ನವರಾತ್ರಿ:ಯಾವ ದೇವರಿಗೆ ಯಾವ ಹೂವು ಶ್ರೇಷ್ಠ?

ಹಿಂದೂ ಧರ್ಮದ ಪ್ರಕಾರ ಒಂದೊಂದು ದೇವರಿಗೂ ಒಂದೊಂದು ಶ್ರೇಷ್ಟ ಹೂವುಗಳನ್ನು ಅರ್ಪಿಸಲಾಗುತ್ತದೆ. ಯಾವ ದೇವರಿಗೆ ಯಾವ ಹೂವು ಶ್ರೇಷ್ಠ ಎಂದು ತಿಳಿದುಕೊಂಡರೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಬಹುದು.
ಯಾವ ದೇವರಿಗೆ ಯಾವ ಹೂವು ಅರ್ಪಿಸಬೇಕು?
ಗಣೇಶ: ಗಣಪನಿಗೆ ಗರಿಕೆ ಶ್ರೇಷ್ಠ. ವಿಘ್ನವಿನಾಶಕನಿಗೆ ಬಿಳಿ ಎಕ್ಕದ ಹೂವನ್ನು ಅರ್ಪಿಸಿದರೆ ವಿಘ್ನಗಳನ್ನು ನಿವಾರಿಸಿ ಬಾಳು ಹಸನಾಗುವಂತೆ ಮಾಡುವನು ಎಂದು ನಂಬಲಾಗಿದೆ.
ಶಿವ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠ. ಇದರ ಹೊರತಾಗಿ ತುಂಬೆ ಹೂವು, ಮಂದಾರ ಮತ್ತು ಕಣಗಿಲೆ ಹೂವು ಶಿವನಿಗೆ ತುಂಬಾ ಪ್ರಿಯ. ಬಿಳಿ ಎಕ್ಕದ ಹೂವು, ಸಂಪಿಗೆ ಮತ್ತು ಲಿಂಗದ ಹೂವನ್ನು ಅರ್ಪಿಸಿದರೆ ಶಿವ ಪ್ರಸನ್ನನಾಗುವನು ಎಂದು ಹಿರಿಯರ ವಾಡಿಕೆ.
ವಿಷ್ಣು: ವಿಷ್ಣುವನ್ನು ಒಲಿಸಿಕೊಳ್ಳಲು ತುಳಸಿ ಅರ್ಪಿಸಬಹುದು. ಒಂದು ತುಳಸಿ ಎಲೆ ಆತನನ್ನು ಸಂತೋಷಗೊಳಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ತುಳಸಿ ಹೊರತಾಗಿ ಪಾರಿಜಾತ, ಶಂಕಪುಷ್ಪ ಅಥವಾ ಅಪರಾಜಿತ, ಅಶೋಕ ಪುಷ್ಟ ಕಮಲ ಮುಂತಾದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು.
ಪಾರ್ವತಿ: ಪಾರ್ವತಿಗೆ ಸಲ್ಲಿಸುವ ಹೂವುಗಳನ್ನು ಲಲಿತ ಸಹಸ್ರನಾಮದಲ್ಲಿ ವಿವರಿಸಲಾಗಿದೆ. ಪಾರ್ವತಿ ದೇವಿಗೆ ಇಷ್ಟವಾಗುವ ದಾಸವಾಳ, ಚಂಪಕ, ಮಲ್ಲಿಗೆ, ಪುನ್ನಾಗ ಹೂವು ಮತ್ತು ದವನ, ಮರುಗವನ್ನು ಪೂಜೆಗೆ ಅರ್ಪಿಸಲಾಗುತ್ತದೆ.
ದುರ್ಗಾ ದೇವಿ: ದುರ್ಗೆಗೆ ಕೆಂಪು ಬಣ್ಣದ ಎಲ್ಲ ಹೂವುಗಳೂ ಇಷ್ಟ. ದಾಸವಾಳ, ಅಶೋಕ ಪುಷ್ಪ, ಕಣಗಿಲೆ ಹೂವನ್ನು ದುರ್ಗೆಗೆ ನೀಡಲಾಗುತ್ತದೆ.
ಲಕ್ಷ್ಮಿ: ಲಕ್ಷ್ಮಿಗೆ ಕಮಲದ ಹೂವೆಂದರೆ ಶ್ರೇಷ್ಠ. ಸೇವಂತಿಗೆ, ಕೇದಗೆ, ಸಂಪಿಗೆ ಮುಂತಾದುವನ್ನು ವರವ ಕೊಡುವ ದೇವಿಗೆ ಅರ್ಪಿಸಿ ವರವನ್ನು ಪಡೆಯಬಹುದು.
ಸರಸ್ವತಿ: ಶ್ವೇತವರ್ಣೆ ಸರಸ್ವತಿಗೆ ಬಿಳಿ ಕಮಲ, ಸುವಾಸನೆ ಬೀರುವ ಪಾರಿಜಾತವನ್ನು ಅರ್ಪಿಸಿದರೆ ಒಳ್ಳೆಯ ವಿದ್ಯೆ ಕರುಣಿಸುವಳು ಎನ್ನಲಾಗಿದೆ.
ಹನುಮ: ಹನುಮನಿಗೆ ತುಳಸಿಹಾರ ಮತ್ತು ವಿಳ್ಳೆಯದೆಲೆಯ ಹಾರವನ್ನು ಹಾಕಿದರೆ ಒಳಿತನ್ನು ಕರುಣಿಸುವನು ಎಂದು ನಂಬಲಾಗಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications