World Elephant Day: ಮೈಸೂರಿನ ‘ಜಂಬೂ ಸವಾರಿ’ ಗಜಪಡೆಗಳ ವಿಶೇಷ ಸಂಗತಿಗಳು

ವಿಶ್ವ ವಿಖ್ಯಾತ ಮೈಸೂರು ದಸರಾ ಆನೆಗಳು ಮೈಸೂರಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿವೆ. ಈ ವರ್ಷದ ವಿಶ್ವ ವಿಖ್ಯಾತ ಮೈಸೂರು ದಸರಾ ಸೆಪ್ಟೆಂಬರ್ 26ರಂದು ಪ್ರಾರಂಭವಾಗುತ್ತದೆ ಮತ್ತು ಜಂಬೂ ಸವಾರಿಯು ಅಕ್ಟೋಬರ್ 5 ರಂದು ವಿಜಯದಶಮಿಯ ದಿನ ನಡೆಯಲಿದೆ. ಇಂದು ವಿಶ್ವ ಆನೆ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಆನೆಗಳು ಯಾವಾಗಲೂ ಮೈಸೂರನ ದಸರಾ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಮೈಸೂರು ದಸರೆಯ ಆನೆಗಳು ತುಂಬಾ ವಿಶೇಷವಾಗಿವೆ.

Recommended Video

      World Elephant Day SPECIAL: cute baby elephant entered home because of flood | *India | Oneindia

      ಮೈಸೂರು ಅರಮನೆ ಮೈದಾನದಲ್ಲಿ ದಸರಾ ಜಂಬೂಗಳಿಗೆ ಸಾಂಪ್ರದಾಯಿಕ ಆರತಿಯೊಂದಿಗೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಎಲ್ಲಾ ಆನೆಗಳಿಗೆ ಪೂಜೆ ಸಲ್ಲಿಸಿದರು. ಎಲ್ಲಾ ದಸರಾ ಆನೆಗಳು ಬೆಳಿಗ್ಗೆಅರಮನೆಯ ಜಯಮಾರ್ತಾಂಡ ಗೇಟ್‌ಗೆ ಆಗಮಿಸಿ ಸ್ವಾಗತ ಕೋರಿದವು. ಅಂಬಾರಿ ಆನೆ ಅಭಿಮನ್ಯು ಭೀಮ, ಮಹೇಂದ್ರ, ಗೋಪಾಲಸ್ವಾಮಿ ಅರ್ಜುನ ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಎಲ್ಲರ ಕಣ್ಮನ ಸೆಳೆದವು.

      ಆನೆಗಳು ತಂಗಲಿರುವ ಸ್ಥಳದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಪೂಜೆ ಸಲ್ಲಿಸಿದ ನಂತರ ಸೋಮಶೇಖರ್ ಕಾವಾಡಿಗಳಿಗೆ ಮತ್ತು ಮಾವುತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ದಸರಾ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಮೈಸೂರಿನ ಪೀಠಾಧಿಪತಿ ಚಾಮುಂಡೇಶ್ವರಿ ದೇವಿಗೆ ಸಚಿವರು ಪೂಜೆ ಸಲ್ಲಿಸಿದರು.

      9 ಆನೆಗಳ ಮೊದಲ ತಂಡವು ಮೈಸೂರು ಅರಮನೆಗೆ

      9 ಆನೆಗಳ ಮೊದಲ ತಂಡವು ಮೈಸೂರು ಅರಮನೆಗೆ

      ಕರ್ನಾಟಕದ ಪಾರಂಪರಿಕ ನಗರ ಎಂದು ಕರೆಯಲ್ಪಡುವ ಮೈಸೂರು ದಸರಾ ಆಚರಣೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ವರ್ಷದ ಬೃಹತ್ ಉತ್ಸವಗಳಿಗೆ ಕ್ಷಣಗಣನೆಗಾಗಿ ಈಗಾಗಲೇ ಪ್ರಾರಂಭವಾಗಿದೆ. ಮೈಸೂರಿನಲ್ಲಿ ದಸರಾ ಆಚರಣೆಯಲ್ಲಿ ಆನೆಗಳು ಯಾವಾಗಲೂ ಅವಿಭಾಜ್ಯ ಅಂಗವಾಗಿದ್ದು, ಗಜಪಯಣದ ಅಂಗವಾಗಿ ಈಗಾಗಲೇ ಆಗಸ್ಟ್ 10 ರಂದು ಒಂಬತ್ತು ಆನೆಗಳ ಮೊದಲ ತಂಡವು ಮೈಸೂರು ಅರಮನೆಗೆ ಆಗಮಿಸಿದೆ.

      ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ಮೀಸಲು ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಮೈಸೂರು ದಸರಾದ ಮೊದಲ ಹಂತದ ಗಜಪಯಣವು ಭಾನುವಾರ ಆರಂಭವಾಯಿತು. ಗಜಪಯಣವು ಆಯಾ ಶಿಬಿರಗಳಿಂದ ಮೈಸೂರಿಗೆ ದಸರಾ ಆನೆಗಳ ಮೆರವಣಿಗೆಯನ್ನು ಸೂಚಿಸುತ್ತದೆ.
      ವಿಶ್ವ ಆನೆ ದಿನದಂದು ‘ಗಜಪಯಣ'ದ ಶುಭಕೋರಲಾಗುತ್ತದೆ ಏಕೆಂದರೆ ಮೈಸೂರಿನ ನಾಡ ದಸರಾ ಹಬ್ಬವನ್ನು ಯಶಸ್ವಿಯಾಗಿಸಲು ಆನೆಗಳು ಪಾತ್ರ ಪ್ರಮುಖವಾಗಿದೆ.

      ಆನೆ ಹಿಂಡನ್ನು ಮುನ್ನಡೆಸುತ್ತಿರುವ ಅಭಿಮನ್ಯು

      ಆನೆ ಹಿಂಡನ್ನು ಮುನ್ನಡೆಸುತ್ತಿರುವ ಅಭಿಮನ್ಯು

      ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ಹೊರವಲಯದಲ್ಲಿರುವ ವೀರನಹೊಸಹಳ್ಳಿಯಿಂದ ಮೈಸೂರು ಅರಮನೆಗೆ 14 ಆನೆಗಳು ಮೆರವಣಿಗೆ ಮೂಲಕ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಂಪ್ರದಾಯವು ಗಜಪಯಣವನ್ನು ಗಜಪಡೆ ಎಂದು ಕರೆಯಲಾಗುತ್ತದೆ. ಆನೆ ಹಿಂಡನ್ನು ಅಭಿಮನ್ಯು ಎಂಬ ಆನೆ ಮುನ್ನಡೆಸುತ್ತಿದ್ದು, ವಿಜಯದಶಮಿಯಂದು ಚಿನ್ನದ ಅಂಬಾರಿಯನ್ನು ಹೊತ್ತೊಯ್ಯಲಿದೆ.

      ಅರಮನೆ ಬರಲು ಮೈಸೂರು ನಗರದಲ್ಲಿ ಮೆರವಣಿಗೆ

      ಅರಮನೆ ಬರಲು ಮೈಸೂರು ನಗರದಲ್ಲಿ ಮೆರವಣಿಗೆ

      ವೀರನಹೊಸಹಳ್ಳಿಯಿಂದ ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ ಆನೆಗಳು ಮೂರು ದಿನಗಳ ಕಾಲ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆದು ಮೈಸೂರು ಅರಮನೆ ತಲುಪುತ್ತವೆ. ಈ ಹಿಂದೆ ಆನೆಗಳು ಮೈಸೂರು ಅರಮನೆಗೆ ಬರಲು 70 ಕಿಲೋಮೀಟರ್‌ಗಳಷ್ಟು ಮೆರವಣಿಗೆ ನಡೆಸುತ್ತಿದ್ದವು ಆದರೆ ಈ ಆನೆಗಳ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ, ಅರಣ್ಯ ಅಧಿಕಾರಿಗಳು ಅವುಗಳನ್ನು ಟ್ರಕ್‌ಗಳ ಮೂಲಕ ಸಾಗಿಸಲು ನಿರ್ಧರಿಸಿದರು ಮತ್ತು ಹೆಚ್ಚಿನ ಕಾಲ್ನಡಿಗೆಯ ದೂರವನ್ನು ಕಡಿತಗೊಳಿಸಿದರು. ಆದರೂ ಅರಮನೆ ತಲುಪಲು ಮೈಸೂರು ನಗರದಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ.

      ಎರಡನೇ ತಂಡ ಕೂಡ ಶೀಘ್ರದಲ್ಲೇ ಆಗಮನ

      ಎರಡನೇ ತಂಡ ಕೂಡ ಶೀಘ್ರದಲ್ಲೇ ಆಗಮನ

      ಈ ವರ್ಷ ಮೈಸೂರಿನಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ದಸರಾ ಆಚರಣೆಗಳು ನಡೆಯಲಿದ್ದು, ವಿಜಯದಶಮಿಯಂದು ‘ಜಂಬೂ ಸವಾರಿ' ಸಂದರ್ಭದಲ್ಲಿ ಅಭಿಮನ್ಯು ಕೂಡ ಹಿಂಡಿಯನ್ನು ಮುನ್ನಡೆಸಲಿದ್ದಾರೆ. ಒಂಬತ್ತು ಆನೆಗಳ ಮೊದಲ ತಂಡವನ್ನು ಅದ್ಧೂರಿಯಾಗಿ ಸ್ವಾಗತ ಮತ್ತು ಸ್ವೀಕರಿಸಲಾಗಿದೆ ಮತ್ತು ಎರಡನೇ ತಂಡ ಕೂಡ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+