ದಸರಾ : ಇಲ್ಲಿವೆ ಸರಕಾರಿ ಸವಲತ್ತುಗಳು

ಹಮ್ಮಿಕೊಂಡಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಐದು ದಿನಗಳವರೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸೋದ್ಯಮ ನಿಗಮ ವತಿಯಿಂದ ಈ ಚಾರ್ಟರ್ ವಿಮಾನ ಸಂಚಾರವನ್ನು ಪ್ರವಾಸಿಗರಿಗಾಗಿ ಹಾಗೂ ಇತರ ಸಾರ್ವಜನಿಕರಿಗಾಗಿ ವಿಶೇಷವಾದ (ರಿಯಾಯಿತಿ) ದರದಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ವಿಮಾನ ಪ್ರವಾಸ ಏರ್ಪಡಿಸಲಾಗುವುದು ಎಂದರು.
ಈ ವಿಮಾನ ಪ್ರವಾಸವು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಅಂದರೆ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಸೋಮನಾಥಪುರ, ಶ್ರೀರಂಗಪಟ್ಟಣ, ಬೃಂದಾವನ ಗಾರ್ಡನ್ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿರುವ ಹೋಟೆಲ್ ಮಯೂರ ರಿವರ್ ವ್ಯೂ ನಲ್ಲಿ ಒಂದು ದಿನದ ವಾಸ್ತವ್ಯವನ್ನು ಒಳಗೊಂಡಿರುತ್ತದೆ.
ಈ ಎಲ್ಲಾ ಸೌಲಭ್ಯವು ಪ್ರಕಟಿಸಿದ ದರದಲ್ಲಿ ಸೇರಿದ್ದು, ಪ್ರವಾಸಿಗರನ್ನು ಬಾದಾಮಿ ಹೌಸ್ ಬಳಿಯಿಂದ ಕರೆದೊಯ್ದು ಪ್ರವಾಸದ ನಂತರ ಮತ್ತೆ ಬಾದಾಮಿ ಹೌಸ್ ಬಳಿಗೆ ತಂದು ಬಿಡಲಾಗುವುದು. ಇದಕ್ಕೆ ತಗಲಲಿರುವ ಅಂದಾಜು ವೆಚ್ಚಗಳು ಹೀಗಿವೆ. ಸ್ಮಾರಕಗಳಿಗೆ ಪ್ರವೇಶ ಶುಲ್ಕ, ಮಧ್ಯಾಹ್ನದ ಹಾಗೂ ರಾತ್ರಿಯ ಊಟ ಮತ್ತು ವಾಸ್ತವ್ಯದ ವೆಚ್ಚ ಸೇರಿ ಒಬ್ಬರಿಗೆ ರೂ. 5500, ಇಬ್ಬರಿಗೆ ರೂ.9,900 ಹಾಗೂ ಮೂವರಿಗೆ ರೂ.13,900 ಗಳಾಗಿರುತ್ತವೆ. ಒಂದೇ ಕುಟುಂಬದ ನಾಲ್ಕು ಜನರಿಗೆ ರೂ.17,900 ಗಳಾಗಲಿದೆ ಎಂದರು.
ನಂತರದ ದಿನಗಳಲ್ಲಿ, ರಾಜ್ಯ ಪ್ರವಾಸೋದ್ಯಮ ನಿಗಮವು ಈ ರೀತಿಯ ಚಾರ್ಟರ್ ವಿಮಾನದ ಪ್ಯಾಕೇಜ್ ಟೂರುಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇದನ್ನು ಮೈಸೂರಿನಿಂದ ಆರಂಭಿಸಿ, ವಾರಾಂತ್ಯಗಳಲ್ಲಿ ಇತರ ನಗರಗಳಾದ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮತ್ತು ಗೋವಾಗಳಿಂದಲೂ ನಡೆಸಲು ಉದ್ದೇಶಿಸಿದೆ. ಈ ಪ್ಯಾಕೇಜ್ ಟೂರುಗಳಿಗೆ ಪ್ರವಾಸಿಗರಿಂದ ದೊರೆಯಬಹುದಾದ ಉತ್ತೇಜನ ಹಾಗೂ ಪ್ರತಿಕ್ರಿಯೆಯನ್ನು ಅವಲಂಬಿಸಿ ಈ ವಿಶೇಷ ಪ್ರವಾಸಗಳನ್ನು ಪ್ರತಿ ವಾರದಲ್ಲೂ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದು ಜನಾರ್ದನರೆಡ್ಡಿ ಹೇಳಿದರು.
ಅದೇ ಮಾದರಿಯಲ್ಲಿ, ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ನಿಗಮದ ಮೂಲಕ ಈ ಚಾರ್ಟರ್ ವಿಮಾನ ಸಂಚಾರವನ್ನು ಜನವರಿ 2010 ರಲ್ಲಿ ಹಂಪಿಯಲ್ಲಿ ನಡೆಯಲಿರುವ 500 ನೇ ವರ್ಷದ ಶ್ರೀ ಕೃಷ್ಣದೇವರಾಯರ ಸಿಂಹಾಸನಾರೋಹಣ ಉತ್ಸವ ಸಂದರ್ಭದಲ್ಲಿ ಬೆಂಗಳೂರಿನಿಂದ ಹಂಪಿಗೆ ನಡೆಸಲು ಉದ್ದೇಶಿಸಿದೆ. ಇದಲ್ಲದೆ, ಒಂದು ವಿಶೇಷ ಪ್ಯಾಕೇಜ್ನ ಅಡಿಯಲ್ಲಿ ಜನವರಿ 2010 ರ ಮಾಹೆಯಲ್ಲಿ ಹಂಪಿಗೆ ವಿಮಾನ ಸಂಚಾರ ಆರಂಭಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ತೋರಣಗಲ್ ನಲ್ಲಿರುವ ವಿಮಾನ ನಿಲ್ದಾಣವನ್ನು ಬಳಸಲಾಗುವುದು. ತದನಂತರ, ಪ್ರವಾಸೋದ್ಯಮ ಇಲಾಖೆಯು ನಿಗಮದ ವತಿಯಿಂದ ಇಂತಹ ಚಾರ್ಟರ್ ವಿಮಾನಗಳ ಪ್ರವಾಸವನ್ನು ಇತರ ಪ್ರವಾಸಿ ಕೇಂದ್ರಗಳಿಂದ ಅಂದರೆ, ಚೆನ್ನೈ, ದೆಹಲಿ, ಮುಂಬೈ ಮತ್ತು ಗೋವಾ ಗಳಿಂದ ವಾರಾಂತ್ಯಗಳಲ್ಲಿ ಆರಂಭಿಸಲು ಹಾಗೂ ಪ್ರವಾಸಿಗರಿಂದ ದೊರಕುವ ಪ್ರತಿಕ್ರಿಯೆಯನ್ನು ಆಧರಿಸಿ ನಿರಂತರವಾಗಿ ನಡೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
(ದಟ್ಸ್ ಕನ್ನಡವಾರ್ತೆ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications