ದೇವಿ ಸರಸ್ವತಿ ಆರಾಧನೆಯ ವಸಂತ ಪಂಚಮಿಗೆ ಶುಭ ಹಾರೈಕೆ
ಮಾಘ ಮಾಸದ ಐದನೇ ದಿನವಾದ ಈ ದಿನ(ಜ.22)ವನ್ನು ಹಿಂದುಗಳು ವಸಂತ ಪಂಚಮಿ ಎಂದು ಆಚರಿಸಿ ದೇವಿ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ.
ದೇಶದ ವಿವಿಧ ಕಡೆಗಳಲ್ಲಿ ಇಂದು ಆಚರಣೆಗೊಳ್ಳುತ್ತಿರುವ ಈ ಹಬ್ಬದಲ್ಲಿ ದೇವಿ ಸರಸ್ವತಿ, ಸರ್ವರಿಗೂ ವಿದ್ಯೆ-ಬುದ್ಧಿ ನೀಡಲಿ ಎಂದು ಬೇಡಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ಹಬ್ಬವನ್ನು ಬಾಲಿಯಲ್ಲಿ ಮತ್ತು ಇಂಡೋನೇಶ್ಯಾದಲ್ಲಿ ಹಿಂದುಗಳು ಆಚರಿಸುತ್ತಾರೆ.
ಚಳಿಗಾಲ ಮುಗಿದು,ಬೇಸಿಗೆಯ ಆರಂಭವನ್ನು ಇದು ಸೂಚಿಸುತ್ತದೆ. ವಿದ್ಯೆ, ಬುದ್ಧಿಯನ್ನು ದಯಪಾಲಿಸುವ ಸರಸ್ವತಿಗೆ ವಂದನೆ ಅರ್ಪಿಸುವ ಈ ಹಬ್ಬದಂದು, ಸರಸ್ವತಿಯ ದೇವಾಲಯಗಳಿಗೆ ತೆರಳಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ಸಂಭ್ರಮದ ಸಾಂಪ್ರದಾಯಿಕ ಬಸಂತ ಪಂಚಮಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ವಸಂತ ಪಂಚಮಿಗೆ ಸಂಬಂಧಿಸಿದ ಕೆಲವು ಟ್ವೀಟ್ ಗಳು ಇಲ್ಲಿವೆ.
|
ನರೇಂದ್ರ ಮೋದಿ ಶುಭಹಾರೈಕೆ
ವಸಂತ ಪಂಚಮಿಯ ಶುಭಾಶಯಗಳು. ನಮ್ಮ ಸಮಾಜ ಮತ್ತಷ್ಟು ನೆಮ್ಮದಿಯಿಂದ, ಶಾಂತಿಯಿಂದ ಇರಲಿ ಎಂದು ಈ ಹಬ್ಬದಂದು ಹಾರೈಸುತ್ತೇನೆ. ದೇವಿ ಸರಸ್ವತಿಯು ನಮಗೆ ಜ್ಞಾನವನ್ನು ನೀಡಿ ಆಶಿರ್ವದಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
| Array |
ಜ್ಞಾನ ಮತ್ತು ಪಾಂಡಿತ್ಯ ನೀಡಲಿ
ದೇವಿ ಸರಸ್ವತಿ ಎಲ್ಲರಿಗೂ ಜ್ಞಾನ ಮತ್ತು ಪಾಂಡಿತ್ಯವನ್ನು ನೀಡಲಿ. ವಸಂತ ಪಂಚಮಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.
| Array |
ಮರಳಲ್ಲಿ ವಸಂತ ಪಂಚಮಿಯ ಶುಭಾಶಯ
ಮರಳಿನ ಮೂಲಕ ತಾಯಿ ಸರಸ್ವತಿಯ ಚಿತ್ರವನ್ನು ನಿರ್ಮಿಸಿ, ವಸಂತ ಪಂಚಮಿಗೆ ತಮ್ಮದೇ ಆದ ರೀತಿಯಲ್ಲಿ ಶುಭಹಾರೈಸಿದ್ದಾರೆ ಮರಳು ಶಿಲ್ಪಿ ಮಾನಸ್ ಸಾಹೂ. ಈ ಚಿತ್ರವನ್ನು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ ದೇವಾಶಿಶ್ ಕುಮಾರ್.
| Array |
ವಸಂತನ ಬಣ್ಣಗಳಂತೆ ಬದುಕು ಕಂಗೊಳಿಸಲಿ
ವಸಂತನ ಸುಂದರ ಬಣ್ಣಗಳೊಂದಿಗೆ ನಿಮ್ಮ ಬದುಕೂ ಕಂಗೊಳಿಸಲಿ. ದೇವಿ ಸರಸ್ವತಿ ನಿಮಗೆ ಸದಾ ಜ್ಞಾನ ಮತ್ತು ಪಾಂಡಿತ್ಯಗಳಿಂದ ಆಶೀರ್ವದಿಸಲಿ. ವಸಂತ ಪಂಚಮಿಯ ಶುಭಾಶಯಗಳು.












Click it and Unblock the Notifications