Deepavali 2022 : ದೀಪಾವಳಿ ಪ್ರಾರಂಭ ಮತ್ತು ಅಂತ್ಯದ ದಿನಾಂಕ, ಮುಹೂರ್ತ, ಪೂಜಾ ವಿಧಿ, ಇತಿಹಾಸ ಮತ್ತು ಮಹತ್ವ
5 ದಿನಗಳ ಸಂಭ್ರಮದ ದೀಪಾವಳಿಯು ಜಗತ್ತಿನಾದ್ಯಂತ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದ್ದು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಪ್ರತಿನಿಧಿಸುತ್ತದೆ. ಇದು ಸಂತೋಷ ಮತ್ತು ಸಾಮರಸ್ಯವನ್ನು ಸೂಚಿಸುವ ಅತ್ಯಂತ ಮಹತ್ವದ ಹಬ್ಬವಾಗಿದೆ.
ಐದು ದಿನದ ಹಬ್ಬಕ್ಕೆ ಒಂದು ವಾರದ ಮುಂಚಿತವಾಗಿ ಆಚರಣೆಯ ಸಿದ್ಧತೆಗಳು ನಡೆಯುತ್ತವೆ. ಮನೆ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಜನ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಹಬ್ಬದ ಸಮಯದಲ್ಲಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ದೀಪಗಳು, ಹೂವುಗಳು, ರಂಗೋಲಿ ಮತ್ತು ಮೇಣದಬತ್ತಿಗಳಿಂದ ತಮ್ಮ ಮನೆ, ಕಚೇರಿ ಹಾಗೂ ಅಂಗಡಿಗಳನ್ನೂ ಅಲಂಕರಿಸುತ್ತಾರೆ. ಸಂಪತ್ತಿನ ಆದಿದೇವತೆಯಾದ ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಜನರು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ದೀಪಾವಳಿ ಪ್ರಾರಂಭ ಮತ್ತು ಅಂತಿಮ ದಿನಾಂಕಗಳು
ದೀಪಾವಳಿಯ 5 ದಿನದ ಹಬ್ಬವು ಧಂತೇರಸ್ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭಯ್ಯಾ ದೂಜ್ನೊಂದಿಗೆ ಮುಕ್ತಾಯಗೊಳ್ಳುತ್ತದೆ. ದೀಪಾವಳಿಯನ್ನು ಹಿಂದೂ ತಿಂಗಳ ಕಾರ್ತಿಕದಲ್ಲಿ ವರ್ಷದ ಕರಾಳ ರಾತ್ರಿಯಲ್ಲಿ ಆಚರಿಸಲಾಗುತ್ತದೆ. ಈ ವರ್ಷದ ದೀಪಾವಳಿ ದಿನಾಂಕಗಳು ಹೀಗಿವೆ:
ದೀಪಾವಳಿ ದಿನ 1
ದೀಪಾವಳಿ ಹಬ್ಬ ಅಕ್ಟೋಬರ್ 24ರಂದು ದ್ವಾದಶಿ ತಿಥಿ ಜಾರಿಯಲ್ಲಿರುವಾಗ ಧನ್ತೇರಸ್ನೊಂದಿಗೆ ಪ್ರಾರಂಭವಾಗುತ್ತದೆ.
ದೀಪಾವಳಿ ದಿನ 2
ದೀಪಾವಳಿಯ ಎರಡನೇ ದಿನ ತ್ರಯೋದಶಿ ತಿಥಿ ಇರುತ್ತದೆ. ಈ ದಿನವನ್ನು ಚೋಟಿ ದೀಪಾವಳಿ ಎಂದು ಆಚರಿಸಲಾಗುತ್ತದೆ. ಈ ದಿನ ಜನರು ಹನುಮಂತನನ್ನು ಪೂಜಿಸುತ್ತಾರೆ.
ದೀಪಾವಳಿ ದಿನ 3
ದೀಪಾವಳಿಯ ಮೂರನೇ ದಿನ ಚತುರ್ದಶಿ ತಿಥಿ ಜಾರಿಯಲ್ಲಿರುತ್ತದೆ. ಈ ದಿನ ಜನರು ದೀಪಾವಳಿಯನ್ನು ಆಚರಿಸುತ್ತಾರೆ. ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ, ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸಲು ಜನ ತಮ್ಮ ಮನೆಗಳನ್ನು ದೀಪಗಳಿಂದ ಬೆಳಗಿಸುತ್ತಾರೆ.
ದೀಪಾವಳಿ ದಿನ 4
ಈ ದಿನ, ಅಮವಾಸ್ಯೆಯ ತಿಥಿ ಜಾರಿಯಲ್ಲಿರುತ್ತದೆ. ಈ ದಿನ ಕತ್ತಲೆಯಿಂದ ಬೆಳಕಿನೆಡೆಗೆ ಜನರು ದೀಪಾವಳಿಯನ್ನು ಆಚರಿಸುತ್ತಾರೆ.
ದೀಪಾವಳಿ ದಿನ 5
ದೀಪಾವಳಿಯ 5ನೇ ದಿನದಂದು ಪ್ರತಿಪದ ತಿಥಿ ಜಾರಿಯಲ್ಲಿರುತ್ತದೆ. ಗೋವರ್ಧನ ಪೂಜೆಯೊಂದಿಗೆ 5 ದಿನಗಳ ಹಬ್ಬವನ್ನು ಜನರು ಮುಕ್ತಾಯಗೊಳಿಸಲಿದ್ದಾರೆ.

ದೀಪಾವಳಿ ಶುಭ ಸಮಯಗಳು
ಈ ವರ್ಷ ದೀಪಾವಳಿಯು ಅಕ್ಟೋಬರ್ 24 ರಂದು ಲಕ್ಷ್ಮಿ ಪೂಜೆಯ ವಿಧಿವಿಧಾನಗಳೊಂದಿಗೆ ಪ್ರಾರಂಭವಾಗುತ್ತದೆ. ಶುಭ ಮುಹೂರ್ತ ಅಥವಾ ಶುಭ ಸಮಯಗಳು ಸಂಜೆ 6:53 ರಿಂದ 8:16 ರವರೆಗೆ ಇರುತ್ತದೆ. ಆದರೆ ನಗರಗಳಿಗೆ ಅನುಗುಣವಾಗಿ ಸಮಯಗಳಲ್ಲಿ ವ್ಯತ್ಯಾಸಗಳಿರಬಹುದು.
ಅಕ್ಟೋಬರ್ 24ರ ಚತುರ್ದಶೀಯಂದು
ಲಕ್ಷ್ಮಿ ಪೂಜೆ ಮುಹೂರ್ತ - ಸಂಜೆ 07:26ರಿಂದ 08:39ರವರೆಗೆ
ಪ್ರದೋಷ ಕಾಲ - ಸಂಜೆ 6:53 ರಿಂದ 8:16 ರವರೆಗೆ
ವೃಷಭ ಕಾಲ - ಸಂಜೆ 07:26ರಿಂದ 09:26ರವರೆಗೆ
ಅಮಾವಾಸ್ಯೆ ತಿಥಿ ಪ್ರಾರಂಭ - ಅಕ್ಟೋಬರ್ 24, 2022ರಂದು ಸಂಜೆ 05:27
ಅಮಾವಾಸ್ಯೆಯ ತಿಥಿ ಅಂತ್ಯ - ಅಕ್ಟೋಬರ್ 25, 2022ರಂದು ಸಂಜೆ 04:18ಕ್ಕೆ
ದೃಕ್ ಪಂಚಾಂಗ ಪ್ರಕಾರ, ನಿಶ್ಚಿತ ಕಾಲ ಮುಹೂರ್ತ ಅಕ್ಟೋಬರ್ 24ರ ರಾತ್ರಿ 11.40ರಿಂದ ಅಕ್ಟೋಬರ್ 25ರ ನಸುಕಿನ 12.31

ದೀಪಾವಳಿ ಪೂಜಾ ವಿಧಿ
ಈ ದಿನದಂದು ಭಕ್ತರು ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಪೂಜೆಗೆ ಮೋದಕ ಮತ್ತು ಹಲ್ವದಂತಹ ಸಿಹಿತಿಂಡಿಗಳನ್ನು ಸಹ ನೀಡಲಾಗುತ್ತದೆ. ಪೂಜೆ ಮುಗಿದ ನಂತರ ಜನರು ದೀಪಗಳನ್ನು ಹಚ್ಚಿ ಪಟಾಕಿಗಳನ್ನು ಸಿಡಿಸುತ್ತಾರೆ. ಹಿಂದೂ ನಂಬಿಕೆಗಳ ಪ್ರಕಾರ, ದೀಪಗಳನ್ನು ಬೆಳಗಿಸುವುದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ.

ದೀಪಾವಳಿ ಮಹತ್ವ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನವು ರಾವಣನ ಮೇಲೆ ರಾಮನ ವಿಜಯವನ್ನು ಸೂಚಿಸುತ್ತದೆ. ಇದಲ್ಲದೆ, ಇದು ತನ್ನ ಪತ್ನಿ ಸೀತಾ ಮತ್ತು ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ಕಾಲ ವನವಾಸದಲ್ಲಿದ್ದ ನಂತರ ಅಯೋಧ್ಯೆಗೆ ಹಿಂದಿರುಗಿದ ಸಂಕೇತವಾಗಿದೆ. ಆದ್ದರಿಂದ, ಜನರು ಈ ದಿನವನ್ನು ಅಗಾಧ ಉತ್ಸಾಹದಿಂದ ಆಚರಿಸುತ್ತಾರೆ, ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಆಚರಿಸಲಾಗುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications