Get Updates
Get notified of breaking news, exclusive insights, and must-see stories!

Navratri 2024 Day 6: ನವರಾತ್ರಿ 6ನೇ ದಿನ ಅ.8, ಕಾತ್ಯಾಯನಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

ಮಾ ದುರ್ಗೆಯ 6ನೇ ಶಕ್ತಿ ಕಾತ್ಯಾಯನಿ. ನವರಾತ್ರಿಯ ಆರನೇ ದಿನವಾದ 8 ಅಕ್ಟೋಬರ್ 2024 ರಂದು ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿ ಕಾತ್ಯಾಯನಿಯ ಆರಾಧನೆಯಿಂದ ಕಂಕಣಭಾಗ್ಯ ಮತ್ತು ಬಯಸಿದ ಜೀವನ ಸಂಗಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಾದರೆ ಶಾರದೀಯ ನವರಾತ್ರಿಯ ಆರನೇ ದಿನದಂದು ಮಾ ಕಾತ್ಯಾನಿಯನ್ನು ಪೂಜಿಸಲು ಮಂಗಳಕರ ಸಮಯ, ವಿಧಾನ, ಪರಿಹಾರವನ್ನು ತಿಳಿಯೋಣ.

ತಾಯಿ ಕಾತ್ಯಾಯನಿ ಯಾರು?

ದಂತಕಥೆಯ ಪ್ರಕಾರ, ಕಾತ್ಯಾ ಎಂಬ ಪ್ರಸಿದ್ಧ ಋಷಿ ಇದ್ದನು. ಜಗತ್ಪ್ರಸಿದ್ಧ ಮಹರ್ಷಿ ಕಾತ್ಯಾಯನನು ಕಾತ್ಯನ ಕುಲದಲ್ಲಿ ಜನಿಸಿದನು. ರಾಕ್ಷಸ ಮಹಿಷಾಸುರನ ದೌರ್ಜನ್ಯವು ಭೂಮಿಯ ಮೇಲೆ ಹೆಚ್ಚಾಗಿರುತ್ತದೆ.ದೇವತೆಗಳು ರಾಕ್ಷಸ ಮಹಿಷಾಸುರ ಮತ್ತು ಅವನ ದುಷ್ಕೃತ್ಯಗಳ ಮೇಲೆ ಕೋಪಗೊಂಡು ತಮ್ಮ ಸಂಯೋಜಿತ ಶಕ್ತಿಯಿಂದ ಮಾ ಕಾತ್ಯಾಯನಿಯನ್ನು ಒಟ್ಟಾಗಿ ಸೇರಿಕೊಂಡರು. ತಮ್ಮ ಕೋಪವನ್ನು ಶಕ್ತಿಯ ಕಿರಣಗಳಾಗಿ ಗೋಚರಿಸುವಂತೆ ಮಾಡಿದರು. ಅದು ಕಾತ್ಯಾಯನ ಋಷಿಯ ಆಶ್ರಮದಲ್ಲಿ ಗಟ್ಟಿಯಾಗುತ್ತದೆ. ನಂತರ ಅದಕ್ಕೆ ಅವರಿಂದ ಸರಿಯಾದ ರೂಪವನ್ನು ನೀಡಲಾಗುತ್ತದೆ. ಆದ್ದರಿಂದ ಮಾ ದುರ್ಗೆಯ ಅವತಾರವನ್ನುಕಾತ್ಯಾಯನಿ ಅಥವಾ ಕಾತ್ಯಾಯನನ ಮಗಳು ಎಂದುಯ ಕರೆಯಲಾಗುತ್ತದೆ.

Navratri 2024 Day 6 October 8 Maa Katyayani Puja Vidhi Timings Mantra Vrat significance

ಸಾಕ್ಷಾತ್ ಪರಶಿವನು ಮಹಿಷಾಸುರನನ್ನು ಸಂಹರಿಸಲು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ವಿಷ್ಣು ಸುದರ್ಶನ ಚರಕವನ್ನು, ಅಂಗಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವ ಗುಡುಗು, ಬ್ರಹ್ಮದೇವ ನೀರಿನ ಪಾತ್ರೆಯೊಂದಿಗೆ ರುದ್ರಾಕ್ಷ ಇತ್ಯಾದಿಗಳನ್ನು ನೀಡಲಾಯಿತು. ಬಳಿಕ ಕಾತ್ಯಾಯನಿ ರಾಕ್ಷಸನನ್ನು ಸಂಹರಿಸಿದಳು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂವರೂ ಸೇರಿ ಮಹಿಷಾಸುರನನ್ನು ನಾಶಮಾಡಲು ದೇವತೆಯನ್ನು ಸೃಷ್ಟಿಸಿದರು. ಋಷಿ ಕಾತ್ಯಾಯನನ ಸ್ಥಾನದಲ್ಲಿ ಜನಿಸಿದ ಕಾರಣ ಆಕೆಯನ್ನು ಕಾತ್ಯಾಯನಿ ಎಂದು ಕರೆಯುತ್ತಾರೆ.

ಕಾತ್ಯಾಯನಿ ಸ್ವರೂಪ

ಕಾತ್ಯಾಯನಿ ದೇವತೆಗಳ ಸಂಯೋಜಿತ ಶಕ್ತಿಗಳಿಂದ ಹುಟ್ಟಿದ ದೇವತೆ. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯನಿ ದೇವಿಯು ಮಹಿಷಾಶುರಾ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಎಡಗೈಯಲ್ಲಿ ಖಡ್ಗ ಮತ್ತು ಕಮಲದ ಹೂವನ್ನು ಹಿಡಿದು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಹಿಡಿದುಕೊಂಡು ಸಿಂಹದ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಕಾತ್ಯಾಯನಿ ಪೂಜಾ ವಿಧಿ

*ನವರಾತ್ರಿಯ ಆರನೇ ದಿನದಂದು, ಕಾತ್ಯಾಯನಿ ದೇವಿಯನ್ನು ಪೂಜಿಸಲು ಮೊದಲು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ.

*ನಂತರ ಘಟಸ್ಥಾಪನೆ ಮಾಡುವ ಸ್ಥಳದಲ್ಲಿ ಅಥವಾ ಮನೆಯ ದೇವರ ಮನೆಯಲ್ಲಿ ಮಾತೃದೇವತೆಯ ವಿಗ್ರಹಕ್ಕೆ ಕೆಂಪು ಹೂವುಗಳನ್ನು ಅರ್ಪಿಸಿ. ಈ ದಿನ ಪೂಜೆಯಲ್ಲಿ ಜೇನುತುಪ್ಪವನ್ನು ಬಳಸಿ. ಈ ಜೇನುತುಪ್ಪದಿಂದ ಮಾಡಿದ ಪ್ರಸಾದವನ್ನು ಸ್ವೀಕರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಾ ಕಾತ್ಯಾಯನಿಯ ಕವಚ ಸ್ತೋತ್ರವನ್ನು ಪಠಿಸಿ -

ಕಾತ್ಯಾಯನಮುಖ್ ಪಾತು ನ ಸ್ವಾಹಸ್ವರೂಪಿಣೀ ।

ಲಾಲತೇ ವಿಜಯಾ ಪಟು ಮಾಲಿನೀ ನಿತ್ಯ ಸುಂದರೀ ॥

ಕಲ್ಯಾಣೀ ಹೃದಯಂ ಪಾತು ಜಯ ಭಾಗಮಾಲಿನೀ ।

ಓಂ ಕಾತ್ಯಾಯಿನಿ ದೇವ್ಯೇ ನಮಃ - ಮದುವೆ ವಿಳಂಬವಾದರೆ ಈ ಮಂತ್ರವನ್ನು ಪಠಿಸಿ.

ನವರಾತ್ರಿಯ 6ನೇ ದಿನದ ಪರಿಹಾರ

ಇಂದು, ದಿನದ ಯಾವುದೇ ಸಮಯದಲ್ಲಿ ತೆಂಗಿನಕಾಯಿ ಮತ್ತು ಅದರೊಂದಿಗೆ ಕೆಂಪು, ಹಳದಿ ಮತ್ತು ಬಿಳಿ ಹೂವನ್ನು ತೆಗೆದುಕೊಂಡು ಮಾತೃದೇವತೆಗೆ ಅರ್ಪಿಸಿ. ಇದಾದ ನಂತರ ನವಮಿ ತಿಥಿಯ ಸಂಜೆ ನದಿಯಲ್ಲಿ ಹೂವುಗಳನ್ನು ಬಿಡಿ. ತೆಂಗಿನಕಾಯಿಗೆ ಕೆಂಪು ಬಟ್ಟೆಯನ್ನು ಸುತ್ತಿ ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+