ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಬಿಡಿಸುವುದು ಹೀಗೆ

ಓಣಂ ದಿನ ರಂಗೋಲಿಗೆ ಹೂವಿನ ಅಲಂಕಾರ ಮಾಡುವ ಸುಲಭ ವಿಧಾನ:
1. ರಂಗೋಲಿ ವಿಧಾನ: ಮೊದಲು ನೀವು ಯಾವ ರೀತಿ ರಂಗೋಲಿ ಬಿಡಬೇಕು ಎಂಬುದನ್ನು ನಿರ್ಧರಿಸಿ. ಹೂವಿನ ಅಲಂಕಾರಕ್ಕೆ ವೃತ್ತಾಕಾರದ ರಂಗೋಲಿಯನ್ನು ಆಯ್ಕೆ ಮಾಡಿಕೊಂಡರೆ ಸುಂದರವಾಗಿ ಕಾಣುತ್ತದೆ.
2. ಗಾಢ ಬಣ್ಣದ ಹೂವು: ಮೊದಲು ರಂಗೋಲಿಯನ್ನು ಬಳಪದಿಂದ ಬಿಡಿಸಿಕೊಂಡು ಅಲಂಕಾರಕ್ಕೆ ಗಾಢ ಬಣ್ಣದ ಹೂವುಗಳನ್ನು ಆಯ್ಕೆ ಮಾಡಿಕೊಳ್ಳಿ. ಚೆಂಡು ಹೂವು, ಗುಲಾಬಿ, ಡೇರಿ ಹೂವುಗಳ ದಳಗಳು ಅಲಂಕಾರಕ್ಕೆ ಹೇಳಿ ಮಾಡಿಸಿದಂತಿರುತ್ತದೆ.
3. ತಿಳಿ ಬಣ್ಣವೂ ಇರಲಿ: ಗಾಢ ಬಣ್ಣದ ಹೂವುಗಳಿಗೆ ವಿರುದ್ದವಾಗಿ ತಿಳಿ ಬಣ್ಣದ ಹೂವುಗಳ ದಳಗಳನ್ನು ಅಲಂಕಾರಕ್ಕೆ ಬಳಸಿದರೆ ರಂಗೋಲಿ ಇನ್ನೂ ಆಕರ್ಷಕವಾಗಿ ಕಾಣುತ್ತದೆ. ತಿಳಿ ಬಣ್ಣದ ಹೂವುಗಳಾದ ಕನಕಾಂಬರ, ಬಿಳಿ ಸೇವಂತಿ ಮುಂತಾದುವನ್ನು ಬಳಸಿದರೆ ಅಲಂಕಾರ ಎದ್ದು ಕಾಣುತ್ತದೆ.
4. ಹಸಿರು ಎಲೆ: ಹಸಿರು ಎಲೆಗಳನ್ನೂ ಸಹ ರಂಗೋಲಿಗೆ ಹೂವಿನ ನಡುವೆ ಬಳಸಿದರೆ ನೋಡಲು ಸುಂದರವಾಗಿರುತ್ತದೆ. ಹೂವಿನೊಂದಿಗೆ ಹಸಿರು ಎಲೆಗಳು ಒಳ್ಳೆಯ ಕಾಂಬಿನೇಶನ್ ಕೂಡ ಹೌದು.
5. ನೀರು ಚುಮುಕಿಸಿ: ಹೂವಿನ ರಂಗೋಲಿ ಮೇಲೆ ಆಗಾಗ್ಗೆ ಸ್ವಲ್ಪ ನೀರು ಚುಮುಕಿಸುತ್ತಿರಿ. ಇದು ಹೂವುಗಳು ಹೆಚ್ಚು ಕಾಲ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ.
6. ದೀಪವಿರಲಿ: ಹೂವಿನ ಅಲಂಕಾರವಾದ ನಂತರ ರಂಗೋಲಿ ಮಧ್ಯೆ ದೀಪವನ್ನು ಮತ್ತು ಸುತ್ತಲೂ ಕ್ಯಾಂಡಲ್ ಇಡಬಹುದು. ಸುಗಂಧಭರಿತ ಕ್ಯಾಂಡಲ್ ಗಳೂ ಈಗ ಲಭ್ಯವಿದೆ. ಅದನ್ನು ಬಳಸುವುದರಿಂದ ರಂಗೋಲಿ ಆಕರ್ಷಿತವಾಗಿ ಕಾಣುವುದಲ್ಲದೆ ಹೂಗಳ ಜೊತೆ ಕ್ಯಾಂಡಲ್ ಕೂಡ ಕಂಪು ಬೀರಿ ಹಬ್ಬದ ಕಳೆ ಹಬ್ಬುವಂತೆ ಮಾಡುತ್ತದೆ.
7. ಮಿನುಗುವ ವಸ್ತುಗಳಿರಲಿ: ಮಿನುಗುವ ಅಲಂಕಾರಿಕ ವಸ್ತುಗಳನ್ನು ಮತ್ತು ಅಕ್ವೇರಿಯಂಗಳಲ್ಲಿ ಬಳಸುವ ಕಲ್ಲುಗಳನ್ನೂ (ಪೆಬೆಲ್ಸ್) ರಂಗೋಲಿಗೆ ಬಳಸಿದರೆ ನಿಮ್ಮ ಮನೆ ರಂಗೋಲಿ ಎಲ್ಲರೂ ತಿರುಗಿ ನೋಡುವಂತಿರುತ್ತದೆ.
ಈ ರಂಗೋಲಿಯನ್ನು ಓಣಂಗೆ ಮಾತ್ರ ಬಿಡಬೇಕೆಂದಿಲ್ಲ. ಎಲ್ಲಾ ಹಬ್ಬಗಳಿಗೂ ಈ ಹೂವಿನ ರಂಗೋಲಿ ಮೆರುಗು ನೀಡಿ ಹಬ್ಬದ ಕಳೆಯನ್ನು ಮನೆತುಂಬ ತುಂಬುತ್ತದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications