Navratri 2022 Day 5: ನವರಾತ್ರಿ 5ನೇ ದಿನ ಸೆ. 30, ಸ್ಕಂದಮಾತಾ ಪೂಜೆ ಮಹತ್ವ, ಮುಹೂರ್ತ, ಮಂತ್ರ
ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಮಾ ಸ್ಕಂದಮಾತೆಯನ್ನು ನವರಾತ್ರಿ ಹಬ್ಬದ ಐದನೇ ದಿನದಂದು ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೇವಿ ಸ್ಕಂದಮಾತಾ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ಆಕೆಗೆ ನಾಲ್ಕು ಕೈಗಳಿವೆ. ಒಂದು ಕೈಯಲ್ಲಿ ಅವಳು ತನ್ನ ಮಗ ಸ್ಕಂದನ ಶಿಶು ರೂಪವನ್ನು ಹಿಡಿದಿದ್ದಾಳೆ ಮತ್ತು ಅವಳ ಇನ್ನೊಂದು ಕೈ ಅಭಯಮುದ್ರೆಯಲ್ಲಿದೆ. ಅದು ಎಲ್ಲಾ ಭಯಗಳನ್ನು ಹೋಗಲಾಡಿಸುತ್ತದೆ. ಜೊತೆಗೆ ತನ್ನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಹಿಡಿದಿದ್ದಾಳೆ. ಕಾರ್ತಿಕೇಯ ಮತ್ತು ಮುರುಗನ್ ಎಂದೂ ಕರೆಯಲ್ಪಡುವ ಸ್ಕಂದನ ತಾಯಿಯಾಗಿರುವುದರಿಂದ ಈಕೆಯನ್ನು ಸ್ಕಂದಮಾತಾ ಎಂದು ಹೆಸರನ್ನು ಪಡೆದುಕೊಂಡಿದ್ದಾಳೆ.
ನವರಾತ್ರಿಯಲ್ಲಿ ಪೂಜಿಸುವ ದುರ್ಗಾದೇವಿಯ ಒಂಬತ್ತು ಅವತಾರಗಳಲ್ಲಿ ನವದುರ್ಗೆಯ ಐದನೇ ರೂಪ ದೇವಿ ಸ್ಕಂದಮಾತಾ ತನ್ನ ಭಕ್ತರಿಗೆ ಶಕ್ತಿ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ. ಈ ವರ್ಷ ಸ್ಕಂದಮಾತೆಯನ್ನು ಇಂದು ಸೆಪ್ಟೆಂಬರ್ 30 ರಂದು ಪೂಜಿಸಲಾಗುತ್ತದೆ.
ನವರಾತ್ರಿ ದಿನ 5: ಪೂಜಾ ವಿಧಿ
ನವರಾತ್ರಿಯ 5 ನೇ ದಿನದಂದು ಭಕ್ತರು ಮುಂಜಾನೆ ಸ್ನಾನ ಮಾಡಿ ಹಳದಿ ಬಟ್ಟೆಗಳನ್ನು ಧರಿಸುತ್ತಾರೆ. ಆಶಾವಾದ, ಉತ್ತಮ ಆರೋಗ್ಯ, ಸಕಾರಾತ್ಮಕತೆ ಮತ್ತು ಸಂತೋಷಕ್ಕಾಗಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ. ನಂತರ ಆರಾಧಕರು ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ ಮತ್ತು ಅವಳಿಗೆ ಹಳದಿ ಹೂವುಗಳು, ಗಂಗಾಜಲ, ಕುಂಕುಮ ಮತ್ತು ತುಪ್ಪವನ್ನು ಅರ್ಪಿಸುತ್ತಾರೆ.

ನವರಾತ್ರಿ ದಿನ 5 ಬಣ್ಣ: ಹಸಿರು
ಈ ದಿನದ ಹಸಿರು ಬಣ್ಣವು ಪ್ರಕೃತಿ, ಬೆಳವಣಿಗೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ.
ನವರಾತ್ರಿ ದಿನ 5: ಮಂತ್ರ
ಸಿಂಹಾಸನಗತ ನಿತ್ಯಂ ಪದ್ಮಾಂಚಿತಾ ಕರದ್ವಯಾ
ಶುಭದಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ॥
ಓಂ ದೇವೀ ಸ್ಕಂದಮಾತಾಯೈ ನಮಃ
ನವರಾತ್ರಿ ದಿನ 5: ಶುಭ ಮುಹೂರ್ತ

ಮಂಗಳಕರ ಬ್ರಹ್ಮ ಮುಹೂರ್ತವು ಬೆಳಿಗ್ಗೆ 4:37 ರಿಂದ 5:25 ರವರೆಗೆ ಇರುತ್ತದೆ. ಆದರೆ ಅಮೃತ ಕಲ ಸಂಜೆ 6:18 ರಿಂದ 7:51 ರವರೆಗೆ ಕಾಣಿಸಿಕೊಳ್ಳುತ್ತದೆ. ಮತ್ತೊಂದೆಡೆ ವಿಜಯ ಮುಹೂರ್ತವು ಮಧ್ಯಾಹ್ನ 2:10 ರಿಂದ 2:58 ರವರೆಗೆ ಸಂಭವಿಸುತ್ತದೆ.
ನವರಾತ್ರಿ ದಿನ 5: ನೈವೇದ್ಯ
ಸ್ಕಂದಮಾತೆಯನ್ನು ಪೂಜೆ ವೇಳೆ ನೈವೇದ್ಯಕ್ಕಾಗಿ ಬಾಳೆಹಣ್ಣು ಅರ್ಪಿಸಲಾಗುತ್ತದೆ. ಕೆಲವು ಭಕ್ತರು ದೇವಿಯನ್ನು ಮೆಚ್ಚಿಸಲು ಬಾಳೆಹಣ್ಣಿನೊಂದಿಗೆ ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಾರೆ.

ನವರಾತ್ರಿ ದಿನ 5: ಮಹತ್ವ
ದೇವಿ ಸ್ಕಂದಮಾತೆಯನ್ನು ಸಂಪೂರ್ಣ ಭಕ್ತಿಯಿಂದ ಪೂಜಿಸುವವರಿಗೆ ಅವಳು ಸಂತೋಷ, ಸಮೃದ್ಧಿ ಮತ್ತು ಶಕ್ತಿಯನ್ನು ಅನುಗ್ರಹಿಸುತ್ತಾಳೆ ಎಂದು ನಂಬಲಾಗಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications