ಗೋಕರ್ಣದ ಮಹಾಬಲೇಶ್ವರ : ಆತ್ಮಲಿಂಗ ರೂಪಿಗೆ ಭಕ್ತಕೋಟಿಯ ನಮನ
ಓಂ ನಮಃ ಶಿವಾಯ!
ಉಡುಪಿಯಿಂದ 180 ಕಿಮೀ ದೂರದಲ್ಲಿರುವ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲೀಗ ಶಿವರಾತ್ರಿ ಸಂಭ್ರಮ. ಮಹಾಬಲೇಶ್ವರ ದೇಗುಲದಲ್ಲಿ ಶಿವನೊಲುಮೆಗೆ ಬೇಡಿ ನಿಲ್ಲುವ ಭಕ್ತರ ಸಾಲು. ಸಾವಿರಾರು ಭಕ್ತರಿಂದ ಶಿವನಾಮ ಸ್ಮರಣೆ.
ಉಳಿದ ಕಡೆಗಳಲ್ಲಿ ಶಿವರಾತ್ರಿ ಒಂದು ದಿನದ ಸಂಭ್ರಮವಾದರೆ, ಮಹಾಬಲೇಶ್ವರನದು ನವರಾತ್ರಿಯಂತೆ 9 ದಿನಗಳ ಹಬ್ಬ. ತಾಯಿಯ ಪೂಜೆಗಾಗಿ ಶಿವನಿಂದ ರಾವಣ ಪಡೆದ ಆತ್ಮಲಿಂಗ ನೆಲೆಸಿರುವ ಪುರಾಣ ಪ್ರಸಿದ್ಧ ಕ್ಷೇತ್ರವಿದು. ಗಣಪನ ಬುದ್ಧಿವಂತಿಕೆಯಿಂದ ರಾವಣನ ಕೈ ತಪ್ಪಿದ ಲಿಂಗ ಗೋಕರ್ಣದ ಕಡಲ ತಡಿಯಲ್ಲಿಯಲೇ ನೆಲೆಗೊಂಡಿತು. ಗೋಕರ್ಣ ದಕ್ಷಿಣ ಕಾಶಿಯೆಂದೇ ಪ್ರಸಿದ್ಧ . ಆ ಕಾರಣದಿಂದಲೇ ಗೋಕರ್ಣದಲ್ಲಿ ಶಿವರಾತ್ರಿ ಶಿವನ ಉತ್ಸವವಾಗಿ ಮಾತ್ರ ಉಳಿಯುವುದಿಲ್ಲ . ಗಣಪನಿಗೂ ಪೂಜೆ ಸಲ್ಲಬೇಕು.
ಮಾರ್ಚ್ 8 ರಿಂದಲೇ ಗಣೇಶ ಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಶಿವರಾತ್ರಿಯ ಪೂಜಾ ಕಾರ್ಯಗಳು ಗೋಕರ್ಣದಲ್ಲಿ ಆರಂಭವಾಗಿವೆ. ಮಾ.15 ರವರೆಗೂ ಪೂಜಾ ಕಾರ್ಯ, ಭಕ್ತರ ಸಂಭ್ರಮ ಮುಂದುವರಿಯಲಿದೆ.
ಮಾರ್ಚ್ 12 ರ ಮಂಗಳವಾರ- ಶಿವರಾತ್ರಿಯಂದು ಆಗಮ ಶಾಸ್ತ್ರದ ಪ್ರಕಾರ ಮಹಾಬಲೇಶ್ವರ ದೇಗುಲದಲ್ಲಿ ಶಿವರಾತ್ರಿ ಆಚರಣೆ ನಡೆಯಲಿದೆ. ಆದರೆ, ಮಾರ್ಚ್ 14 ರ ಅಮಾವಾಸ್ಯೆ ಹಾಗೂ 15 ರಂದೂ ಮಹಾಬಲೇಶ್ವರನಿಗೆ ವಿಶೇಷ ಪೂಜೆಗಳಿವೆ. ಮೂರೂ ದಿನಗಳ ಕಾಲ ಸಾವಿರಾರು ಭಕ್ತರು ಆತ್ಮಲಿಂಗವನ್ನು ದರ್ಶಿಸುವ ಮೂಲಕ ಶಿವಪ್ಪನ ಕಾರುಣ್ಯಕ್ಕೆ ಭಾಜನರಾಗುವ ಪುಳಕ ಪಡೆಯುತ್ತಾರೆ. ಮಾರ್ಚ್ 15 ರಂದು ಮಹಾರಾಷ್ಟ್ರೋತ್ಸವ.
ಶಿವರಾತ್ರಿ ಆಚರಣೆ ಸುಗಮವಾಗಿ ನಡೆಯುವಂತೆ ಜಿಲ್ಲಾ ಹಾಗೂ ಸ್ಥಳೀಯ ಆಡಳಿತಗಳು ವ್ಯಾಪಕ ಸಿದ್ಧತೆ ನಡೆಸಿವೆ. ಉತ್ತರ ಕನ್ನಡದ ಜಿಲ್ಲಾಧಿಕಾರಿ ನಿಲಯ ಮಿತಾಷ್, ಜಿಲ್ಲಾ ಪೊಲೀಸ್ ವರಿಷ್ಠ ರಮೇಶ್ ಹರಿಹರ್, ಕುಮಟಾ ಅಸಿಸ್ಟೆಂಟ್ ಕಮೀಷನರ್ ವಿಜಯಕುಮಾರಿ ಶೆಣೈ, ತಹಸಿಲ್ದಾರ್ ಆರ್.ಆರ್.ಭಾಗವಾಲ್ ಅವರು, ಮಹಾಬಲೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಡಳಿತ ಮಂಡಳಿಯಾಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ಸವ ಯಶಸ್ವಿಯಾಗಲು ಸಿದ್ಧತೆಗಳ ಉಸ್ತುವಾರಿ ನಡೆಸಿದ್ದಾರೆ.(ಇನ್ಫೋ ವಾರ್ತೆ)
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್












Click it and Unblock the Notifications