ವಿಜಯ ದಶಮಿಯಂದು 'ಹುಲಿ' ಮರಿ ಕಣಕ್ಕೆ

ಶಿವ ಸೇನಾ ಮುಖ್ಯಸ್ಥ 84 ವರ್ಷದ ಬಾಳಾ ಠಾಕ್ರೆ, ಅವರ ಮಗ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ಜೊತೆಗೆ ಮೊಮ್ಮಗ 20 ವರ್ಷದ ಇತಿಹಾಸ ಪದವಿ ವಿದ್ಯಾರ್ಥಿ ಆದಿತ್ಯ ಸಾರ್ವಜನಿಕವಾಗಿ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಶಿವಾಜಿ ಪಾರ್ಕ್ ನಲ್ಲಿ ಸಮಾರಂಭ ನಡೆಸಲು ಬಾಂಬ್ ಹೈ ಕೋರ್ಟ್ ಕೊನೆಗೂ ಶಿವಸೇನೆಗೆ ಅನುಮತಿ ನೀಡಿದ್ದು, ಅದಿತ್ಯ ಅವರ ನೇತೃತ್ವದ ಯುವ ಸೇನಾ ವಿಭಾಗಕ್ಕೆ ಇಂದು ಚಾಲನೆ ನೀಡಲಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು, ವಿಜಯ ದಶಮಿ ಸಂಭ್ರಮ ಮುಗಿಲು ಮುಟ್ಟಲಿದೆ. ಆದರೆ, ಮೆರವಣಿಗೆ ಸಂದರ್ಭದಲ್ಲಿ ನಡೆಸುವ ಗದ್ದಲ, ಶಬ್ದದ ಪ್ರಮಾಣ 50 ಡೆಸಿಬೆಲ್ಸ್ ಮೀರಬಾರದು ಎಂಬ ಬಾಂಬೆ ಹೈ ಕೋರ್ಟ್ ನೀಡಿರುವ ಆದೇಶ ಎಷ್ಟರಮಟ್ಟಿಗೆ ಪಾಲಿಸಲಾಗುವುದು ಎಂಬುದಕ್ಕೆ ಉತ್ತರವಿಲ್ಲ.
ನಾಡಹಬ್ದ ದಸರಾ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ಕಿಸಿ












Click it and Unblock the Notifications