ಮೈಸೂರು : ಸೆ.18 ರಂದು ಫೋಟೋಗ್ರಾಫಿ ಪ್ರದರ್ಶನ

ವನ್ಯ ಜೀವಿಗಳ ಫೋಟೋಗ್ರಾಫಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಕೃಪಾಕರ ಮತ್ತು ಸೇನಾನಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್ ಎ ರಾಮದಾಸ್, ಶಾಸಕರಾದ ಎಚ್ ಎಸ್ ಶಂಕರಲಿಂಗೇಗೌಡ, ಉಧ್ಯಮಿ ಪಿ ವಿ ಗಿರಿ, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕ ಕೆ ಬಿ ಗಣಪತಿ, ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟೆ, ಅಹಿಂದ ಯುವ ಘಟಕದ ಅಧ್ಯಕ್ಷ ಗಿರಿರಾಜ್ ಭಾಗವಹಿಸುವರು.
ಪ್ರಶಸ್ತಿ ವಿಜೇತ ಫೋಟೋಗ್ರಾಫರ್ ಗಳಾದ ಎಂ ಎ ಶ್ರೀರಾಮ್, ಅನುರಾಗ್ ಬಸವರಾಜ್, ನಾಗೇಶ್ ಪಣತ್ತಲೆ, ಹಂಪಾ ನಾಗರಾಜ್ ಮತ್ತು ಎಂ ಆರ್ ಮಧುಸೂಧನ್ ಫೋಟೋಗ್ರಾಫಿ ಪ್ರದರ್ಶನ ಏರ್ಪಡಿಸಲಾಗುವುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications