ಅಕ್ಷರ ಕಲಿಸಿದ ಗುರುವನ್ನು ನೆನೆಯೋಣ ಬನ್ನಿ

ನಿಜ. ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಲೋಕದಲ್ಲಿ ಮಕ್ಕಳಿಗೆ ಈ ದಿನಾಚರಣೆಯ ಮಹತ್ವದ ಅರಿವೇ ಇರುವುದಿಲ್ಲ. ಒಂದು, ಎರಡು ದಶಕಗಳ ಹಿಂದೆ ಇದ್ದ ಶಿಕ್ಷಕ-ವಿದ್ಯಾರ್ಥಿಯ ನಡುವಿನ ಆತ್ಮೀಯತೆ, ಬಾಂಧವ್ಯ, ಪ್ರೀತಿ ಇಂದು ಮಾಯವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡದೇ ಇರದು. ಇದಕ್ಕೆ ಕಾರಣಗಳೂ ಹಲವಾರಿರಬಹುದು.
ಕಚ್ಚೆ ಪಂಚೆ ಧರಿಸಿ, ತಲೆಮೇಲೆ ಟೋಪಿ ಧರಿಸಿ, ಕೈಯಲ್ಲಿ ಬೆತ್ತ ಹಿಡಿದ ಪ್ರೀತಿಯ ಮೇಷ್ಟ್ರು ಇಂದು ಕಾಣಸಿಗಲಿಕ್ಕಿಲ್ಲ. ಇಂದಿನ ಶಿಕ್ಷಣ, ಶಿಕ್ಷಕನ ಚೆಹರೆಯೇ ಬದಲಾಗಿದೆ. ನಗರಗಳಲ್ಲಿ ಲಕ್ಷಗಟ್ಟಲೆ ಫೀಸು ಕೊಡುವ ಶಾಲೆಯಲ್ಲಿ ಇಂದು ವಿದ್ಯಾರ್ಥಿಯನ್ನು ದಾರಿತಪ್ಪಿದಾಗ ಥಳಿಸುವುದಿರಲಿ ಮೈ ಮುಟ್ಟಲೂ ಸಾಧ್ಯವಿಲ್ಲ. ನಾವು ಎಷ್ಟು ಮುಂದುವರಿದಿದ್ದೇವೆಂದರೆ, ಶಾಲೆಯಲ್ಲಿ ಮಗು ಏನು ಮಾಡುತ್ತಿದೆಯೆಂದು ಪಾಲಕರು ಇಂಟರ್ನೆಟ್ ಮುಖಾಂತರ ಮನೆಯಲ್ಲಿ ಕುಳಿತೇ ಎಲ್ಲ ವಿವರ ತಿಳಿಯಬಹುದಾಗಿದೆ.
ಮಕ್ಕಳಿಗೂ ಕಡಿಮೆಯಿಲ್ಲದ ತಲೆಕೆಲಸ, ಶಿಕ್ಷಕರಿಗೂ ಬಿಡುವಿಲ್ಲದ ದುಡಿಮೆ. ಹೀಗಿರುವಾಗ ಮಕ್ಕಳು-ಶಿಕ್ಷಕರ ಬಾಂಧವ್ಯಕ್ಕಾದರೂ ಜಾಗ ಅಥವಾ ಸಮಯವೆಲ್ಲಿದೆ? ಆದರೂ ವಿದ್ಯಾರ್ಥಿಗಳು ಅಕ್ಷರ ಕಲಿಸುವ ಶಿಕ್ಷಕರನ್ನು ನೆನೆಯುವುದು, ಮಕ್ಕಳಿಗೆ ಗುರುವಂದನೆ ಕುರಿತು ತಿಳಿವಳಿಕೆ ನೀಡುವುದು ಪಾಲಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಜೀವನದಲ್ಲಿ ಬಂದ ಆತ್ಮೀಯ ಮೇಷ್ಟ್ರು, ಆದರ್ಶ ಶಿಕ್ಷಕನನ್ನು ನೆನೆದು ಮಕ್ಕಳಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುವುದು ಇಂದಿನ ಅಗತ್ಯ.
ಲೇಖನ ಆಹ್ವಾನ : ಓದುಗರೆ, ಇನ್ನೇಕೆ ತಡ. ನೀವು ಜೀವನಲ್ಲಿ ಕಂಡ, ಅಕ್ಷರ ತಿದ್ದಿತೀಡಿದ, ಮಾನವೀಯತೆಯನ್ನು ಕಲಿಸಿದ ಮೇಷ್ಟ್ರ ಕುರಿತು ನಮಗೆ ಬರೆಯಿರಿ. ಪುಟ್ಟ ಲೇಖನ ಯುನಿಕೋಡ್ ಅಥವಾ ಬರಹದಲ್ಲಿರಲಿ. ನಿಮ್ಮ ಅಥವಾ ಮೇಷ್ಟ್ರ ಫೋಟೋ ಲಗತ್ತಿಸಲು ಮರೆಯಬೇಡಿ.
ಲೇಖನ ಕಳಿಸಬೇಕಾದ ವಿಳಾಸ : [email protected]
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications