Ramadan 2026: ಈ ಪವಿತ್ರ ತಿಂಗಳ ಸಂಪೂರ್ಣ ಸೆಹ್ರಿ-ಇಫ್ತಾರ್ ವೇಳಾಪಟ್ಟಿ ಇಲ್ಲಿದೆ
ಪವಿತ್ರ ರಂಜಾನ್ (Ramadan 2026) ಮಾಸವು ಅಧಿಕೃತವಾಗಿ ಆರಂಭವಾಗಿದೆ. ಭಾರತದಾದ್ಯಂತ ಹಾಗೂ ಜಗತ್ತಿನೆಲ್ಲೆಡೆ ಮುಸ್ಲಿಂ ಬಾಂಧವರು ಉಪವಾಸ, ಪ್ರಾರ್ಥನೆ ಮತ್ತು ಧ್ಯಾನದ ಈ ಪುಣ್ಯ ಕಾಲವನ್ನು ಅತ್ಯಂತ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಬುಧವಾರ ಸಂಜೆ (ಫೆಬ್ರವರಿ 18) ದೇಶದ ವಿವಿಧೆಡೆ ಪವಿತ್ರ ಚಂದ್ರ ದರ್ಶನವಾಗಿದ್ದು, ಗುರುವಾರದಿಂದ (ಫೆಬ್ರವರಿ 19) ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ಹಾಗೂ ಅತ್ಯಂತ ಪವಿತ್ರ ತಿಂಗಳಾದ ರಂಜಾನ್ ಉಪವಾಸ ವ್ರತ ಶುರುವಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಂಗಳವಾರವೇ ಚಂದ್ರ ದರ್ಶನವಾಗಿದ್ದರಿಂದ, ಅಲ್ಲಿ ಒಂದು ದಿನ ಮುಂಚಿತವಾಗಿಯೇ ಉಪವಾಸ ಆರಂಭವಾಗಿದೆ.
ರಂಜಾನ್ ಉಪವಾಸವು ಕೇವಲ ಅನ್ನ-ನೀರು ತ್ಯಜಿಸುವುದಷ್ಟೇ ಅಲ್ಲ, ಅದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ಸೇವಿಸುವ 'ಸೆಹ್ರಿ' (Sehri) ಊಟದೊಂದಿಗೆ ಉಪವಾಸ ಆರಂಭವಾಗುತ್ತದೆ ಮತ್ತು ಸಂಜೆ ಸೂರ್ಯಾಸ್ತದ ನಂತರ 'ಇಫ್ತಾರ್' (Iftar) ಮೂಲಕ ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ.

ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಮುಹಮ್ಮದ್ (ಪೈಗಂಬರ್) ಅವರಿಗೆ ಪವಿತ್ರ ಕುರಾನ್ ಗ್ರಂಥವು ಇದೇ ರಂಜಾನ್ ತಿಂಗಳಲ್ಲಿಯೇ ಅಸ್ತಿತ್ವಕ್ಕೆ ಬಂದಿತು. ಹೀಗಾಗಿ, ಈ ತಿಂಗಳಿಗೆ ವಿಶೇಷ ಮಹತ್ವವಿದೆ. 'ತಕ್ವಾ' ಅಂದರೆ ದೇವರ ಮೇಲಿನ ಭಯ ಹಾಗೂ ಭಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಕೆಟ್ಟ ಅಭ್ಯಾಸಗಳನ್ನು ದೂರವಿಡುವುದು ಮತ್ತು ಬಡವರಿಗೆ ದಾನ (ಜಕಾತ್) ಮಾಡುವುದು ಈ ತಿಂಗಳ ಪ್ರಮುಖ ಉದ್ದೇಶವಾಗಿದೆ.
ಉಪವಾಸ (ರೋಜಾ) ಇಸ್ಲಾಂ ಧರ್ಮದ ಐದು ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಈ ಒಂದು ತಿಂಗಳ ಕಾಲ ಮುಸ್ಲಿಮರು ಹಗಲಿನಲ್ಲಿ ಅನ್ನ, ನೀರು, ಧೂಮಪಾನ ಸೇರಿದಂತೆ ಯಾವುದೇ ಆಹಾರವನ್ನು ಸೇವಿಸದೆ ಕಠಿಣ ವ್ರತವನ್ನು ಆಚರಿಸುತ್ತಾರೆ. ಉಪವಾಸವು ವ್ಯಕ್ತಿಯಲ್ಲಿ ತಾಳ್ಮೆ, ಸಹನೆ ಮತ್ತು ಬಡವರ ಹಸಿವಿನ ಅರಿವನ್ನು ಮೂಡಿಸುತ್ತದೆ.
ಬೆಂಗಳೂರಿನ ರಂಜಾನ್ ಟೈಮ್ ಟೇಬಲ್ 2026
ಹಿಜ್ರಿ 1447 (2026) ಕ್ಯಾಲೆಂಡರ್ ಪ್ರಕಾರ, ಬೆಂಗಳೂರು ನಗರದ ರಂಜಾನ್ ಸೆಹ್ರಿ ಮತ್ತು ಇಫ್ತಾರ್ ಸಮಯಗಳು ಪ್ರತಿದಿನ ಕೆಲವು ನಿಮಿಷಗಳ ಅಂತರದಲ್ಲಿ ಬದಲಾಗುತ್ತವೆ. ಸಂಪೂರ್ಣ ತಿಂಗಳ ವೇಳಾಪಟ್ಟಿಯ ಪ್ರಮುಖ ಅಂಶಗಳು ಹೀಗಿವೆ:
ಆರಂಭಿಕ ದಿನಗಳು: ಫೆಬ್ರವರಿ 19 ರಂದು ಮೊದಲ ಉಪವಾಸವಿದ್ದು, ಬೆಳಗಿನ ಜಾವ 5:29 ಕ್ಕೆ ಸೆಹ್ರಿ ಮುಕ್ತಾಯವಾಗುತ್ತದೆ. ಸಂಜೆ 6:26 ಕ್ಕೆ ಇಫ್ತಾರ್ ಸಮಯ ನಿಗದಿಯಾಗಿದೆ. ಫೆಬ್ರವರಿ 28 ರಂದು ಸೆಹ್ರಿ ಸಮಯ 5:25 ಕ್ಕೆ ಮತ್ತು ಇಫ್ತಾರ್ 6:28 ಕ್ಕೆ ಇರುತ್ತದೆ.
ಮಾರ್ಚ್ ತಿಂಗಳ ಸಮಯ: ಮಾರ್ಚ್ ತಿಂಗಳಿಗೆ ಕಾಲಿಡುತ್ತಿದ್ದಂತೆ ದಿನಗಳು ಸ್ವಲ್ಪ ದೀರ್ಘವಾಗುತ್ತವೆ. ಮಾರ್ಚ್ 1 ರಂದು ಸೆಹ್ರಿ 5:25 ಹಾಗೂ ಇಫ್ತಾರ್ 6:28 ಕ್ಕೆ ಇದೆ. ಮಾರ್ಚ್ 10 ರಂದು ಸೆಹ್ರಿ ಸಮಯ ಬೆಳಿಗ್ಗೆ 5:10 ಕ್ಕೆ ಮತ್ತು ಇಫ್ತಾರ್ 6:29 ಕ್ಕೆ ಬದಲಾಗುತ್ತದೆ.
ಕೊನೆಯ ದಿನಗಳು: ಮಾರ್ಚ್ 19 ರಂದು ಸಹರಿ 5:14 ಕ್ಕೆ ಮತ್ತು ಇಫ್ತಾರ್ 6:30 ಕ್ಕೆ ನಿಗದಿಯಾಗಿದೆ.
ಈ ಸಮಯಗಳು ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯಿಸುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಭೌಗೋಳಿಕ ಸ್ಥಳವನ್ನು ಅವಲಂಬಿಸಿರುವುದರಿಂದ ದೆಹಲಿ, ಮುಂಬೈ, ಹೈದರಾಬಾದ್ನಂತಹ ಇತರ ನಗರಗಳಲ್ಲಿ ಸಮಯ ಭಿನ್ನವಾಗಿರುತ್ತದೆ.
ಉಪವಾಸ ಆಚರಿಸುವವರು ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ದಿನವಿಡೀ ನೀರು ಕುಡಿಯದೆ ಇರುವುದರಿಂದ ನಿರ್ಜಲೀಕರಣ (Dehydration) ಉಂಟಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಹಣ್ಣುಗಳು, ವಿಶೇಷವಾಗಿ ಖರ್ಜೂರ ಮತ್ತು ಸಾಕಷ್ಟು ನೀರನ್ನು ಸೇವಿಸುವುದು ವೈಜ್ಞಾನಿಕವಾಗಿಯೂ ಒಳಿತಾಗಿದೆ. ಸಂಜೆ ಇಫ್ತಾರ್ ಸಮಯದಲ್ಲಿ ಖರ್ಜೂರ ಸೇವಿಸುವ ಮೂಲಕ ಉಪವಾಸ ಬಿಡುವುದು ಪ್ರವಾದಿಯವರ ಸಂಪ್ರದಾಯವಾಗಿದೆ.
ರಾತ್ರಿಯ ಹೊತ್ತು ನಡೆಯುವ ವಿಶೇಷ ಪ್ರಾರ್ಥನೆಯಾದ 'ತರಾವೀಹ್' (Taraweeh) ನಮಾಜ್ನಲ್ಲಿ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಒಗ್ಗೂಡಿ ಭಾಗವಹಿಸುತ್ತಾರೆ. ಜೊತೆಗೆ, ಸಮಾಜದ ಬಡವರು ಹಾಗೂ ನಿರ್ಗತಿಕರಿಗೆ ಕಡ್ಡಾಯವಾಗಿ ದಾನ ಮಾಡುವ 'ಜಕಾತ್' (Zakat) ವ್ಯವಸ್ಥೆಯು ರಂಜಾನ್ ತಿಂಗಳ ಮತ್ತೊಂದು ವಿಶೇಷತೆಯಾಗಿದೆ. ಸುಮಾರು 29 ರಿಂದ 30 ದಿನಗಳ ಕಾಲ ನಡೆಯುವ ಈ ಕಠಿಣ ಉಪವಾಸ ವ್ರತವು 'ಈದ್ ಅಲ್-ಫಿತ್ರ್' (Eid al-Fitr) ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಚಂದ್ರನ ದರ್ಶನವನ್ನು ಅವಲಂಬಿಸಿ ಈ ವರ್ಷ ಮಾರ್ಚ್ 20 ಅಥವಾ 21 ರಂದು ಈದ್ ಹಬ್ಬವನ್ನು ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸುವ ನಿರೀಕ್ಷೆಯಿದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ













Click it and Unblock the Notifications