ನವರಾತ್ರಿ:ಯಾವ ದೇವರಿಗೆ ಯಾವ ಹೂವು ಶ್ರೇಷ್ಠ?

ಹಿಂದೂ ಧರ್ಮದ ಪ್ರಕಾರ ಒಂದೊಂದು ದೇವರಿಗೂ ಒಂದೊಂದು ಶ್ರೇಷ್ಟ ಹೂವುಗಳನ್ನು ಅರ್ಪಿಸಲಾಗುತ್ತದೆ. ಯಾವ ದೇವರಿಗೆ ಯಾವ ಹೂವು ಶ್ರೇಷ್ಠ ಎಂದು ತಿಳಿದುಕೊಂಡರೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಬಹುದು.
ಯಾವ ದೇವರಿಗೆ ಯಾವ ಹೂವು ಅರ್ಪಿಸಬೇಕು?
ಗಣೇಶ: ಗಣಪನಿಗೆ ಗರಿಕೆ ಶ್ರೇಷ್ಠ. ವಿಘ್ನವಿನಾಶಕನಿಗೆ ಬಿಳಿ ಎಕ್ಕದ ಹೂವನ್ನು ಅರ್ಪಿಸಿದರೆ ವಿಘ್ನಗಳನ್ನು ನಿವಾರಿಸಿ ಬಾಳು ಹಸನಾಗುವಂತೆ ಮಾಡುವನು ಎಂದು ನಂಬಲಾಗಿದೆ.
ಶಿವ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠ. ಇದರ ಹೊರತಾಗಿ ತುಂಬೆ ಹೂವು, ಮಂದಾರ ಮತ್ತು ಕಣಗಿಲೆ ಹೂವು ಶಿವನಿಗೆ ತುಂಬಾ ಪ್ರಿಯ. ಬಿಳಿ ಎಕ್ಕದ ಹೂವು, ಸಂಪಿಗೆ ಮತ್ತು ಲಿಂಗದ ಹೂವನ್ನು ಅರ್ಪಿಸಿದರೆ ಶಿವ ಪ್ರಸನ್ನನಾಗುವನು ಎಂದು ಹಿರಿಯರ ವಾಡಿಕೆ.
ವಿಷ್ಣು: ವಿಷ್ಣುವನ್ನು ಒಲಿಸಿಕೊಳ್ಳಲು ತುಳಸಿ ಅರ್ಪಿಸಬಹುದು. ಒಂದು ತುಳಸಿ ಎಲೆ ಆತನನ್ನು ಸಂತೋಷಗೊಳಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ತುಳಸಿ ಹೊರತಾಗಿ ಪಾರಿಜಾತ, ಶಂಕಪುಷ್ಪ ಅಥವಾ ಅಪರಾಜಿತ, ಅಶೋಕ ಪುಷ್ಟ ಕಮಲ ಮುಂತಾದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು.
ಪಾರ್ವತಿ: ಪಾರ್ವತಿಗೆ ಸಲ್ಲಿಸುವ ಹೂವುಗಳನ್ನು ಲಲಿತ ಸಹಸ್ರನಾಮದಲ್ಲಿ ವಿವರಿಸಲಾಗಿದೆ. ಪಾರ್ವತಿ ದೇವಿಗೆ ಇಷ್ಟವಾಗುವ ದಾಸವಾಳ, ಚಂಪಕ, ಮಲ್ಲಿಗೆ, ಪುನ್ನಾಗ ಹೂವು ಮತ್ತು ದವನ, ಮರುಗವನ್ನು ಪೂಜೆಗೆ ಅರ್ಪಿಸಲಾಗುತ್ತದೆ.
ದುರ್ಗಾ ದೇವಿ: ದುರ್ಗೆಗೆ ಕೆಂಪು ಬಣ್ಣದ ಎಲ್ಲ ಹೂವುಗಳೂ ಇಷ್ಟ. ದಾಸವಾಳ, ಅಶೋಕ ಪುಷ್ಪ, ಕಣಗಿಲೆ ಹೂವನ್ನು ದುರ್ಗೆಗೆ ನೀಡಲಾಗುತ್ತದೆ.
ಲಕ್ಷ್ಮಿ: ಲಕ್ಷ್ಮಿಗೆ ಕಮಲದ ಹೂವೆಂದರೆ ಶ್ರೇಷ್ಠ. ಸೇವಂತಿಗೆ, ಕೇದಗೆ, ಸಂಪಿಗೆ ಮುಂತಾದುವನ್ನು ವರವ ಕೊಡುವ ದೇವಿಗೆ ಅರ್ಪಿಸಿ ವರವನ್ನು ಪಡೆಯಬಹುದು.
ಸರಸ್ವತಿ: ಶ್ವೇತವರ್ಣೆ ಸರಸ್ವತಿಗೆ ಬಿಳಿ ಕಮಲ, ಸುವಾಸನೆ ಬೀರುವ ಪಾರಿಜಾತವನ್ನು ಅರ್ಪಿಸಿದರೆ ಒಳ್ಳೆಯ ವಿದ್ಯೆ ಕರುಣಿಸುವಳು ಎನ್ನಲಾಗಿದೆ.
ಹನುಮ: ಹನುಮನಿಗೆ ತುಳಸಿಹಾರ ಮತ್ತು ವಿಳ್ಳೆಯದೆಲೆಯ ಹಾರವನ್ನು ಹಾಕಿದರೆ ಒಳಿತನ್ನು ಕರುಣಿಸುವನು ಎಂದು ನಂಬಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications