ದೀಪಾವಳಿ... ದಿವಾಳಿ... ದೀಪ off ಮಾಡ್ಕೊಳ್ಳಿ!

ದಿನಸಿ ಸಾಮಾನುಗಳ ಬೆಲೆ ಹೆಚ್ಚಳದಿಂದ, ನೆಂಟರಿಷ್ಟರನ್ನು ಕರೆದು ದೇವರಿಗೆ ನೈವೇದ್ಯ ತೋರಿಸಿದ ಹಾಗೆ ತೋರಿಸಿ, ಇನ್ನು ಉಳಿದ ಬಾಕಿ ತಿಂಡಿ ತಿನಿಸುಗಳನ್ನು ಇಮೇಲ್ ಮುಖಾಂತರ ಇಲ್ಲವೇ SMS ಮೂಲಕ ಕಳುಹಿಸುವ ಕಾಲ ಬಂದಿದೆ!
ಹೆಣ್ಣು ಕೊಟ್ಟ ಮಾವ, ಕಣ್ಣು ಕೊಟ್ಟ ದೇವರ ಸಮಾನ ಎನ್ನುವ ಗಾದೆ. ಇಗ ಏರುತ್ತಿರುವ ಬಂಗಾರದ ಬೆಲೆಯಿಂದ ಮಾವನ ಕಣ್ಣನ್ನು ಬಂಗಾರವನ್ನು ಕಂಡರೂ ಕಾಣಿಸದಂತೆ ಕುರುಡು ಮಾಡಿದೆ. ಈಕಡೆ ಅತ್ತೆಗೆ ಮಗಳು ಅಳಿಯ ಬರುವ ಸಂಭ್ರಮ ಒಂದೆಡೆಯಾದರೆ, ಅಳಿಯನ ಚಾಕರಿಯ ಖರ್ಚು ಇನ್ನೊಂದೆಡೆ. ಇದಕ್ಕೆ ಅಂದಿರಬೇಕು ಹಿಂದೆ ಅಳಿಯ ಮನೆ ತೊಳಿಯ ಎಂದು... ಗೊಣಗುತ್ತ ಕೆಲಸವನ್ನು ಪ್ರೀತಿಯಿಂದ ಮುಂದುವರೆಸುತ್ತಾರೆ.
ಹೆಂಗಳೆಯರು ಬಂಗಾರವನ್ನು ಬರಿ ಶೋರೂಂನಲ್ಲಿ ನೋಡಿಯೇ ಸಮಾಧಾನ ಪಡುವಂತಾಗಿದೆ. ಹೆಂಗಸರೇ ನಿಮಗೇಕೆ ಈ ಮೋಹ ಎಂದು ಕೇಳಿದರೆ, ಅವರು ಗಂಡಸರಾದ ಅನಂತ ಪದ್ಮನಾಭ ಮತ್ತು ಜನಾರ್ದನ ರೆಡ್ಡಿಯವರಿಗೆ ಚಿನ್ನದ ಮೇಲೆ ಅಷ್ಟೊಂದು ಮೋಹವಿದ್ದಮೇಲೆ, ನಮಗೆ ಹೆಂಗಸರಾಗಿ ಇಷ್ಟೂ ಅಸೆ ಬೇಡವೇ ಎನ್ನುತ್ತಾರೆ? ಇಂಥವರಿಗೆ ಅನಂತ ಪದ್ಮನಾಭನೇ ಪ್ರತ್ಯಕ್ಷವಾಗಿ ಅಥವಾ ಜನಾರ್ದನ ರೆಡ್ಡಿ ಚಂಚಲಗುಡ ಜೈಲಿಂದ ಹೊರಬಂದು ಉತ್ತರಿಸಬೇಕು. ಸದ್ಯಕ್ಕೆ ಅವರು ಬರಲಾರರು ಅಂತೀರಾ?
ದೀಪಾವಳಿಗೆ, ಮದುವೆಯಾದ ನಂತರ ಮೊದಲ ಬಾರಿಗೆ ಅಳಿಯತನಕ್ಕೆ ಬಂದು ಭರ್ಜರಿ ಅಳಿಯತನ ಮಾಡಿಸಿಕೊಳ್ಳುವ ಕಾಲ ಎಂದೋ ಹೋಯಿತು. ಈ ವರ್ಷವಂತೂ ಇಲ್ಲವೇ ಇಲ್ಲ. ಬಂಗಾರ ಕೊಡ್ತಾರಾ ಇಲ್ವಾ, ಕೇವಲ ಬಟ್ಟೆ ಮೇಲೆ ಆರತಿ ಎತ್ತಿ, ಕಿವಿಗೆ ಹೂ ಇಡತಾರಾ ನಮ್ಮ ಕಂಜುಸ್ ಮಾವಂದಿರು ಅನ್ನೋ ಕಳವಳ ಅಳಿಯಂದಿರಿಗೆ.
ಇನ್ನು ಹುಡುಗ ಹುಡುಗಿಯರ ವಿಷಯಕ್ಕೆ ಬಂದ್ರೆ ಇನ್ನೇನು ಒಳ್ಳೆ ದಿನಗಳು ಶುರುವಾಯ್ತು ಅಂತ ವಧು ವರರ ಅನ್ವೇಷನೆಯಯಲ್ಲಿ ತೊಡಗುತ್ತಾರೆ. ಗಂಡುಗಳಂತೂ ಕಾರ್ ನಲ್ಲಿ ತಂದೆ ತಾಯಿಯ ಜೊತೆ ಬ್ರೋಕರ್ ಹಿಡ್ಕೊಂಡು ಒಂದು ಊರಲ್ಲಿ ಇರೋ ಬರೋ ಹುಡುಗಿಯರನ್ನೆಲ್ಲಾ sight seeing ಥರಾ ನೋಡಿ, ಚೆನ್ನಾಗಿದೆ ಬಟ್ ಹೀಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಅಂತಾ ಫ್ರೀ ಕಾಮೆಂಟ್ಸ್ ಕೊಟ್ಟು ಬರ್ತಾರೆ. ಇನ್ನು ಹುಡುಗಿಮನೆಯವರೋ ಬಂದವರಿಗೆಲ್ಲ ಮಾಡಿ ಹಾಕಿ ಹಾಕಿ, ಇನ್ನು ಕೊನೆಗೆ ಬಂದವನ ಪಾಡು ನಾಯಿ ಪಾಡು ಅಷ್ಟೇ. ಅಂದ್ರೆ ಸಿಂಪ್ಲಿ, ಚಾ ಬಿಸ್ಕೆಟ್!
ಮಕ್ಕಳ ಖುಷಿ ಅಂತು ಹೇಳತಿರದು, ಹೊಸ ಬಟ್ಟೆ, ಪಟಾಕ್ಷಿ, ದೀಪಗಳ ಅಲಂಕಾರ ವರ್ಣಿಸಲು ಅಸಾದ್ಯ. ಈ ಪಟಾಕ್ಷಿ ಬಾಂಬ್ ಗಳ ಆಟದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೆ ಇದೆ ಕೊನೆ ದೀಪಾವಳಿ ಆಗುವುದು ಖಚಿತ. ಆ ದೇವರು ಫುಲ್ voltage ಪವರ್ ನಿಂದ ನಮ್ಮಲ್ಲಿ ಬಂದು ಇ ಪವರ್ ಕಟ್ ಅನ್ನು ಕಟ್ ಮಾಡಿ, ನಮ್ಮ ಮಂತ್ರಿಗಳಿಗೆ ಜನ ಸೇವೆ ಮಾಡಬೇಕು ಎಂಬುವ ಕರೆಂಟ್ ಶಾಕ್ ಕೊಟ್ಟು ಎಲ್ಲಾ ಜನತೆಗೆ ಸುಖ ಸಮೃದ್ದಿ ಕೊಡಬೇಕೆಂದು ಹಾರೈಸುತ್ತೇನೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications