ಕೆಸಿಆರ್ ಭೇಟಿಗೆ ಸ್ಟಾಲಿನ್ ಒಲ್ಲೆ ಎಂದಿದ್ದೇಕೆ? ಕಾರಣ ಹಲವು!
ಇದ್ದಕ್ಕಿದ್ದಂತೆ ತೃತೀಯ ರಂಗದ ಕನಸು ಹೊತ್ತು ಹೊರಟಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವೇಗಕ್ಕೆ ಬ್ರೇಕ್ ಹಾಕಿದ ಎಂಕೆ ಸ್ಟಾಲಿನ್ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತೃತೀಯ ರಂಗಕ್ಕೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ ಡಿಎಂಕೆ ನಾಯಕ ಸ್ಟಾಲಿನ್ ನಡೆಯ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ. ರಾಜಕೀಯದ ಆಳ ಅಗಲವನ್ನು ಅರಿತಿರುವ ಸ್ಟಾಲಿನ್ ಅವರಿಗೆ ಯಾವ ಸಂದರ್ಭದಲ್ಲಿ ಎಂಥ ನಡೆ ಇಡಬೇಕು ಎಂಬುದು ಗೊತ್ತಿಲ್ಲದ್ದೇನಲ್ಲ. ತಮಿಳುನಾಡಿನ ರಾಜಕೀಯದಲ್ಲೇ ಪಳಗಿರುವ ಅವರಿಗೆ ರಾಷ್ಟ್ರದ ರಾಜಕಾರಣದಲ್ಲಿ ಎಂಥ ಹೆಜ್ಜೆ ಇಡಬೇಕು ಎಂಬುದನ್ನು ಅರಿತುಕೊಳ್ಳುವುದು ಕಷ್ಟದ ಕೆಲಸವೂ ಅಲ್ಲ!
"ನಾನು ಚುನಾವಣೆಯ ಕೆಲಸದಲ್ಲಿ ಬ್ಯುಸಿ, ಭೇಟಿ ಮಾಡೋಕೆ ಆಗೋಲ್ಲ" ಎನ್ನುವ ಮೂಲಕ ಕೆಸಿಆರ್ ಗೆ ಮುಖಭಂಗವನ್ನುಂಟು ಮಾಡಿದ ಸ್ಟಾಲಿನ್, ಆ ಮೂಲಕ ತಮ್ಮ ಬೆಂಬಲ ಮಹಾಘಟಬಂಧನಕ್ಕೆ ಎಂದಿದ್ದಾರೆ. ಆದರೆ ಎಂದಿನಿಂದಲೂ ಕಾಂಗ್ರೆಸ್ ಗೆ ನಿಷ್ಠರಾಗಿರುವ ಸ್ಟಾಲಿನ್ ಅವರನ್ನು ಒಲಿಸಿಕೊಳ್ಳುವ ತಪ್ಪು ಪ್ರಯತ್ನವನ್ನು ಅದ್ಯಾವ ಆತ್ಮವಿಶ್ವಾಸದಲ್ಲಿ ಕೆಸಿಆರ್ ಮಾಡಿದರೋ ದೇವರೇ ಬಲ್ಲ!
ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡ ಕೆಸಿಆರ್ ಇದೀಗ ಬಿಜೆಪಿ ಕೆಂಗಣ್ಣಿಗೂ ಗುರಿಯಾಗಬಹುದು. ಆದರೆ ಸ್ಟಾಲಿನ್ ಮಾತ್ರ ಕೆಸಿಆರ್ ಭೇಟಿಗೆ ನಿರಾಕರಿಸಿ, ಕಾಂಗ್ರೆಸ್ ಪಾಲಿನ ಹೀರೋ ಆಗಿದ್ದು ಸತ್ಯ!

ಟಿಆರ್ ಎಸ್ ಬಳಿ ಇರೋದು 17 ಕ್ಷೇತ್ರ!
"ತೆಲಂಗಾಣದಲ್ಲಷ್ಟೇ ಬಲಿಷ್ಠವಾಗಿರುವ ಟಿಆರ್ ಎಸ್, ಅಬ್ಬಬ್ಬಾ ಅಂದ್ರೂ ಗೆಲ್ಲೋಕೆ ಸಾಧ್ಯವಿರೋದು ಕೇವಲ 17 ಕ್ಷೇತ್ರಗಳನ್ನು ಮಾತ್ರ. ಆ 17 ಕ್ಷೇತ್ರಗಳನ್ನಿಟ್ಟುಕೊಂಡು ತೃತೀಯ ರಂಗ ಎನ್ನುತ್ತ ಹೊರಟ ಕೆಸಿಆರ್ ಅವರನ್ನು ಬೆಂಬಲಿಸುವುದರಿಂದ ಯಾರಿಗೆ ಲಾಭ? ಅಕಸ್ಮಾತ್ ಎಸ್ಪಿ-ಬಿಎಸ್ಪಿ ಮೈತ್ರಿಕೂಟವೇನಾದರೂ ತೃತೀಯ ರಂಗದ ಮಾತನ್ನಾಡಿದ್ದರೆ ಕೊಂಚ ಯೋಚಿಸಬಹುದಿತ್ತು" ಎಂದು ಸ್ವತಃ ಸ್ಟಾಲಿನ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ಕಾಂಗ್ರೆಸ್ ಗೆ ನಿಷ್ಠರಾಗಿರುವ ಸ್ಟಾಲಿನ್
ಟಿಆರ್ ಎಸ್ ಮತ್ತು ಕಾಂಗ್ರೆಸ್ ಅನ್ನು ಒಂದು ತಕ್ಕಡಿಯಲ್ಲಿ ಇಟ್ಟು ತೂಗಿ ಲಾಭ ಯಾವುದರಿಂದ ಜಾಸ್ತಿ ಎಂದು ಸ್ಟಾಲಿನ್ ಈಗಾಗಲೇ ತೂಗಿ ನೋಡಿದ್ದಾರೆ. ಗರಿಷ್ಠ 17 ಸ್ಥಾನ ಗೆಲ್ಲಬಹುದಾದ ಟಿಆರ್ ಎಸ್ ಮತ್ತು ಕನಿಷ್ಠ 100 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದಾದ ಕಾಂಗ್ರೆಸ್ ನಡುವಲ್ಲಿ ಕಾಂಗ್ರೆಸ್ ಅನ್ನೇ ಸ್ಟಾಲಿನ್ ಆಯ್ದುಕೊಳ್ಳುವುದು ಸಹಜ.

ಹೀರೋ ಆದ ಸ್ಟಾಲಿನ್
ಕೆ.ಚಂದ್ರಶೇಖರ್ ರಾವ್ ಅವರನ್ನು ಸೌಜನ್ಯಕ್ಕೂ ಭೇಟಿಯಾಗದೆ ಸ್ಟಾಲಿನ್ ಕಾಂಗ್ರೆಸ್ ಪಾಲಿನ ಹೀರೋ ಆದರು. ಸ್ಟಾಲಿನ್ ಸೌಜನ್ಯಕ್ಕಾದರೂ ಕೆಸಿಆರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ, ನಂತರ ತೃತೀಯ ರಂಗದ ಆಫರ್ ಅನ್ನು ತಿರಸ್ಕರಿಸಿದ್ದರೆ ಬೇರೆ ಮಾತು. ಆದರೆ ಭೇಟಿಯನ್ನೇ ಮಾಡದೆ ಉಳುಯುವ ಮೂಲಕ ಸ್ಟಾಲಿನ್ ಕಾಂಗ್ರೆಸ್ ಪಾಲಿನ ಹೀರೋ ಆಗಿ ಉಳಿದರು.

ಕೈ ಸುಟ್ಟಿಕೊಂಡಿದ್ದು ಟಿಆರ್ ಎಸ್!
ಕಳೆದ ಲೋಕಸಭಾ ಚುನಾವಣೆಯ ನಂತರ ಎನ್ ಡಿಎ ಮೈತ್ರಿಕೂಟಕ್ಕೆ ಪರೋಕ್ಷ ಬೆಂಬಲ ನೀಡಿದ್ದ ಟಿಆರ್ ಎಸ್, ಬಿಜೆಪಿ ನಾಯಕರೊಂದಿಗೆ ಆತ್ಮೀಯವಾಗಿಯೇ ಇದ್ದರು. ಕೇಂದ್ರ ಸರ್ಕಾರದೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಆದರೆ ಇದೀಗ ಬಿಜೆಪಿ-ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗ ರಚಿಸುತ್ತೇನೆ ಎಂದು ಹೊರಟ ಅವರ ನಡೆಯಿಂದ ಬಿಜೆಪಿಯ ನಿಷ್ಠುರವನ್ನೂ ಅವರು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಎದುರಾದರೆ ಅಚ್ಚರಿಯಿಲ್ಲ.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications