Get Updates
Get notified of breaking news, exclusive insights, and must-see stories!

Makar Sankranti 2024: ಮಕರ ಸಂಕ್ರಾಂತಿ ಆಚರಣೆ ಜನವರಿ 14? 15? ಗೊಂದಲಗಳಿಗೆ ಪರಿಹಾರ ಇಲ್ಲಿದೆ

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬದಂದು ಗಂಗಾ ಸ್ನಾನ ಮತ್ತು ದಾನ ಮಾಡುವುದು ವಿಶೇಷತೆಯನ್ನು ಹೊಂದಿದೆ. ಈ ದಿನ ಸೂರ್ಯನು ಉತ್ತರಾಯಣನಾಗುತ್ತಾನೆ. ಉತ್ತರಾರ್ಧಗೋಳವು ಸೂರ್ಯನ ಕಡೆಗೆ ತಿರುಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.

ಈ ಹಬ್ಬವನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ನಂಬಿಕೆಗಳ ಪ್ರಕಾರ ಆಚರಿಸಲಾಗುತ್ತದೆ. ಆದರೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬವನ್ನು ಯಾವಾಗ ಆಚರಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹಾಗಾದರೆ ಮಕರ ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ಎನ್ನುವ ಬಗ್ಗೆ ತಿಳಿಯೋಣ.

Makar Sankranti 2024 Date, Puja Vidhi, History, Puja Samagri, Mantra and Significance in Kannada

ಋತುವಿನಲ್ಲಿ ಬದಲಾವಣೆ

ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯನ ಆಧಾರದ ಮೇಲೆ ಲೆಕ್ಕಹಾಕುವ ಮೂಲಕ ಆಚರಿಸಲಾಗುತ್ತದೆ. ಈ ದಿನದಿಂದಲೇ ಋತುಗಳು ಬದಲಾಗತೊಡಗುತ್ತವೆ. ದಿನಗಳು ಉದ್ದವಾಗಲು ಪ್ರಾರಂಭಿಸುತ್ತವೆ. ಅಂದರೆ ರಾತ್ರಿಗಳು ಕಡಿಮೆಯಾಗುತ್ತವೆ. ಹಗಲು ಅಧಿಕವಾಗುತ್ತವೆ. ಅಂದರೆ ತಡವಾಗಿ ರಾತ್ರಿಯಾಗುತ್ತದೆ.

2024 ರಲ್ಲಿ ಮಕರ ಸಂಕ್ರಾಂತಿ ಯಾವಾಗ?

2024 ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವ ಧನು ರಾಶಿಯಿಂದ ಹೊರಟು ಮಧ್ಯರಾತ್ರಿ 02:54ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದ ಶುಭ ಮುಹೂರ್ತವು ಈ ಕೆಳಗಿನಂತಿದೆ. ಈ ಶುಭ ಮುಹೂರ್ತಗಳಲ್ಲಿ ಪೂಜೆ ಮತ್ತು ದಾನಗಳನ್ನು ಮಾಡುವುದು ಅತ್ಯಂತ ಮಂಗಳಕರವಾಗಿರುತ್ತದೆ.

Makar Sankranti 2024 Date, Puja Vidhi, History, Puja Samagri, Mantra and Significance in Kannada

ಮಕರ ಸಂಕ್ರಾಂತಿ ಪುಣ್ಯಕಾಲ

ಜನವರಿ 15ರಂದು ಬೆಳಿಗ್ಗೆ 07:15 ರಿಂದ ಸಂಜೆ 06:21 ರವರೆಗೆ

ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ

ಜನವರಿ 15ರಂದು ಬೆಳಿಗ್ಗೆ 07:15 ರಿಂದ ಬೆಳಿಗ್ಗೆ 09:06 ರವರೆಗೆ ಇರುತ್ತದೆ.

ಮಕರ ಸಂಕ್ರಾಂತಿಯ ಮಹತ್ವ

ಹಿಂದೂ ವೇದಗಳಲ್ಲಿ ಮಕರ ಸಂಕ್ರಾಂತಿಯನ್ನು ಮಹಾಪರ್ವ ಎಂದೂ ಕರೆಯುತ್ತಾರೆ. ಈ ದಿನ ಗಂಗಾಸ್ನಾನ ಮಾಡುವುದರಿಂದ ಸಕಲ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಹಾಗೂ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಸಂಕ್ರಾಂತಿಯ ದಿನದಂದು ದಾನ, ತಪಸ್ಸು ಮತ್ತು ಜಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ.

ಮಕರ ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳು ಮತ್ತು ಗಂಗಾಜಲವನ್ನು ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ಜಾತಕದ ಗ್ರಹದೋಷಗಳು ದೂರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಇದಲ್ಲದೇ ಸೂರ್ಯದೇವನ ಆಶೀರ್ವಾದವೂ ಸಿಗುತ್ತದೆ. ಮಕರ ಸಂಕ್ರಾಂತಿಯ ದಿನ ಸೂರ್ಯನು ಉತ್ತರದ ಕಡೆಗೆ ಚಲಿಸುತ್ತಾನೆ.

ವಿಶೇಷವಾಗಿ ಈ ದಿನ ಸೂರ್ಯನನ್ನು ಪೂಜಿಸುವುದರಿಂದ ಗೌರವ, ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ. ಜೊತೆಗೆ ಬೆಲ್ಲ, ಅನ್ನ, ವಸ್ತ್ರ, ಕಪ್ಪು ಎಳ್ಳು, ಖಿಚಡಿ ಇತ್ಯಾದಿಗಳನ್ನು ದಾನ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಮಂಗಳಕರ ಸಮಯದಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ.

ವಿಶೇಷತೆ

ಮಕರ ಸಂಕ್ರಾಂತಿಯ ಹಬ್ಬವು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವಾಗಿದೆ ಎನ್ನುವ ಉಲ್ಲೇಖವಿದೆ. ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ. ಸಂತರು ಮತ್ತು ಋಷಿಗಳ ಪ್ರಕಾರ, ಜೀವಿಗಳ ಆತ್ಮವು ಮಕರ ಸಂಕ್ರಾಂತಿಯ ಪರಿಣಾಮದಿಂದ ಶುದ್ಧವಾಗುತ್ತದೆ. ಪರಿಹರಿಸುವ ಶಕ್ತಿ ಹೆಚ್ಚಾಗುತ್ತದೆ. ಜ್ಞಾನದ ನರಗಳು ಅಭಿವೃದ್ಧಿಗೊಳ್ಳುತ್ತವೆ. ಹೀಗೆ ಜೀವಿಗಳಲ್ಲಿ ಪ್ರಜ್ಞೆಯನ್ನು ಬೆಳೆಸುವ ಹಬ್ಬವೇ ಮಕರ ಸಂಕ್ರಾಂತಿಯಾಗಿದೆ.

ಆಚರಣೆ

ಹಾಗೆಯೇ ಮಕರ ಸಂಕ್ರಾಂತಿಯ ಹಬ್ಬಕ್ಕೆ ಕರ್ನಾಟಕ ರಾಜ್ಯವು ಈಗಿನಿಂದಲೇ ಸಜ್ಜುಗೊಳ್ಳುತ್ತಿದೆ. ಜೊತೆಗೆ "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದರ ಅರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು. ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ, ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಸಂಪ್ರದಾಯದಲ್ಲಿ ಸಂತೋಷವನ್ನು ಹಂಚಿಕೊಳ್ಳುವ ಗುಣಗಳನ್ನು ಕಾಣಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+