ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ
ಶ್ರೀ ತುಳಸಿ ಹಾಗೂ ಕೃಷ್ಣ ತುಳಸಿಗೆ ಹೋಲಿಸಬಲ್ಲ ಸಸ್ಯ ಬೇರೊಂದಿಲ್ಲ. ಭಕ್ತಿ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ತುಳಸಿ ಬೆಳೆಸುವುದು ಉತ್ತಮ. ಮನೆ ಮುಂದೆ ತುಳಸಿ ಇದ್ದರೆ ಶ್ರೇಯಸ್ಕರ.
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆ ತುಳಸಿ ಹಬ್ಬವಾಗಿ ಆಚರಿಸಲಾಗುತ್ತದೆ.
ಈ ಕಿರು ದೀಪಾವಳಿಯಂದು ನಿದ್ದೆಯಿಂದ ಎದ್ದು ಬರುವ ಶ್ರೀಮನ್ನಾನಾರಾಯಣ/ಶ್ರೀಕೃಷ್ಣನನ್ನು ಸ್ವಾಗತಿಸಲು ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡಲಾಗುತ್ತದೆ. ತುಳಸಿಯ ಗಿಡದ ಜೊತೆ ದೊಡ್ಡ ನೆಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುವುದುಂಟು.
ದೀಪಾವಳಿ ಹಬ್ಬದಿಂದ ಆರಂಭಗೊಂಡ ಮನೆಯೆಲ್ಲಾ ದೀಪ ಬೆಳಗುವ ಕಾಯಕಕ್ಕೆ ಇಂದು ಹೆಚ್ಚಿನ ಮೆರಗು ಬರುತ್ತದೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. [ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ 'ತುಳಸಿ' ನಮೋ ನಮಃ]

ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು, ಇಬ್ಬರಿಗೂ ಪೂಜೆ ಮಾಡುತ್ತಾರೆ. ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ಹಿಂದೂ ಸಂಪ್ರದಾಯದ ಮೊದಲಿಗೆ ಗಣಪತಿ ಪೂಜೆ ಸಲ್ಲಿಸಿ ನಂತರ ತುಳಸಿ ದೇವಿಗೆ ಅಷ್ಟೋತ್ತರ, ಅರ್ಚನೆ, ನೈವೇದ್ಯ, ಆರತಿ ಬೆಳಗಿ ಭಕ್ತಿಯಿಂದ ಬೇಡಿಕೊಳ್ಳಲಾಗುತ್ತದೆ.
ಶ್ರೀ ತುಳಸಿ ಹಾಗೂ ಕೃಷ್ಣ ತುಳಸಿಗೆ ಹೋಲಿಸಬಲ್ಲ ಸಸ್ಯ ಬೇರೊಂದಿಲ್ಲ. ಭಕ್ತಿ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ತುಳಸಿ ಬೆಳೆಸುವುದು ಉತ್ತಮ. ಮನೆ ಮುಂದೆ ತುಳಸಿ ಇದ್ದರೆ ಶ್ರೇಯಸ್ಕರ. ತುಳಸಿಯಂತೆ ಔಷಧೀಯ ಗುಣಗಳನ್ನುಳ್ಳ ನೆಲ್ಲಿಕಾಯಿ ಗಿಡದ ಕೊನೆಯನ್ನು ತುಳಸಿ ಬೃಂದಾವನದಲ್ಲಿರಿಸಲಾಗುತ್ತದೆ. [ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]
ಶ್ರೀಕೃಷ್ಣದೇವರಿಗೆ ಇಷ್ಟವಾದ ಬಗೆ ಬಗೆ ಸಿಹಿ ತಿನಿಸುಗಳನ್ನು ಭುಜಿಸಿ ಸಂತಸ ಪಡುವ ಈ ಹಬ್ಬ ಮಲೆನಾಡು, ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ತುಳಸಿ ಗಿಡ ಕಾಣುವುದೇ ಅಪರೂಪ. ಆದರೂ ಕೆಲವೆಡೆ ಇಸ್ಕಾನ್ ಪ್ರಭಾವದಿಂದ ಪೂಜೆ ಪುನಸ್ಕಾರ ಪುನರಾಂಭಗೊಂಡಿದೆ ಎನ್ನಬಹುದು. [ತುಳಸಮ್ಮ ಯಾರು? ಅವಳಿಗಾದ ಅನ್ಯಾಯವೇನು?]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications