ದುರ್ಗಾಷ್ಟಮಿ 2021: ಪೂಜಾ ವಿಧಾನ ಹಾಗೂ ಮಹತ್ವ
ನವರಾತ್ರಿಯ 9 ದಿನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಿನ ದುರ್ಗಾಷ್ಠಮಿ. ದುರ್ಗೆಯು ತವರು ಮನೆಗೆ ಬರುವ ಶುಭ ದಿನವೇ ದುರ್ಗಾಷ್ಟಮಿ.
ನವರಾತ್ರಿಯ 9 ದಿನಗಳಲ್ಲಿ ಅತ್ಯಂತ ಮಹತ್ವವಾದ ದಿನವಿದು, ಆದಿಶಕ್ತಿ ಮಹಿಷಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿಯಾದ ಪವಿತ್ರ ದಿನ.
ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ , ನವರಾತ್ರಿಯಲ್ಲಿ ದುರ್ಗಾಷ್ಟಮಿಗೆ ಹೆಚ್ಚಿನ ಮಹತ್ವವಿದೆ. ತ್ರಿಮೂರ್ತಿಗಳ ಶಕ್ತಿಯಿಂದ ಸೃಷ್ಟಿಯಾದ ದುರ್ಗಾದೇವಿ. ಪಶ್ಚಿಮ ಬಂಗಾಳದವರಿಗೆ ಇದು ದೊಡ್ಡ ಹಬ್ಬ. ನಾಲ್ಕು ದಿನಗಳ ಕಾಲ ದುರ್ಗೆಗೆ ಅದ್ಧೂರಿ ಪೂಜೆ ನೆರವೇರಿಸಲಾಗುತ್ತದೆ.

ನವರಾತ್ರಿಯಲ್ಲಿ ದುರ್ಗೆ ಗಂಡನಮನೆಯಿಂದ ಭೂಕೋಲಕದಲ್ಲಿರುವ ತವರುಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಎಲ್ಲರಲ್ಲಿದೆ. ಹೀಗೆ ತವರು ಮನೆಗೆ ಬರುವ ದುರ್ಗೆಯನ್ನು ಬಂಗಾಳಿಗಳು ವಿಶೇಷವಾಗಿ ಅಲಂಕರಿಸಿ ಭಕ್ತಿಯಿಂದ ಆರಾಧಿಸುತ್ತಾರೆ.
ದುರ್ಗಾಷ್ಟಮಿ ದಿನ ಕುಮಾರಿ ಪೂಜೆಯ ಮಹತ್ವ:
ನವರಾತ್ರಿಯಲ್ಲಿ ಮಾಡುವ ಕುಮಾರಿ ಪೂಜೆ ಬಹಳ ಶ್ರೇಷ್ಟವಾದದ್ದು ಅದರಲ್ಲೂ ದುರ್ಗಾಷ್ಟಮಿಯ ದಿನ ಕುಮಾರಿ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಈ ದಿನ ಎರಡು ವರ್ಷದಿಂದ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕುಮಾರಿ ಪೂಜೆಯನ್ನು ಮಾಡಲಾಗುತ್ತದೆ. ಈ ಪುಟ್ಟ ಹೆಣ್ಣು ಮಕ್ಕಳನ್ನು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ರೂಪದಲ್ಲಿ ಪೂಜಿಸಲಾಗುತ್ತದೆ. ಭವಿಷ್ಯ ಪುರಾಣ ಹಾಗೂ ದೇವೀ ಭಾಗವತದಲ್ಲಿ ಕುಮಾರಿ ಪೂಜೆಗೆ ವಿಶೇಷ ಮಹತ್ವ ಇದೆ.
ಕನ್ಯಾ ಪೂಜೆಯ ಹೊರತು ನವರಾತ್ರಿ ಪೂರ್ಣವಾಗುವುದಿಲ್ಲ, ಪುರಾಣಗಳಲ್ಲೂ ಕುಮಾರಿ ಪೂಜೆಯ ಬಗ್ಗೆ ಉಲ್ಲೇಖವಿದೆ. ಮಕ್ಕಳಿಗೆ ಕೆಂಪು ಬಣ್ಣದ ಸೀರೆ ಉಡಿಸಬೇಕು. ಹಣೆಗೆ ಕುಂಕುಮ ಇಡಬೇಕು. ಒಡವೆಗಳಿಂದ ಅಲಂಕರಿಸಬೇಕು, ಬಳೆಯನ್ನು ತೊಡಿಸಿ ಹೂವನ್ನು ಮುಡಿಸಬೇಕು.
ದುರ್ಗಾಷ್ಟಮಿ ಶುಭ ಮುಹೂರ್ತ:
ಅಷ್ಟಮಿ ದಿನಾಂಕ ಆರಂಭ - 2021 ರ ಅಕ್ಟೋಬರ್ 12 ರಂದು ರಾತ್ರಿ 9.48 ರಿಂದ
ಅಷ್ಟಮಿ ತಿಥಿ ಮುಕ್ತಾಯ - 2021 ರ ಅಕ್ಟೋಬರ್ 13 ರಂದು, ರಾತ್ರಿ 8:7 ರವರೆಗೆ
ಅಮೃತ ಕಾಲ - 2021 ರ ಅಕ್ಟೋಬರ್ 13 ರಂದು ಬೆಳಿಗ್ಗೆ 3.23 ರಿಂದ 4.56 ರವರೆಗೆ
ಮಹಾಗೌರಿ ಪೂಜಾ ವಿಧಾನ:
ಆದಿಯಾಗಿ, ದುರ್ಗಾಷ್ಟಮಿಯಂದು ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ
- ಮರದ ಹಲಗೆಯ ಮೇಲೆ ಮಹಾಗೌರಿ ದೇವಿಯ ಪ್ರತಿಮೆ ಅಥವಾ ಚಿತ್ರವನ್ನು ಸ್ಥಾಪಿಸಿ ಗಂಗಾಜಲವನ್ನು ಸಿಂಪಡಿಸಿ.
- ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಹೂಜಿಯಲ್ಲಿ ನೀರು ತುಂಬಿದ ನಂತರ, ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಿ ಮತ್ತು ಕಲಶವನ್ನು ಸ್ಥಾಪಿಸಿ.
- ಇದರ ನಂತರ, ಶ್ರೀ ಗಣೇಶ, ವರುಣ, ನವಗ್ರಹ, ಷೋಡಶ ಮಾತೃಕಾ (16 ದೇವತೆಗಳು), ಸಪ್ತ ಘೃತ ಮಾತೃಕಾ ಇತ್ಯಾದಿಗಳನ್ನು ಮರದ ಹಲಗೆಯ ಮೇಲೆ ಇರಿಸಿ.
- ಈಗ ಮಹಾಷ್ಟಮಿ ಅಥವಾ ದುರ್ಗಾಷ್ಟಮಿ ವ್ರತದ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ ಮತ್ತು ಮಂತ್ರಗಳನ್ನು ಪಠಿಸುವಾಗ, ಮಹಾಗೌರಿ ಸೇರಿದಂತೆ ಎಲ್ಲಾ ದೇವತೆಗಳನ್ನು ಧ್ಯಾನಿಸಿ.
- ಈಗ ಮಹಾಗೌರಿಗೆ ಆಸನ, ಅಧ್ಯಾ, ಆಚಮನ, ಸ್ನಾನ, ಬಟ್ಟೆ, ಅದೃಷ್ಟ ಸೂತ್ರ, ಶ್ರೀಗಂಧ, ಕುಂಕುಮ, ಅರಿಶಿನ, ಸಿಂಧೂರ, ದುರ್ವಾ, ಆಭರಣ, ಹೂಗಳು, ಧೂಪ-ದೀಪ, ಹಣ್ಣು, ಪಾನ್, ದಕ್ಷಿಣೆ, ಆರತಿ, ಮಂತ್ರ ಇತ್ಯಾದಿಗಳ ನಂತರ ಪ್ರಸಾದವನ್ನು ವಿತರಿಸಿ.
- ಮಹಾ ಅಷ್ಟಮಿಯ ಪೂಜೆಯ ನಂತರ ಹೆಣ್ಣು ಮಕ್ಕಳಿಗೆ ಆಹಾರ ನೀಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ, ಮಹಾಗೌರಿಯು ಶುಭ ಫಲಿತಾಂಶಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.
ದುರ್ಗಾಷ್ಟಮಿ ಮಹತ್ವ:
ದುರ್ಗಾಷ್ಟಮಿ ದಿನದಂದು ವಿವಿಧ ರೀತಿಯ ಪೂಜಾ ವಿಧಿ ವಿಧಾನಗಳನ್ನು ಆಚರಿಸಲಾಗುವುದು. ಅನೇಕ ಹಿಂದೂ ಕುಟುಂಬಗಳಲ್ಲಿ ಈ ದಿನ ಕನ್ಯಾಪೂಜೆ ಮಾಡಲಾಗುವುದು, ಇದನ್ನು ಕನ್ಯಾ ಬೋಜ್ ಎಂದು ಕೂಡ ಕರೆಯಲಾಗುವುದು. ಈ ದಿನ ಮುಟ್ಟಿನ ಚಕ್ರ ಪ್ರಾರಂಭವಾಗದ 9 ಬಾಲಕಿಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ಸ್ವಾದಿಷ್ಟಕರವಾದ ಆಹಾರವನ್ನು ನೀಡಲಾಗುವುದು. ಈ ಬಾಲಕಿಯರನ್ನು ದುರ್ಗೆಯ ಅವತಾರ ಎಂದು ಪೂಜಿಸಲಾಗುವುದು. ಮನೆಗೆ ಆಹ್ವಾನಿಸಿದ ಬಾಲಕಿಯರ ಪಾದಗಳನ್ನು ತೊಳೆದು, ಕೆಂಪು ದಾರವನ್ನು ಕೈಗೆ ಕಟ್ಟಲಾಗುವುದು, ನಂತರ ಅವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಸಾಮಾನ್ಯವಾಗಿ ವಸ್ತ, ಮೇಕಪ್ ಬಾಕ್ಸ್ ಈ ರೀತಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications