WhatsApp: ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್
ವಿಶ್ವದಾದ್ಯಂತ ಬಳಕೆಯಲ್ಲಿರುವ ಮೆಟಾ ಕಂಪನಿಯ ವಾಟ್ಸಾಪ್ (WhatsApp) ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸ ಫೀಚರ್ವೊಂದನ್ನು ಪರಿಚಯಿಸಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ಇನ್ನು ಶೀಘ್ರದಲ್ಲಿಯೇ ವಾಟ್ಸಾಪ್ ಕ್ವಿಕ್ ಟ್ರಾನ್ಸ್ಲೇಷನ್ (Quick translation) ಎಂಬ ಹೊಸ ಫೀಚರ್ ಪರಿಚಯಿಸುವುದಾಗಿ ಮೆಟಾ ಪ್ರಕಟಿಸಿದೆ.
ಇದರಿಂದ ಭಾಷಾ ಅಡೆತಡೆಗಳು ಮುಕ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಫೀಚರ್ನಿಂದ ಹಲವು ಭಾಷಿಕರೊಂದಿಗೆ ಸುಲಭವಾಗಿ ಮಾತನಾಡಬಹುದು ಎಂದು ಹೇಳಲಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ಫೀಚರ್ನಿಂದಾಗಿ ಕೋಟ್ಯಂತರ ಬಳಕೆದಾರರಿಗೆ ಅನುಕೂಲ ಆಗಲಿದೆ.

ಸಾಮಾನ್ಯವಾಗಿ ಈಗ ವಾಟ್ಸಾಪ್ನಲ್ಲಿ ಚಾಟ್ ಮಾಡುವಾಗ ಭಾಷೆ ಬಹಳ ಮುಖ್ಯ. ಸದ್ಯ ಟೈಪ್, ಆಡಿಯೋ, ವಿಡಿಯೋ ಕಾಲ್ ಮೂಲಕ ವಾಟ್ಸಾಪ್ನಲ್ಲಿ ಸಂದೇಶ ಕಳಿಸಬಹುದು. ಇದರಲ್ಲಿ ಭಾಷೆ ಕೂಡ ಮಹತ್ವದ್ದಾಗಿದೆ. ಈಗ ನಾವು ಬೇರೆ ಭಾಷೆಯವರೊಂದಿಗೆ ಮಾತನಾಡಬೇಕೆಂದರೆ ಅಥವಾ ಅವರ ಭಾಷೆಯಲ್ಲಿ ಚಾಟ್ ಮಾಡುವುದು ಕಷ್ಟಸಾಧ್ಯ. ಆದರೆ ಈ ಫೀಚರ್ನಿಂದಾಗಿ ಬೇರೆ ಭಾಷೆಗಳು ಕೂಡ ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಬೇರೆ ಭಾಷೆಯವರ ಜೊತೆ ಮಾತನಾಡಲು ಟ್ರಾನ್ಸ್ಲೇಟ್ ಆಯ್ಕೆಯನ್ನು ಬಳಸಿಕೊಳ್ಳುತ್ತೇವೆ. ಅಲ್ಲಿಂದ ಅಕ್ಷರಗಳನ್ನು ಕೂಡಿಸಿಕೊಂಡು ಚಾಟ್ ಮಾಡುವ ವೇಳೆಗೆ ಸಾಕಾಗಿರುತ್ತೆ. ಹಾಗಾಗಿ ಆಪ್ ಮೂಲಕ ಅನುವಾದ ಮಾಡುವುದು ಸವಾಲಿನ ಕೆಲಸವಾಗಿದೆ. ಈ ಉದ್ದೇಶದೊಂದಿಗೆ ತನ್ನ ಬಳಕೆದಾರರಿಗೆ ಅನುಕೂಲ ಮಾಡಿಕೊಡಲು ಈ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ.
ಈ ಕ್ವಿಕ್ ಟ್ರಾನ್ಸ್ಲೇಷನ್ ಫೀಚರ್ ಮೂಲಕ ವಾಟ್ಸಾಪ್ನಲ್ಲೇ ಸುಲಭವಾಗಿ ಅನುವಾದ ಮಾಡಿಕೊಳ್ಳಬಹುದು. ಬೇರೆ ಭಾಷೆಯಲ್ಲೇ ಏನೇ ಮಾಹಿತಿ ಬಂದರೂ ಅದನ್ನು ಅನುವಾದ ಮಾಡಿಕೊಂಡು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅನುವಾದಕ್ಕೆ ಬೇರೆ ಆಪ್ಗಳ ಮೊರೆ ಹೋಗದೆ ವಾಟ್ಸಾಪ್ನಲ್ಲೇ ಅನುವಾದ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಸದ್ಯ ವಾಟ್ಸಾಪ್ನಲ್ಲಿ ಈ ಕ್ವಿಕ್ ಟ್ರಾನ್ಸ್ಲೇಟರ್ ಬಳಸಲು ಕೆಲವು ಲ್ಯಾಂಗ್ವೇಜ್ ಪ್ಯಾಕ್ಸ್ ಅನ್ನು ಬಳಕೆದಾರರು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಮೂಲಕ ವಾಟ್ಸಾಪ್ಗೆ ಬರುವ ಚಾಟ್ ಸಂದೇಶಗಳು ಅಥವಾ ಇನ್ನಿತರೆ ಪಠ್ಯವನ್ನು ಅದರ ಭಾಷೆಯನ್ನು ಪತ್ತೆ ಹಚ್ಚಲಿದೆ. ಇದರಿಂದ ಭಾಷಾ ಅನುವಾದ ಕೂಡ ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 1ರಿಂದ ತನ್ನ ಮೆಸೇಜಿಂಗ್ ಆಪ್ನಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಇದಾದ ಬಳಿಕ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಕೆಲವು ಆಂಡ್ರಾಯ್ಡ್ ಫೋನ್ಗಳಲ್ಲಿ ಮಾತ್ರವೇ ಈ ಬದಲಾವಣೆ ಆಗಲಿದೆ.
ಹೊಸ ವರ್ಷದಿಂದ ಆಂಡ್ರಾಯ್ಡ್ ಕಿಟ್ಕ್ಯಾಟ್ ಹಾಗೂ ಹಳೆಯ ಆವೃತ್ತಿ ಹೊಂದಿರುವ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಕೆಲಸ ಮಾಡುವುದಿಲ್ಲ ಎಂದು ಶಾಕ್ ನೀಡಿದೆ. ಒಂದು ವೇಳೆ ನಿಮ್ಮ ಫೋನ್ನಲ್ಲಿ ಕೂಡ ಇದೇ ರೀತಿಯ ಹಳೆಯ ವರ್ಷನ್ಗಳು ರನ್ ಆಗುತ್ತಿದ್ದರೆ, ಜನವರಿ ಒಂದರಿಂದ ಅಪ್ಗ್ರೇಡ್ ಆಗುವಂತೆ ತಿಳಿಸಿದೆ.
-
Ajit Pawar: ಸ್ಕೂಟಿ ಚಲಾಯಿಸದವರಿಗೆ ವಿಮಾನ ಕೊಟ್ಟರೆ ಹಿಂಗೇ ಆಗೋದು: ಸೋಷಿಯಲ್ ಮೀಡಿಯಾ ಟ್ರೋಲ್ಗೆ ನೆಟ್ಟಿಗರು ಕೆಂಡ -
ಭಾರತ-ಬಾಂಗ್ಲಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾಗೆ ಅದಾನಿಯಿಂದ ದಾಖಲೆ ಮಟ್ಟದ ವಿದ್ಯುತ್ ರಫ್ತು -
Ajit Pawar: ನಾವು ವಿಮಾನದಲ್ಲಿ ಪ್ರಯಾಣಿಸುವಾಗ…: ಬಾರಾಮತಿ ವಿಮಾನ ಅಪಘಾತದ ಬೆನ್ನಲ್ಲೇ ಅಜಿತ್ ಪವಾರ್ ಟ್ವೀಟ್ ವೈರಲ್ -
Gold Rate: ಚಿನ್ನದ ಬೆಲೆ ಹೆಚ್ಚಳಕ್ಕೆ 5 ಪ್ರಮುಖ ಕಾರಣಗಳು ಇಲ್ಲಿವೆ, ಡೊನಾಲ್ಡ್ ಟ್ರಂಪ್ ಆಟವೂ ಇದೆ -
Karnataka Summer: ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು, ನೀರಿನ ಅಭಾವ ಸಾಧ್ಯತೆ -
Gold Rate Jan 30: ಚಿನ್ನದ ಬೆಲೆ 8,230 ರೂ., ಬೆಳ್ಳಿ ಬೆಲೆ 15,000 ರೂ. ಕಡಿಮೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Arijit Singh: ಸಾಕು ಎಂದವನೇ ನಿಜವಾದ ಸಾಹುಕಾರ: ಅರ್ಜಿತ್ ಸಿಂಗ್ ನಿರ್ಧಾರ ಮೆಚ್ಚಿದ ರಂಗಣ್ಣ -
Bengaluru Second Airport: 2033ರವರೆಗೆ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಇಲ್ಲ: ಕೇಂದ್ರ ಸರ್ಕಾರ -
Bengaluru Property: ಬೆಂಗಳೂರಿನ ಈ ಆಸ್ತಿಗಳ ಪರಿಶೀಲನೆಗೆ ಟಾಸ್ಕ್ ಫೋರ್ಸ್ ರಚನೆ: ಜಿಬಿಎ -
Dhurandhar OTT Release: ರಣವೀರ್ ಸಿಂಗ್ ಧುರಂಧರ್ ಓಟಿಟಿನಲ್ಲಿ ರಿಲೀಸ್ ಆದ ಬೆನ್ನಲ್ಲೇ ರೊಚ್ಚಿಗೆದ್ದ ವೀಕ್ಷಕರು -
UGC Regulations: 2026ರ ಯುಜಿಸಿ ನಿಯಮಾವಳಿ ಜಾರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ -
ಬೆಂಗಳೂರು ಏರ್ಪೋರ್ಟ್ನಲ್ಲಿ ಟರ್ಮಿನಲ್-3 ಸ್ಥಾಪನೆ: ಯೋಜನೆಗೆ ಬಿಐಎಎಲ್ ಅನುಮೋದನೆ, ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications