ಕಾಡು

* ಮೋಹನಚಂದ ಪಾಟೀಲ
ಬೆಳೆದಿತ್ತು ನನ್ನ ಮನೆಯ ಹಿಂದೆ
ಒಳಹೊಕ್ಕಂತೆ ದಾರಿ ಕಿರಿದಾಗುವ ಹಸಿರು ಕಾಡು
ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಗಿಡಮರಗಳು
ಬಿಸಿಲು ಬಿಡದಂತೆ ಹೆಣೆದ ಎಲೆಯ ಬಲೆಗಳು
ಜೀವ ತೊಳೆವ ತೊರೆಗಳು ಜಲಪಾತಗಳು
ಜೀವ ಕೊಳೆಸುವ ಮಲೆತ ಮಲಿನ ಕೊಳಗಳು
ಹುಳಹುಪ್ಪಡಿ ವಿಷಜಂತುಗಳ ತಾಣಗಳು
ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಮೃಗಗಳು
ಇವೆಲ್ಲ ಬುದ್ಧಿಹೀನ ವಿಚಾರಹೀನ ಜೀವಿಗಳು
ಎಂದು ಹೆದರಿ ನಾನೋಡಿ ಹೊರ ಬಂದೆ
ಅವನ್ನು ಒಂದೊಂದಾಗಿ ಕೊಂದು ನಾಶಮಾಡಿದೆ
ಮನೆಯ ಹಿಂದಿನ ಕಾಡು ಬಯಲು ಮಾಡಿದೆ
ಆದರೆ ಇಂದು ಕಾಡಿನ ಬೀಜ ಮೊಳೆತಿದೆ
ನನ್ನ ಮನದಲಿ ಹುಲುಸಾಗಿ ಬೆಳೆಯುತಿದೆ
ಇವೆಲ್ಲ ಬುದ್ಧಿ ತುಳಿದು ಬೆಳೆದ ಸ್ವಾರ್ಥಗಳು
ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಜನಗಳು
ಹುಳಹುಪ್ಪಡಿ ವಿಷಜಂತುಗಳ ಕಣಜಗಳು
ಜೀವ ಕೊಳೆಸುವ ಕೊಳಕು ಚರಂಡಿಗಳು
ಜೀವ ತೊಳೆವ ಔಷಧಗಳು ಆಸ್ಪತ್ರೆಗಳು
ಬಿಸಿಲು ಬಿಡದಂತೆ ಹರಡಿದ ಮಾಲಿನ್ಯ ಮೋಡಗಳು
ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಕಟ್ಟಡಗಳು
ಒಳಹೊಕ್ಕಂತೆ ದಾರಿ ಕಿರಿದಾಗುವ ಜನರ ಕಾಡು
ಬೆಳೆದಿದೆ ನನ್ನ ಮನೆಯ ಮುಂದೆ
More From
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications