Shani Amavasya 2025: ಶನಿ ಅಮಾವಾಸ್ಯೆ ದಿನಾಂಕ, ಸಮಯ, ಪೂಜಾ ವಿಧಿ, ಮಹತ್ವ ತಿಳಿಯಿರಿ
ಶನಿ ಅಮಾವಾಸ್ಯೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಶನಿಚಾರಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಚೈತ್ರ ಮಾಸದ ಶನಿ ಅಮಾವಾಸ್ಯೆ ಮಾರ್ಚ್ 29 ರಂದು ಇದೆ. ಈ ದಿನದಂದು ಮಾಡುವ ಪವಿತ್ರ ನದಿ ಸ್ನಾನ ಮತ್ತು ದಾನ ಧರ್ಮಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಮಾಡುವ ದಾನ ಅನೇಕ ಯಜ್ಞಗಳಿಗೆ ಸಿಗುವ ಪುಣ್ಯದ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಅಲ್ಲದೆ ಈ ದಿನದಂದು ಪೂರ್ವಜರ ಶ್ರಾದ್ಧವನ್ನು ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇನ್ನೂ ಅನೇಕ ಜನರು ಅಮಾವಾಸ್ಯೆಯಂದು ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುತ್ತಾರೆ. ಇನ್ನೂ ಶನಿ ಅಮಾವಾಸ್ಯೆಯಂದು ವಿಷ್ಣು ಮತ್ತು ಶನಿ ದೇವರನ್ನು ಪೂಜಿಸುವುದರಿಂದ ಶನಿ ಸಾಡೇಸಾತ್ ಮತ್ತು ಅಷ್ಟಮ ಶನಿಯಿಂದ ಪರಿಹಾರ ಸಿಗಲಿದೆ. ಹಾಗಾದರೆ ಶನಿ ಅಮಾವಾಸ್ಯೆಯ ಶುಭ ಸಮಯ ಮತ್ತು ಪೂಜಾ ವಿಧಾನವನ್ನು ಈಗ ತಿಳಿಯೋಣ.

ಶನಿ ಅಮಾವಾಸ್ಯೆ 2025 ಮುಹೂರ್ತ
ಶನಿ ಅಮಾವಾಸ್ಯೆ 2025 ಮಾರ್ಚ್ 28ರಂದು ಸಂಜೆ 7:55 ರಿಂದ ಮಾರ್ಚ್ 29ರಂದು ಸಂಜೆ 4:27 ರವರೆಗೆ ಇರುತ್ತದೆ.
ಶನಿ ಅಮಾವಾಸ್ಯೆಯ ಪೂಜೆಯ ವಿಧಾನ
*ಶನಿ ಅಮಾವಾಸ್ಯೆಯ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನದ ನೀರಿಗೆ ಸ್ವಲ್ಪ ಗಂಗಾ ನೀರನ್ನು ಸೇರಿಸಿ ಸ್ನಾನ ಮಾಡಿ. ಸಾಧ್ಯವಾದರೆ ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು.
*ಸ್ನಾನದ ನಂತರ ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಿ. ಇದಾದ ನಂತರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.
*ಈ ದಿನ ನೀವು ಉಪವಾಸ ಕೂಡ ಮಾಡಬಹುದು.
*ಮನೆಯಲ್ಲಿ ಶಿವ ಮತ್ತು ಶ್ರೀ ಹರಿ ವಿಷ್ಣುವನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಿದ ನಂತರ, ಶನಿ ದೇವರ ದೇವಸ್ಥಾನಕ್ಕೆ ಹೋಗಿ.
*ದೇವಸ್ಥಾನಕ್ಕೆ ಹೋಗಿ ಶನಿ ದೇವರ ವಿಗ್ರಹಕ್ಕೆ ಎಣ್ಣೆಯನ್ನು ಅರ್ಪಿಸಿ.
*ಈ ದಿನದಂದು ಪೂರ್ವಜರ ಶಾಂತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ಪೂರ್ವಜರಿಗೆ ತರ್ಪಣ ಮಾಡಬೇಕು ಮತ್ತು ಅವರ ಹೆಸರಿನಲ್ಲಿ ದಾನಗಳನ್ನು ಮಾಡಬೇಕು.
*ಅಲ್ಲದೆ ಈ ದಿನದಂದು ಶನಿ ಚಾಲೀಸವನ್ನು ಪಠಿಸುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ.

ಶನಿ ಅಮಾವಾಸ್ಯೆಯ ಮಹತ್ವ
ಶನಿ ಅಮಾವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಪೂರ್ವಜರ ಅಪಾರ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಶನಿ ದೋಷದಿಂದ ಮುಕ್ತಿ ಪಡೆಯಲು ಈ ದಿನ ವಿಶೇಷವಾಗಿದೆ. ಹೀಗಾಗಿ ಈ ದಿನ ಶನಿದೇವನನ್ನು ಪೂಜಿಸುವುದು ತುಂಬಾ ಒಳ್ಳೆಯದು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications