Navratri 2024 Day 7: ನವರಾತ್ರಿ 7ನೇ ದಿನ ಅ.9, ಕಾಳರಾತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರ
ನವರಾತ್ರಿ ಹಬ್ಬವನ್ನು ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ಆಚರಿಸಲಾಗುತ್ತದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ಹತ್ತನೆ ದಿನ ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗೆ ಅಕ್ಟೋಬರ್ 9ರಂದು ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ.
ಕಾಳರಾತ್ರಿ ದೇವಿಯ ವಾಹನ ಕತ್ತೆಯಾಗಿದ್ದು, ಈ ದಿನ ಕಾಳರಾತ್ರಿಯನ್ನು ವಿಧಿವತ್ತಾಗಿ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಜೀವನದಲ್ಲಿ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಅಕ್ಟೋಬರ್ 9ರಂದು ಕಾಳರಾತ್ರಿ ಪೂಜಾ ಸಮಯ, ಪೂಜಾ ವಿಧಾನ, ಪರಿಹಾರ, ಕಥೆ ಎಲ್ಲವನ್ನೂ ತಿಳಿಯೋಣ.

ಪೂಜಾ ವಿಧಾನ
ಕಾಳಿ ದೇವಿಯನ್ನು ಪೂಜಿಸುವ ಭಕ್ತರು ತುಂಬಾ ಜಾಗರೂಕರಾಗಿ ಪೂಜಾ ನಿಯಮಗಳನ್ನು ಪಾಲಿಸಬೇಕು. ಕೆಂಪು ಹೂವು ಅಂದರೆ ಕಾಳರಾತ್ರಿ ದೇವಿಗೆ ತುಂಬಾ ಇಷ್ಟ. ಹೀಗಾಗಿ ಕೆಂಪು ಹೂವನ್ನು ಪೂಜೆಗೆ ಬಳಸುವುದು ಉತ್ತಮ ಫಲವನ್ನು ನೀಡುತ್ತದೆ.
*ನವರಾತ್ರಿ ವ್ರತ ಮಾಡುವ ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಚಗೊಳಿಸಿ.
* ನಂತರ ಕಾಳರಾತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಹೂವು, ಹಣ್ಣು, ಕರ್ಪೂರ, ಧೂಪ, ಅಲಂಕಾರಿಕ ವಸ್ತುಗಳು, ತೆಂಗಿನಕಾಯಿ, ಎಲೆ, ಅಡಿಕೆ, ಸಿಹಿ ನೈವೇದ್ಯ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡಬೇಕು.
* ಕಾಳಿಗೆ ದೀಪವನ್ನು ಹಚ್ಚಿ ಮಂತ್ರಗಳನ್ನು ಪಠಿಸುತ್ತಾ ಆರಾಧಿಸಬೇಕು.
* ದಿನವಿಡೀ ಉಪವಾಸ ಮಾಡುವವರು ಮಂತ್ರಗಳನ್ನು ಪಠಿಸುತ್ತಾ ಕಾಳಿಯನ್ನು ನೆನೆದು ಪೂಜಿಸುವುದರಿಂದ ದುಷ್ಟಶಕ್ತಿಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಅಂದಹಾಗೆ ಈ ಕಾಳರಾತ್ರಿ ದೇವಿಯನ್ನು ಶನಿ ಹಾಗೂ ರಾತ್ರಿಯನ್ನು ನಿಯಂತ್ರಿಸುವ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಪೂಜೆಯಿಂದ ದುಷ್ಟ ಶಕ್ತಿ ನಿವಾರಣೆಯಾಗಿ ಮನೆಯಲ್ಲಿ ಅಭಯ ನೆಲೆಸಲಿದೆ.
ಕಾಳರಾತ್ರಿ ಯಾರು?
ಶುಂಭ-ನಿಶುಂಭ ಹಾಗೂ ರಕ್ತಬೀಜಾಸುರ ಎಂಬ ರಾಕ್ಷಸರು ಮೂರು ಲೋಕದಲ್ಲಿ ತಮ್ಮ ಭಯವನ್ನು ಹುಟ್ಟಿಸಲು ಆರಂಭಿಸಿದರು. ಆಗ ಜನ ಶಿವನ ಬಳಿ ಬಂದು ರಾಕ್ಷಸರನ್ನು ಸಂಹಾರ ಮಾಡಲು ಬೇಡಿಕೊಂಡರು. ಆಗ ಶಿವ ಈ ರಾಕ್ಷಸರನ್ನು ಸಂಹರಿಸಲು ಪಾರ್ವತಿಗೆ ಹೇಳಿದನು. ಆಗ ಪಾರ್ವತಿ ಶುಂಭ-ನಿಶುಂಭ ಎಂಬ ರಾಕ್ಷಸರನ್ನು ಕೊಂದಳು. ಆದರೆ ರಕ್ತಬೀಜಾಸುರನನ್ನು ದುರ್ಗಾಮಾತೆ ಕೊಂದ ಬಳಿಕ ಆತನ ದೇಹದಿಂದ ಹೊರ ಚಿಮ್ಮಿದ ರಕ್ತದಿಂದ ಲಕ್ಷಾಂತರ ರಕ್ತಬೀಜಾಸುರರು ಹುಟ್ಟಿಕೊಂಡರು.
ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿ ರಚಿಸಿದಳು. ಆಗ ಕಾಳರಾತ್ರಿ ರಕ್ತಬೀಜಾಸುರನನ್ನು ಕೊಂದಳು. ಆತನ ದೇಹದಿಂದ ಹೊರಬಂದ ರಕ್ತವನ್ನು ತನ್ನ ಬಾಯಲ್ಲಿ ಇಟ್ಟುಕೊಂಡಳು.
ಕಾಳರಾತ್ರಿ ಸ್ವರೂಪ..
ಕಾಳರಾತ್ರಿ ನೋಡಲು ಭಯಾನಕವಾಗಿರುತ್ತಾಳೆ. ಕಾಳರಾತ್ರಿಯ ದೇಹ ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಈಕೆಯ ಕೂದಲು ಸಂಪೂರ್ಣವಾಗಿ ಹರಡಿಕೊಂಡು ಮೂರು ಕಣ್ಣುಗಳು ಇರುತ್ತವೆ. ಕರಳಿನಲ್ಲಿ ಮುಂಡಗಳ ಜಪಮಾಲೆಯನ್ನು ಕಾಳರಾತ್ರಿ ದೇವಿ ಧರಿಸಿರುತ್ತಾಳೆ. ಆಕೆಯ ಉಸಿರಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುತ್ತದೆ.
ಬಲಗೈಯನ್ನು ಎತ್ತಿ ವರ ನೀಡುವ ಈಕೆಯ ಮತ್ತೊಂದು ಕೈ ಅಭಯ ಮುದ್ರೆಯಲ್ಲಿದೆ. ಇನ್ನೊಂದು ಕೈಯಲ್ಲಿ ಕಬ್ಬಿಣದ ಕತ್ತಿ, ಇನ್ನೊಂದರಲ್ಲಿ ಕಬ್ಬಿಣದ ಕಠಾರಿ ಹಿಡಿದಿದ್ದಾಳೆ. ಕಾಳರಾತ್ರಿಯನ್ನು ಪೂಜಿಸುವುದರಿಂದ ಜೀವನದ ಕಷ್ಟಗಳು ದೂರವಾಗುತ್ತವೆ. ಕಾಳರಾತ್ರಿ ದೇಔಇಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ನೆಲೆಸಲಿದೆ.
ಶುಭಂಕರಿ, ಕಾಳಿ, ಚಂಡಿ, ಧೂಮ್ರವರ್ಣ, ಚಾಮುಂಡಾ ಎಂದು ಕರೆಯಲಾಗುತ್ತದೆ. ಕಾಳಿ ಮಾತೆ ದೆವ್ವ, ಪ್ರೇತ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತಾಳೆಂದು ಪುರಾಣಗಳು ಹೇಳುತ್ತವೆ.
ಕಾಳರಾತ್ರಿ ದೇವಿ ಮಂತ್ರ
ಓಂ ದೇವೀ ಕಾಲರಾತ್ರ್ಯೈ ನಮ:
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications