ಗೋಕರ್ಣದ ಮಹಾಬಲೇಶ್ವರ : ಆತ್ಮಲಿಂಗ ರೂಪಿಗೆ ಭಕ್ತಕೋಟಿಯ ನಮನ
ಓಂ ನಮಃ ಶಿವಾಯ!
ಉಡುಪಿಯಿಂದ 180 ಕಿಮೀ ದೂರದಲ್ಲಿರುವ ಗೋಕರ್ಣದ ಮಹಾಬಲೇಶ್ವರನ ಸನ್ನಿಧಿಯಲ್ಲೀಗ ಶಿವರಾತ್ರಿ ಸಂಭ್ರಮ. ಮಹಾಬಲೇಶ್ವರ ದೇಗುಲದಲ್ಲಿ ಶಿವನೊಲುಮೆಗೆ ಬೇಡಿ ನಿಲ್ಲುವ ಭಕ್ತರ ಸಾಲು. ಸಾವಿರಾರು ಭಕ್ತರಿಂದ ಶಿವನಾಮ ಸ್ಮರಣೆ.
ಉಳಿದ ಕಡೆಗಳಲ್ಲಿ ಶಿವರಾತ್ರಿ ಒಂದು ದಿನದ ಸಂಭ್ರಮವಾದರೆ, ಮಹಾಬಲೇಶ್ವರನದು ನವರಾತ್ರಿಯಂತೆ 9 ದಿನಗಳ ಹಬ್ಬ. ತಾಯಿಯ ಪೂಜೆಗಾಗಿ ಶಿವನಿಂದ ರಾವಣ ಪಡೆದ ಆತ್ಮಲಿಂಗ ನೆಲೆಸಿರುವ ಪುರಾಣ ಪ್ರಸಿದ್ಧ ಕ್ಷೇತ್ರವಿದು. ಗಣಪನ ಬುದ್ಧಿವಂತಿಕೆಯಿಂದ ರಾವಣನ ಕೈ ತಪ್ಪಿದ ಲಿಂಗ ಗೋಕರ್ಣದ ಕಡಲ ತಡಿಯಲ್ಲಿಯಲೇ ನೆಲೆಗೊಂಡಿತು. ಗೋಕರ್ಣ ದಕ್ಷಿಣ ಕಾಶಿಯೆಂದೇ ಪ್ರಸಿದ್ಧ . ಆ ಕಾರಣದಿಂದಲೇ ಗೋಕರ್ಣದಲ್ಲಿ ಶಿವರಾತ್ರಿ ಶಿವನ ಉತ್ಸವವಾಗಿ ಮಾತ್ರ ಉಳಿಯುವುದಿಲ್ಲ . ಗಣಪನಿಗೂ ಪೂಜೆ ಸಲ್ಲಬೇಕು.
ಮಾರ್ಚ್ 8 ರಿಂದಲೇ ಗಣೇಶ ಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಶಿವರಾತ್ರಿಯ ಪೂಜಾ ಕಾರ್ಯಗಳು ಗೋಕರ್ಣದಲ್ಲಿ ಆರಂಭವಾಗಿವೆ. ಮಾ.15 ರವರೆಗೂ ಪೂಜಾ ಕಾರ್ಯ, ಭಕ್ತರ ಸಂಭ್ರಮ ಮುಂದುವರಿಯಲಿದೆ.
ಮಾರ್ಚ್ 12 ರ ಮಂಗಳವಾರ- ಶಿವರಾತ್ರಿಯಂದು ಆಗಮ ಶಾಸ್ತ್ರದ ಪ್ರಕಾರ ಮಹಾಬಲೇಶ್ವರ ದೇಗುಲದಲ್ಲಿ ಶಿವರಾತ್ರಿ ಆಚರಣೆ ನಡೆಯಲಿದೆ. ಆದರೆ, ಮಾರ್ಚ್ 14 ರ ಅಮಾವಾಸ್ಯೆ ಹಾಗೂ 15 ರಂದೂ ಮಹಾಬಲೇಶ್ವರನಿಗೆ ವಿಶೇಷ ಪೂಜೆಗಳಿವೆ. ಮೂರೂ ದಿನಗಳ ಕಾಲ ಸಾವಿರಾರು ಭಕ್ತರು ಆತ್ಮಲಿಂಗವನ್ನು ದರ್ಶಿಸುವ ಮೂಲಕ ಶಿವಪ್ಪನ ಕಾರುಣ್ಯಕ್ಕೆ ಭಾಜನರಾಗುವ ಪುಳಕ ಪಡೆಯುತ್ತಾರೆ. ಮಾರ್ಚ್ 15 ರಂದು ಮಹಾರಾಷ್ಟ್ರೋತ್ಸವ.
ಶಿವರಾತ್ರಿ ಆಚರಣೆ ಸುಗಮವಾಗಿ ನಡೆಯುವಂತೆ ಜಿಲ್ಲಾ ಹಾಗೂ ಸ್ಥಳೀಯ ಆಡಳಿತಗಳು ವ್ಯಾಪಕ ಸಿದ್ಧತೆ ನಡೆಸಿವೆ. ಉತ್ತರ ಕನ್ನಡದ ಜಿಲ್ಲಾಧಿಕಾರಿ ನಿಲಯ ಮಿತಾಷ್, ಜಿಲ್ಲಾ ಪೊಲೀಸ್ ವರಿಷ್ಠ ರಮೇಶ್ ಹರಿಹರ್, ಕುಮಟಾ ಅಸಿಸ್ಟೆಂಟ್ ಕಮೀಷನರ್ ವಿಜಯಕುಮಾರಿ ಶೆಣೈ, ತಹಸಿಲ್ದಾರ್ ಆರ್.ಆರ್.ಭಾಗವಾಲ್ ಅವರು, ಮಹಾಬಲೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಡಳಿತ ಮಂಡಳಿಯಾಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ಸವ ಯಶಸ್ವಿಯಾಗಲು ಸಿದ್ಧತೆಗಳ ಉಸ್ತುವಾರಿ ನಡೆಸಿದ್ದಾರೆ.(ಇನ್ಫೋ ವಾರ್ತೆ)
-
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ











Click it and Unblock the Notifications