಯ ಪ್ರಹಾರ: ಫೆಬ್ರವರಿ 16ರ ರಾತ್ರಿ 12:35 ರಿಂದ ಬೆಳ 03:47 ಗಂಟೆಯವರೆಗೆ
* ಚತುರ್ಥ ಪ್ರಹಾರ: ಬೆಳಗ್ಗೆ 03:47 ರಿಂದ 06:59 ಗಂಟೆಯವರೆಗೆ
ಉಪವಾಸ ಮುರಿಯುವ ವಿಧಾನಗಳು: ಭಕ್ತರು ರಾತ್ರಿಯಲ್ಲಿ ಒಮ್ಮೆ ಅಥವಾ ನಾಲ್ಕು ಪ್ರಹಾರಗಳಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ನಿಶಿತ ಕಾಲದಲ್ಲಿ ಶಿವಪೂಜೆ ಮಾಡಿದರೆ, ವಿಶೇಷ ಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ. ಭಕ್ತರು ಬೆಳಗಿನ ನಿತ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಉಪವಾಸವನ್ನು ಮುರಿಯಬೇಕು. ನಿಗದಿತ ಸಮಯದಲ್ಲಿ ಉಪವಾಸ ಮುರಿಯುವುದರಿಂದ ಆಧ್ಯಾತ್ಮಿಕ ಲಾಭ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಮಹಾ ಶಿವರಾತ್ರಿ ಮಹತ್ವ: ಮಹಾ ಶಿವರಾತ್ರಿ ಭಕ್ತಿ, ಶಾಂತಿ ಮತ್ತು ಆತ್ಮಜಾಗರಣೆಯ ಸಂಕೇತವಾಗಿದೆ. ಈ ರಾತ್ರಿ ಭಗವಾನ್ ಶಿವ ಮತ್ತು ದೇವಿ ಪಾರ್ವತಿಯ ದಿವ್ಯ ವಿವಾಹ ಅಥವಾ ಶಿವನು ಅನಂತಲಿಂಗ ರೂಪದಲ್ಲಿ ಪ್ರತ್ಯಕ್ಷನಾದ ಕ್ಷಣವೆಂದು ನಂಬಲಾಗಿದೆ. ಭೌತಿಕ ಆಕರ್ಷಣೆಗಳನ್ನು ತೊರೆದು ಅಂತರಾತ್ಮ ಶುದ್ಧಿಯ ಕಡೆಗೆ ಗಮನ ಹರಿಸಲು ಈ ಹಬ್ಬ ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ. ಕೆಲವು ಪುರಾಣಗಳಲ್ಲಿ ಜ್ಞಾನ, ಮಾರ್ಗದರ್ಶನ ಎಂಬ ಭಕ್ತನ ರಕ್ಷಣೆಯ ಕಥೆಯೊಂದಿಗೆ ಮಹಾ ಶಿವರಾತ್ರಿ ಸಂಬಂಧಿಸಿದ್ದು, ನಿಜವಾದ ಭಕ್ತಿಯ ಶಕ್ತಿಯನ್ನು ಈ ಹಬ್ಬ ಸಾರುತ್ತದೆ. ಆದ್ದರಿಂದ ಈ ಹಬ್ಬವನ್ನು ದೇಶದಾದ್ಯಂತ ಸಮಾನ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications