ನಾವು ಕನ್ನಡಿಗರು ದೀಪಾವಳಿ ಆಚರಿಸೋಣ, ದಿವಾಳಿಯಾಗೋದು ಬೇಡ!
ದೀಪಾವಳಿ... ಆ ಪದದಲ್ಲಿ ಒಂದು ರೀತಿಯ ಆಪ್ಯಾಯಮಾನತೆಯಿದೆ. ಸಾಲು ಸಾಲು ದೀಪದ ಮೂಲಕ ನಿಶೆಯೆಂಬ ಭಯವನ್ನೆಲ್ಲ ದೂರ, ಬಹುದೂರ ಕಳಿಸುವ ಶಕ್ತಿಯಿದೆ. ದಕ್ಷಿಣ ಭಾರತದಲ್ಲಿ ಅ.18 ರಿಂದ ಅಧಿಕೃತವಾಗಿ ದೀಪಾವಳಿಗೆ ಚಾಲನೆ. ಅದಕ್ಕೆಂದೇ ಈಗಾಗಲೇ ಶುಭಾಶಯಗಳ ವಿನಿಮಯ ಶುರುವಾಗಿದೆ.
"ಹ್ಯಾಪಿ ದಿವಾಳಿ" ಎಂದು ಯಾರಾದರೂ ವಿಷ್ ಮಾಡಿದರೆ ದೀಪಾವಳಿಯ ಬೆಳಕು ಮಂಕಾದಂತನ್ನಿಸುತ್ತದೆ. 'ದೀಪಾವಳಿ' ಎಂಬ ಸುಂದರ ಅಕ್ಷರಪುಂಜವಿರುವಾಗ ನಾವ್ಯಾಕೆ ಮತ್ತೊಬ್ಬರಿಂದ ದಿವಾಳಿ ಎಂಬ ಪದವನ್ನು ಎರವಲು ಪಡೆಯಬೇಕು? ಆ ಪದದೊಂದಿಗೆ ನಮ್ಮತನವನ್ನೂ ದಿವಾಳಿ ಮಾಡಿಕೊಳ್ಳಬೇಕು?

ದಿವಾಳಿ ಬೇಡ ದೀಪಾವಳಿ ಬೇಕು ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿದೆ. ದಿವಾಳಿ ಎಂಬುದು ಪಂಜಾಬಿ ಪದ ಅದೂ ಭಾರತದ ಒಂದು ಭಾಷೆಯೇ ಆಗಿರುವಾಗ ಆ ಪದ ಬಳಸಿದರೆ ತಪ್ಪೇನು ಎಂಬುದು ಹಲವರ ಪ್ರಶ್ನೆ. ಮತ್ತಷ್ಟು ಜನ, ದೀಪಾವಳಿಯೋ, ದಿವಾಳಿಯೋ ಹಬ್ಬದ ಹೆಸರು ಅದು ಅಷ್ಟೇ. ಸಂಭ್ರಮ ಪಡಬೇಕಾದ್ದು ಮುಖ್ಯ ಎಂದಿದ್ದಾರೆ. ಈ ಎಲ್ಲದರ ಹೊರತಾಗಿಯೂ ಕನ್ನಡದಲ್ಲಿ ದಿವಾಳಿ ಎಂಬ ಪದಕ್ಕಿರುವ ಅರ್ಥವೇ ಬೇರೆ. ದರಿದ್ರ, ಭಿಕಾರಿ, ನಿರ್ಗತಿಕ ಎಂಬ ಅರ್ಥವನ್ನು ಕೊಡುವ ಇದೇ ಪದವನ್ನು ಬಳಸಬೇಕಾದ ಅನಿವಾರ್ಯತೆಯೇನಾದರೂ ನಮಗಿದೆಯೇ? ಯಾರೋ ಆ ಪದ ಬಳಸುತ್ತಾರೆಂದು ನಾವು ಅಸ್ಮಿತೆ ಮರೆಯಬೇಕೆ ಎಂಬುದು ಮತ್ತಷ್ಟು ಜನರ ಪ್ರಶ್ನೆ.
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮತನ ಮರೆಯದೇ ಆಚರಿಸೋಣ ಎಂಬುದು ನಮ್ಮ ಕಳಕಳಿ. ಸರ್ವರಿಗೂ ದೀಪಾವಳಿಯ ಶುಭಾಶಯಗಳು.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications