ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ
ಬೆಂಗಳೂರು, ಜುಲೈ 13: ಗಣೇಶ ಚತುರ್ಥಿ ಸನ್ನಿಹಿತವಾಗುತ್ತಿದ್ದು, ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮಾರಾಟಗಾರರಿಗೆ ಆತಂಕ ಶುರುವಾಗಿದೆ. ಗಣೇಶ ಚತುರ್ಥಿ ಒಂದು ತಿಂಗಳಿರುವಾಗಲೇ ಮೂರ್ತಿಗಳ ಮಾರಾಟ, ಖರೀದಿ ಆರಂಭವಾಗುತ್ತದೆ. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಮೂರ್ತಿಗಳನ್ನು ಕೊಳ್ಳುವವರೇ ಇಲ್ಲದಂತಾದರೆ ಎನ್ನುವುದು ಮಾರಾಟಗಾರರ ಭೀತಿಯಾಗಿದೆ.
Recommended Video
ಮೂರ್ತಿ ತಯಾರಿ ಕೇವಲ ಒಂದು ದಿನದ ಕೆಲಸವಲ್ಲ, ಮೂರ್ತಿ ತಯಾರಿಸಲು ಎರಡು ತಿಂಗಳಿನಿಂದಲೇ ತಯಾರಿ ಆರಂಭವಾಗುತ್ತದೆ. ಪ್ರತಿ ವರ್ಷದ ಬೇಡಿಕೆ ಆಧಾರದಲ್ಲಿ ಮೂರ್ತಿಯನ್ನು ತಯಾರಿಸಲಾಗುತ್ತದೆ. ಆದರೆ ಈ ಬಾರಿ ಹೆಚ್ಚು ಮೂರ್ತಿಗಳನ್ನು ತಯಾರಿಸಿದರೆ ಖರೀದಿ ಕಡಿಮೆಯಾದರೆ ಎಂಬ ಆತಂಕ ಎದುರಾಗಿದೆ.
ಮೂರ್ತಿ ಮಾರಾಟಗಾರರಾದ ಶಿಖರ್ ಅವರು ಮಾತನಾಡಿ, ಇದುವರೆಗೆ ಒಂದೇ ಒಂದು ಆರ್ಡರ್ ಬಂದಿಲ್ಲ. ಸಾಮಾನ್ಯವಾಗಿ ಜೂನ್ ಅಂತ್ಯದಿಂದಲೇ ಆರ್ಡರ್ಗಳು ಬರಲು ಆರಂಭವಾಗುತ್ತದೆ. ಜುಲೈ ಮಧ್ಯ ವಾರಕ್ಕೆ ಬಂದರೂ ಒಂದೇ ಒಂದು ಆರ್ಡರ್ ಬಂದಿಲ್ಲ ಎಂದಿದ್ದಾರೆ.
ಚೌತಿ ಹಬ್ಬ ಮುಗಿಯುತ್ತದ್ದಂತೆ ಮುಂದಿನ ವರ್ಷಕ್ಕೆ ಮೂರ್ತಿಗಳ ತಯಾರಿಕೆ ಆರಂಭವಾಗುತ್ತವೆ. ಈಗ ಯಾರೂ ಮೂರ್ತಿಗಳನ್ನು ಕೊಳ್ಳದಿದ್ದರೆ ಇಡೀ ಒಂದು ವರ್ಷದ ಶ್ರಮ ವ್ಯರ್ಥವಾಗಲಿದೆ. ಕುಟುಂಬದವರಿಗೂ ತೊಂದರೆಯಾಗಲಿದೆ. ಜನವರಿಯಲ್ಲೇ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಬಂದಿದ್ದರಿಂದ ಶೇ.50 ರಷ್ಟು ಮೂರ್ತಿ ತಯಾರಿಕೆಯನ್ನು ನಿಲ್ಲಿಸಿದ್ದೇವೆ.

ಸರ್ಕಾರದ ನೋಡಿಫಿಕೇಷನ್ ಬಂದಿಲ್ಲ
ಗಣೇಶನ ಮೂರ್ತಿ ಮಾರಾಟದ ಕುರಿತು ಸರ್ಕಾರದಿಂದ ಯಾವುದೇ ನೋಟಿಫಿಕೇಷನ್ ಬಂದಿಲ್ಲ. ಖಾಸಗಿ ಕಂಪನಿಗಳಿಂದ ಸಾಕಷ್ಟು ಲೋನ್ಗಳನ್ನು ಪಡೆದುಕೊಂಡಿದ್ದೇವೆ. ಮೂರ್ತಿಗಳು ಮಾರಾಟವಾಗದಿದ್ದರ ಸರಿಯಾದ ಸಮಯಕ್ಕೆ ಹಣವನ್ನು ಹಿಂದಿರುಗಿಸುತ್ತೇವೆ ಎಂಬ ನಂಬಿಕೆಯೂ ಇಲ್ಲ ಎಂದಿದ್ದಾರೆ.

ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿದೆ
ಬೆಂಗಳೂರಿನಲ್ಲಿ ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿವೆ, ಒಟ್ಟು ನಾಲ್ಕು ತಲೆಮಾರು ಈ ಗಣೇಶನ ಮೂರ್ತಿಯನ್ನು ತಯಾರಿಸಲು ಹಗಲೂ ರಾತ್ರಿ ಶ್ರಮ ಪಡುತ್ತಿದೆ. ಈ 500 ಕುಟುಂಬಗಳು ಗಣೇಶ ಚತುರ್ಥಿಯಲ್ಲಿ ಮಾರಾಟವಾಗುವ ಮೂರ್ತಿಯನ್ನು ನಂಬಿಕೊಂಡಿದ್ದಾರೆ. ಅದೇ ಅವರ ಜೀವನಕ್ಕೆ ಆಧಾರ. ಸರ್ಕಾರವು ಯಾವುದೇ ನೋಟಿಫಿಕೇಷನ್ ಹೊರಡಿಸಿದ ಕಾರಣ ನಾವು ಮೂರ್ತಿಗಳನ್ನು ಮಾರಾಟ ಮಾಟಬೇಕೇ ಬೇಡವೇ ಎಂಬುದೇ ದೊಡ್ಡ ತಲೆನೋವಾಗಿದೆ ಎಂದು ಜಿತಿನ್ ಹೇಳಿದ್ದಾರೆ.

3 ರಿಂದ 7 ಅಡಿಯಷ್ಟು ಎತ್ತರದ ಮೂರ್ತಿ
ತಾವು 3-4 ಇಂಚಿನಿಂದ 7 ಅಡಿ ಎತ್ತರದ ಮೂರ್ತಿಯನ್ನು ತಯಾರಿಸುತ್ತೇವೆ. ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿದ್ದೇವೆ. ಈ ಬಾರಿ ಹೆಚ್ಚಿನ ಮೂರ್ತಿಗಳು ಮಾರಾಟವಾಗುತ್ತವೆ ಎಂದು ಅನಿಸುತ್ತಿಲ್ಲ. ಸಣ್ಣ ಮೂರ್ತಿಗಳಾದರೂ ಮಾರಾಟವಾಗಬಹುದು ಎಂಬ ಭರವಸೆಯಲ್ಲಿದ್ದೇವೆ.

25 ಸಾವಿರ ಗಣೇಶನ ಮೂರ್ತಿಗಳು
ಒಟ್ಟು ನಮ್ಮ ಬಳಿ 25 ಸಾವಿರ ಗಣೇಶನ ಮೂರ್ತಿಗಳಿವೆ. ಚೌತಿ ಹಬ್ಬಕ್ಕೆ ಆರು ವಾರಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಮೂರ್ತಿಗಳನ್ನು ಮಾರಾಟ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್











Click it and Unblock the Notifications