ದೇವಿ ಸರಸ್ವತಿ ಆರಾಧನೆಯ ವಸಂತ ಪಂಚಮಿಗೆ ಶುಭ ಹಾರೈಕೆ
ಮಾಘ ಮಾಸದ ಐದನೇ ದಿನವಾದ ಈ ದಿನ(ಜ.22)ವನ್ನು ಹಿಂದುಗಳು ವಸಂತ ಪಂಚಮಿ ಎಂದು ಆಚರಿಸಿ ದೇವಿ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ.
ದೇಶದ ವಿವಿಧ ಕಡೆಗಳಲ್ಲಿ ಇಂದು ಆಚರಣೆಗೊಳ್ಳುತ್ತಿರುವ ಈ ಹಬ್ಬದಲ್ಲಿ ದೇವಿ ಸರಸ್ವತಿ, ಸರ್ವರಿಗೂ ವಿದ್ಯೆ-ಬುದ್ಧಿ ನೀಡಲಿ ಎಂದು ಬೇಡಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ಹಬ್ಬವನ್ನು ಬಾಲಿಯಲ್ಲಿ ಮತ್ತು ಇಂಡೋನೇಶ್ಯಾದಲ್ಲಿ ಹಿಂದುಗಳು ಆಚರಿಸುತ್ತಾರೆ.
ಚಳಿಗಾಲ ಮುಗಿದು,ಬೇಸಿಗೆಯ ಆರಂಭವನ್ನು ಇದು ಸೂಚಿಸುತ್ತದೆ. ವಿದ್ಯೆ, ಬುದ್ಧಿಯನ್ನು ದಯಪಾಲಿಸುವ ಸರಸ್ವತಿಗೆ ವಂದನೆ ಅರ್ಪಿಸುವ ಈ ಹಬ್ಬದಂದು, ಸರಸ್ವತಿಯ ದೇವಾಲಯಗಳಿಗೆ ತೆರಳಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ಸಂಭ್ರಮದ ಸಾಂಪ್ರದಾಯಿಕ ಬಸಂತ ಪಂಚಮಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ವಸಂತ ಪಂಚಮಿಗೆ ಸಂಬಂಧಿಸಿದ ಕೆಲವು ಟ್ವೀಟ್ ಗಳು ಇಲ್ಲಿವೆ.
|
ನರೇಂದ್ರ ಮೋದಿ ಶುಭಹಾರೈಕೆ
ವಸಂತ ಪಂಚಮಿಯ ಶುಭಾಶಯಗಳು. ನಮ್ಮ ಸಮಾಜ ಮತ್ತಷ್ಟು ನೆಮ್ಮದಿಯಿಂದ, ಶಾಂತಿಯಿಂದ ಇರಲಿ ಎಂದು ಈ ಹಬ್ಬದಂದು ಹಾರೈಸುತ್ತೇನೆ. ದೇವಿ ಸರಸ್ವತಿಯು ನಮಗೆ ಜ್ಞಾನವನ್ನು ನೀಡಿ ಆಶಿರ್ವದಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
| Array |
ಜ್ಞಾನ ಮತ್ತು ಪಾಂಡಿತ್ಯ ನೀಡಲಿ
ದೇವಿ ಸರಸ್ವತಿ ಎಲ್ಲರಿಗೂ ಜ್ಞಾನ ಮತ್ತು ಪಾಂಡಿತ್ಯವನ್ನು ನೀಡಲಿ. ವಸಂತ ಪಂಚಮಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.
| Array |
ಮರಳಲ್ಲಿ ವಸಂತ ಪಂಚಮಿಯ ಶುಭಾಶಯ
ಮರಳಿನ ಮೂಲಕ ತಾಯಿ ಸರಸ್ವತಿಯ ಚಿತ್ರವನ್ನು ನಿರ್ಮಿಸಿ, ವಸಂತ ಪಂಚಮಿಗೆ ತಮ್ಮದೇ ಆದ ರೀತಿಯಲ್ಲಿ ಶುಭಹಾರೈಸಿದ್ದಾರೆ ಮರಳು ಶಿಲ್ಪಿ ಮಾನಸ್ ಸಾಹೂ. ಈ ಚಿತ್ರವನ್ನು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ ದೇವಾಶಿಶ್ ಕುಮಾರ್.
| Array |
ವಸಂತನ ಬಣ್ಣಗಳಂತೆ ಬದುಕು ಕಂಗೊಳಿಸಲಿ
ವಸಂತನ ಸುಂದರ ಬಣ್ಣಗಳೊಂದಿಗೆ ನಿಮ್ಮ ಬದುಕೂ ಕಂಗೊಳಿಸಲಿ. ದೇವಿ ಸರಸ್ವತಿ ನಿಮಗೆ ಸದಾ ಜ್ಞಾನ ಮತ್ತು ಪಾಂಡಿತ್ಯಗಳಿಂದ ಆಶೀರ್ವದಿಸಲಿ. ವಸಂತ ಪಂಚಮಿಯ ಶುಭಾಶಯಗಳು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications