ದೇವಿ ಸರಸ್ವತಿ ಆರಾಧನೆಯ ವಸಂತ ಪಂಚಮಿಗೆ ಶುಭ ಹಾರೈಕೆ
ಮಾಘ ಮಾಸದ ಐದನೇ ದಿನವಾದ ಈ ದಿನ(ಜ.22)ವನ್ನು ಹಿಂದುಗಳು ವಸಂತ ಪಂಚಮಿ ಎಂದು ಆಚರಿಸಿ ದೇವಿ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ.
ದೇಶದ ವಿವಿಧ ಕಡೆಗಳಲ್ಲಿ ಇಂದು ಆಚರಣೆಗೊಳ್ಳುತ್ತಿರುವ ಈ ಹಬ್ಬದಲ್ಲಿ ದೇವಿ ಸರಸ್ವತಿ, ಸರ್ವರಿಗೂ ವಿದ್ಯೆ-ಬುದ್ಧಿ ನೀಡಲಿ ಎಂದು ಬೇಡಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ಹಬ್ಬವನ್ನು ಬಾಲಿಯಲ್ಲಿ ಮತ್ತು ಇಂಡೋನೇಶ್ಯಾದಲ್ಲಿ ಹಿಂದುಗಳು ಆಚರಿಸುತ್ತಾರೆ.
ಚಳಿಗಾಲ ಮುಗಿದು,ಬೇಸಿಗೆಯ ಆರಂಭವನ್ನು ಇದು ಸೂಚಿಸುತ್ತದೆ. ವಿದ್ಯೆ, ಬುದ್ಧಿಯನ್ನು ದಯಪಾಲಿಸುವ ಸರಸ್ವತಿಗೆ ವಂದನೆ ಅರ್ಪಿಸುವ ಈ ಹಬ್ಬದಂದು, ಸರಸ್ವತಿಯ ದೇವಾಲಯಗಳಿಗೆ ತೆರಳಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ಸಂಭ್ರಮದ ಸಾಂಪ್ರದಾಯಿಕ ಬಸಂತ ಪಂಚಮಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ವಸಂತ ಪಂಚಮಿಗೆ ಸಂಬಂಧಿಸಿದ ಕೆಲವು ಟ್ವೀಟ್ ಗಳು ಇಲ್ಲಿವೆ.
|
ನರೇಂದ್ರ ಮೋದಿ ಶುಭಹಾರೈಕೆ
ವಸಂತ ಪಂಚಮಿಯ ಶುಭಾಶಯಗಳು. ನಮ್ಮ ಸಮಾಜ ಮತ್ತಷ್ಟು ನೆಮ್ಮದಿಯಿಂದ, ಶಾಂತಿಯಿಂದ ಇರಲಿ ಎಂದು ಈ ಹಬ್ಬದಂದು ಹಾರೈಸುತ್ತೇನೆ. ದೇವಿ ಸರಸ್ವತಿಯು ನಮಗೆ ಜ್ಞಾನವನ್ನು ನೀಡಿ ಆಶಿರ್ವದಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
| Array |
ಜ್ಞಾನ ಮತ್ತು ಪಾಂಡಿತ್ಯ ನೀಡಲಿ
ದೇವಿ ಸರಸ್ವತಿ ಎಲ್ಲರಿಗೂ ಜ್ಞಾನ ಮತ್ತು ಪಾಂಡಿತ್ಯವನ್ನು ನೀಡಲಿ. ವಸಂತ ಪಂಚಮಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.
| Array |
ಮರಳಲ್ಲಿ ವಸಂತ ಪಂಚಮಿಯ ಶುಭಾಶಯ
ಮರಳಿನ ಮೂಲಕ ತಾಯಿ ಸರಸ್ವತಿಯ ಚಿತ್ರವನ್ನು ನಿರ್ಮಿಸಿ, ವಸಂತ ಪಂಚಮಿಗೆ ತಮ್ಮದೇ ಆದ ರೀತಿಯಲ್ಲಿ ಶುಭಹಾರೈಸಿದ್ದಾರೆ ಮರಳು ಶಿಲ್ಪಿ ಮಾನಸ್ ಸಾಹೂ. ಈ ಚಿತ್ರವನ್ನು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ ದೇವಾಶಿಶ್ ಕುಮಾರ್.
| Array |
ವಸಂತನ ಬಣ್ಣಗಳಂತೆ ಬದುಕು ಕಂಗೊಳಿಸಲಿ
ವಸಂತನ ಸುಂದರ ಬಣ್ಣಗಳೊಂದಿಗೆ ನಿಮ್ಮ ಬದುಕೂ ಕಂಗೊಳಿಸಲಿ. ದೇವಿ ಸರಸ್ವತಿ ನಿಮಗೆ ಸದಾ ಜ್ಞಾನ ಮತ್ತು ಪಾಂಡಿತ್ಯಗಳಿಂದ ಆಶೀರ್ವದಿಸಲಿ. ವಸಂತ ಪಂಚಮಿಯ ಶುಭಾಶಯಗಳು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications