ಈ ರೆಸ್ಟೋರೆಂಟ್ನಲ್ಲಿ ದುಡ್ಡು ಕೊಟ್ಟು ಕೆನ್ನೆಗೆ ಹೊಡಿಸಿಕೊಳ್ಳುವುದೂ ಮೆನುನಲ್ಲಿದೆ: ದಂಗಾಗಿಸುವ ವಿಡಿಯೋ ವೈರಲ್!
ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್ಗಳು ವಿವಿಧ ಖಾದ್ಯಗಳನ್ನು ಪ್ರಸ್ತುಪಡಿಸುತ್ತವೆ. ನಾನಾ ಬಗೆಯ ರುಚಿಯೊಂದಿಗೆ, ನೋಡಲು ಆಕರ್ಷಕವಾದ ಹಾಗೂ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಕಪಾಳಮೋಕ್ಷ ಮಾಡುವುದು ಮೆನುವಿನಲ್ಲಿದೆ.
ರೆಸ್ಟೋರೆಂಟ್ಗೆ ಬರುವ ಗ್ರಾಹಕರಿಗೆ ಮಹಿಳಾ ವೆಟರ್ ಕಪಾಳಮೋಕ್ಷ ಮಾಡುತ್ತಾರೆ. ಗ್ರಾಹಕರು ಸುಮ್ಮನೆ ಕುಳಿತು ಕೆನ್ನೆ ಕೆಂಪಾಗುವಷ್ಟು ಜೋರಾಗಿ ಹೊಡೆಸಿಕೊಳ್ಳುತ್ತಾರೆ. ಈ ವಿಡಿಯೋ ಕಂಡು ಜನ ಶಾಕ್ ಆಗಿದ್ದಾರೆ. ಪ್ರಪಂಚದಾದ್ಯಂತದ ರೆಸ್ಟೋರೆಂಟ್ಗಳು ತಮಗೆ ಸಾಧ್ಯವಾದಷ್ಟು ಗ್ರಾಹಕರನ್ನು ಸೆಳೆಯಲು ನವೀನ ವಿಧಾನಗಳನ್ನು ಬಳಸುತ್ತವೆ. ಆದರೆ ಜಪಾನ್ನ ನಗೋಯಾದಲ್ಲಿನ ಈ ರೆಸ್ಟೋರೆಂಟ್ನಲ್ಲಿ ವಿಶೇಷವಾದ ಸತ್ಕಾರ ಮಾಡಲಾಗುತ್ತದೆ.

ಜಪಾನ್ನ ನಗೋಯಾದಲ್ಲಿರುವ ಶಚಿಯಾ ಇಜಕಾಯ (Shachihoko-ya izakaya) ಎಂಬ ಹೆಸರಿನ ಈ ರೆಸ್ಟೋರೆಂಟ್ನಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು ಗ್ರಾಹಕರೇ ಬಯಸಿ ಬರುತ್ತಾರೆ. ಇದಕ್ಕಾಗಿ ಒಬ್ಬ ಗ್ರಾಹಕ ಎರಡು ಡಾಲರ್ ಕೊಡಬೇಕು. ಇದು ಜಪಾನ್ನಲ್ಲಿ ಅತ್ಯಂತ ಜಪ್ರಿಯವಾದ ರೆಸ್ಟೋರೆಂಟ್ ಆಗಿದೆ. ಇಲ್ಲಿಗೆ ಜನನೇ ಇಷ್ಟ ಪಟ್ಟು ಹೋಗುತ್ತಾರೆ. ಸ್ಪೆಷಲ್ ವೆಟರ್ ಕಡೆಯಿಂದ ಹೊಡೆಸಿಕೊಳ್ಳಲು ಒಬ್ಬ ವ್ಯಕ್ತಿ 3.4 ಡಾಲರ್ ಹಣವನ್ನು ಕೊಡಬೇಕಾಗುತ್ತದೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:-
ಹಾಗಂತ ಎಲ್ಲರೂ ಕೂಡ ಈ ರೆಸ್ಟೊರೆಂಟ್ನಲ್ಲಿ ಹೊಡೆಸಿಕೊಳ್ಳುವುದಿಲ್ಲ. ಹೊಡೆಸಿಕೊಳ್ಳುವುದಕ್ಕಾಗಿಯೇ ಹೋಗುವುದಿಲ್ಲ. ಅದಕ್ಕಾಗಿಯೇ ಸೆಷಲ್ ಕೊಠಡಿ ಇರುತ್ತದೆ. ನೋವಿನ ಅನುಭವವನ್ನು ಬಯಸುವವರು ಮಾತ್ರ ಇಲ್ಲಿಗೆ ಹೋಗುತ್ತಾರೆ. ಇಲ್ಲಿಗೆ ಹೋಗುವವರಿಗೆ ಮಾತ್ರ ಹೊಡೆಯಲಾಗುತ್ತದೆ. ಅದಕ್ಕಾಗಿ ಹಣವನ್ನು ಪಡೆಯಲಾಗುತ್ತದೆ. ಮಹಿಳಾ ಸಿಬ್ಬಂದಿ ಕೈಯಲ್ಲಿ ಹೊಡೆಸಿಕೊಳ್ಳಲು ಜನ ಉತ್ಸುಕರಾಗಿರುತ್ತಾರೆ. ಫುಡ್ ಕ್ಕಿಂತಲೂ ಈ ಸೇವೆಗೆ ಈ ರೆಸ್ಟೋರೆಂಟ್ನಲ್ಲಿ ತುಂಬಾ ಫೇಮಸ್ ಆಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications