ದಸರಾ ಕವನ:ವಿಜಯ ದೊರಕಲಿ ನಮಗೆ

ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||
(ಸುಭಾಷಿತರತ್ನಭಾಂಡಾಗಾರ)
ಗೆಲಬೇಕು ಲಂಕೆಯನು, ಪದಕ್ರಮಿಸಬೇಕು ಕಡಲನು
ವೈರಿಯವ ರಾವಣನು, ಯುದ್ಧದಿ ನೆರವು ಕಪಿಗಳದು
ಆದರೂ ರಾಮನೊಬ್ಬನೆ ರಾಕ್ಷಸಕುಲವನಳಿಸಿದನು
ಶ್ರೇಷ್ಠರಿಗೆ ಸಿದ್ಧಿ ಸತ್ತ್ವದಲಿಹುದು, ಸಾಮಗ್ರಿಯಲಿರದು
***
ವಿಜಯ ದೊರಕಲಿ ನಮಗೆ ದಶ ದಿಕ್ಕುಗಳಮೇಲೆ;
ಯಶದ ಸೌಧ ಏಳಲಿ ಯತ್ನದ ತಳಹದಿಮೇಲೆ
ವಿಜಯ ದೊರಕಲಿ ನಮಗೆ ನವ ದ್ವಾರಗಳಮೇಲೆ;
ಅವು ನಮ್ಮ ಅಂಕೆಯಲ್ಲಿರಲಿ, ಮನ ಗುರುಶಾಲೆ
ವಿಜಯ ದೊರಕಲಿ ನಮಗೆ ಅಷ್ಟ ಮದಗಳಮೇಲೆ;
ಇಷ್ಟವಾಗಲಿ ವಿನಯ, ದೃಷ್ಟಿಯಿರಲಿ ನೆಲದಮೇಲೆ
ವಿಜಯ ದೊರಕಲಿ ನಮಗೆ ಸಪ್ತ ವ್ಯಸನಗಳಮೇಲೆ;
ಪ್ರಾಪ್ತವಾಗಲಿ ಹಿಡಿತ ಕೋಪ-ಕಾಮಗಳಮೇಲೆ
ವಿಜಯ ದೊರಕಲಿ ನಮಗೆ ಅರಿಷಡ್ವರ್ಗಗಳಮೇಲೆ;
ಅರಿವನಾವರಿಸಿರುವ ಅಂಧಕಾರದಮೇಲೆ
ವಿಜಯ ದೊರಕಲಿ ನಮಗೆ ಪಂಚ ಪಾತಕಗಳಮೇಲೆ;
ಕಿಂಚಿತ್ತಾದರೂ ಗೌರವವಿರಲಿ ಜೀವನಮೌಲ್ಯದಮೇಲೆ
ವಿಜಯ ದೊರಕಲಿ ನಮಗೆ ಕ್ರೂರ ಚತುಷ್ಟಯದಮೇಲೆ;
ಹಾರವಾಗಲಿ ಹೃದಯಕೆ ಅಂತಃಕರಣಮಾಲೆ
ವಿಜಯ ದೊರಕಲಿ ನಮಗೆ ತಾಪತ್ರಯದಮೇಲೆ;
ಈ ಪ್ರಪಂಚವು ಆ ದೇವದೇವನ ಲೀಲೆ
ವಿಜಯ ದೊರಕಲಿ ನಮಗೆ ಸ್ವೇಚ್ಛೆ-ಸ್ವೈರದಮೇಲೆ;
ಎಚ್ಚರವಿರಲಿ ಸದಾ ಇಹಪರಗಳಮೇಲೆ
ವಿಜಯ ದೊರಕಲಿ ನಮಗೆ ಭವದ ಮಾಯೆಯಮೇಲೆ;
ಅವ ಮೊದಲು; ನಾನು, ನನ್ನದು ಎಲ್ಲ ಆಮೇಲೆ
ಟಿಪ್ಪಣಿ:
* ದಶ ದಿಕ್ಕುಗಳು: ಎಂಟು ದಿಕ್ಕುಗಳು+ಊರ್ಧ್ವದಿಶೆ+ಅಧೋದಿಶೆ.
* ನವ ದ್ವಾರಗಳು: ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ.
* ಅಷ್ಟ ಮದಗಳು: ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ.
* ಸಪ್ತ ವ್ಯಸನಗಳು: ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ (ಇವು ಕೋಪಜನ್ಯ), ಬೇಟೆ, ಜೂಜು, ಸ್ತ್ರೀ, ಪಾನ (ಇವು ಕಾಮಜನ್ಯ).
* ಅರಿಷಡ್ವರ್ಗಗಳು: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
* ಪಂಚಪಾತಕಗಳು: ಬ್ರಹ್ಮಹತ್ಯೆ, ಸುರಾಪಾನ, (ಸ್ವರ್ಣ)ಸ್ತೇಯ(=ಕಳ್ಳತನ), ಗುರುಭಾರ್ಯಾ ಗಮನ ಮತ್ತು ಇವುಗಳನ್ನು ಮಾಡುವವರ ಸಹವಾಸ.
* ಕ್ರೂರ ಚತುಷ್ಟಯ: ದುರ್ಮನ, ದುರ್ಬುದ್ಧಿ, ದುರಹಂಕಾರ, ದುಶ್ಚಿತ್ತ.
* ಅಂತಃಕರಣ ಚತುಷ್ಟಯ: ಸುಮನ, ಸದ್ಬುದ್ಧಿ, ನಿರಹಂಕಾರ, ಸತ್ಚಿತ್ತ.
* ತಾಪತ್ರಯ: ಆಧ್ಯಾತ್ಮಿಕ ದುಃಖ, ಆಧಿಭೌತಿಕ ದುಃಖ, ಆಧಿದೈವಿಕ ದುಃಖ.
* ದೋಷದ್ವಯ: ಸ್ವೇಚ್ಛೆ, ಸ್ವೈರ.
* ಏಕಭ್ರಾಂತಿ: ಭವದ ಮಾಯೆ.
* ಅವ = ಭಗವಂತ.
ನಾಡಹಬ್ದ ದಸರಾ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications