ಜಿಮ್ ತರಬೇತಿದಾರರು ತಿಳಿದುಕೊಳ್ಳಲೇಬೇಕಾದ ಸಂಗತಿ: ಇಲ್ಲಿದೆ ಸಲಹೆಗಳು
ದೇಹದ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ, ದೇಹವನ್ನು ಜೀರೋ ಸೈಜ್ ನಲ್ಲಿಟ್ಟು ಕೊಳ್ಳಲೆಂದೇ ಯುವ ಜನತೆ ಜಿಮ್ನತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ನಗರದಲ್ಲಿ ಲಿಂಗಬೇಧವಿಲ್ಲದೆ ಜಿಮ್ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಿಮ್ಗೆ ಹೋಗುವವರು ಒಂದಷ್ಟು ಮುಂಜಾಗ್ರತೆ ವಹಿಸುವುದು ಒಂದೆಡೆಯಾದರೆ ಜಿಮ್ ತರಬೇತಿದಾರರು ಕೂಡ ಕೆಲವೊಂದು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಅಥವಾ ತರಬೇತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದ್ದು, ಇದರಿಂದ ಜಿಮ್ ಮಾಡುವಾಗ ಒಂದು ವೇಳೆ ಹೃದಯಸ್ಥಂಭನವಾದರೆ ಅಂತಹವರ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಈಗಾಗಲೇ ಜಿಮ್ ಮಾಡುತ್ತಿದ್ದಾಗಲೇ ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣಗಳು ನಡೆದಿದ್ದು, ಇದು ಬಹುದೊಡ್ಡ ಸುದ್ದಿಯಾಗಿತ್ತು. ಜತೆ ಜತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನೈಜ ಸುದ್ದಿಗಳಿಗಿಂತ ಹೆಚ್ಚಾಗಿ ಊಹಾ ಪೋಹದ ಸುದ್ದಿಗಳೇ ಜಾಸ್ತಿಯಾಗಿ ಹರಡಿದ್ದರಿಂದ ಕೆಲವರು ಜಿಮ್ ಗೆ ಹೋಗಲು ಭಯಪಡುವಂತಹ ವಾತಾವರಣವೂ ನಿರ್ಮಾಣವಾಗಿದ್ದನ್ನು ನಾವು ಮರೆಯುವಂತಿಲ್ಲ.

ಇದು ಎಷ್ಟರ ಮಟ್ಟಿಗೆ ಜನರಲ್ಲಿ ಆತಂಕವನ್ನು ಸೃಷ್ಟಿಸಿತೆಂದರೆ ಜಿಮ್ ಮಾಡಿದರೆ ಹೃದಯಸ್ತಂಭನವಾಗುತ್ತದೆ ಎಂಬ ಮಾತುಗಳು ಕಾಡ್ಗಿಚ್ಚಿನಂತೆ ಹರಡಲಾರಂಭಿಸಿತು. ಇದರಿಂದ ಕೆಲವರು ಜಿಮ್ ನಿಂದ ಹಿಂದೆ ಸರಿದಿದ್ದರು. ಹಾಗಾದರೆ ನಿಜವಾಗಿಯೂ ಜಿಮ್ ನಿಂದ ಹೃದಯ ಸ್ತಂಭನವಾಗುತ್ತದೆಯಾ ಎಂಬ ಪ್ರಶ್ನೆ ಎಲ್ಲರನ್ನು ಕಾಡದಿರದು.? ಆದರೆ ಈ ಪ್ರಶ್ನೆಗಳಿಗೆ ಹಂಡ್ರೆಡ್ ಪರ್ಸೆಂಟ್ ನಿಜ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯರು ಕೂಡ ನಿಜವೆಂದು ನಂಬುವುದಿಲ್ಲ.
ಹೃದಯ ಸ್ತಂಭನವಾಗಲು ಕಾರಣವೇನು?
ಹಾಗಾದರೆ ಹೃದಯ ಸ್ತಂಭನವಾಗಲು ಕಾರಣವೇನು ಎಂಬುದಕ್ಕೆ ವೈದ್ಯರು ನೀಡುವ ಉತ್ತರವೇ ಬೇರೆಯಾಗಿದೆ. ಅದು ಏನೆಂದರೆ ಕೆಲವರು ಡಯಾಬಿಟೀಸ್, ರಕ್ತದೊತ್ತಡ ದಂತಹ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅಂತಹವರು ಅತಿ ಹೆಚ್ಚಾಗಿ ವ್ಯಾಯಾಮ ಅಥವಾ ಜಿಮ್ ಮಾಡುವುದರಿಂದ ಕೆಲವೊಮ್ಮೆ ಅವರಲ್ಲಿ ಹೃದಯ ಸ್ತಂಭನ ವಾಗುವ ಸಾಧ್ಯತೆಗಳಿವೆ. ಹಾಗೆಂದು ಜಿಮ್ ಮಾಡುವವರಿಗೆಲ್ಲ ಹೃದಯಸ್ತಂಭನವಾಗುತ್ತದೆ ಎಂಬುದು ನಿಜವಲ್ಲ ಎಂಬುದಾಗಿ ಅಭಿಪ್ರಾಯಪಡುತ್ತಾರೆ.

ಜಿಮ್ ತರಬೇತಿದಾರರು ಜಿಮ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೋ ಹಾಗೆಯೇ ಹೃದಯಸ್ಥಂಭನದಂತಹ ಘಟನೆಗಳು ನಡೆದಾಗ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಅದರಲ್ಲೂ ಜಿಮ್ ತರಬೇತಿದಾರರು ಮುಖ್ಯವಾಗಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್) ಬಗ್ಗೆ ತಿಳಿದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಏಕೆಂದರೆ ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್ (ಸಿಪಿಆರ್) ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಹೃದಯಾಘಾತವಾದಾಗ ಮತ್ತು ಇನ್ನು ಅನೇಕ ತುರ್ತು ಸಂದರ್ಭಗಳಲ್ಲಿ, ಹೃದಯ ಬಡಿತವು ನಿಂತು ಹೋದರೆ ಮತ್ತೆ ಹೃದಯವನ್ನು ಎಚ್ಚರಿಸಲು ಇದು ಸಾಧ್ಯಿವಾಗುತ್ತದೆ. ಆದ್ದರಿಂದ ಪ್ರತಿ ಜಿಮ್ ಕೇಂದ್ರಗಳಲ್ಲಿ ಜಿಮ್ ತರಬೇತಿದಾರರು ಸಿಪಿಆರ್ ಬಗ್ಗೆ ತರಬೇತಿ ಪಡೆಯುವುದು ಬಹುಮುಖ್ಯ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಹೃದ್ರೋಗ ತಜ್ಞರು ನೀಡುವ ಸಲಹೆ ಏನು?
ಈ ಕುರಿತಂತೆ ಈ ಹಿಂದೆಯೇ ನಮ್ಮ ಮೈಸೂರು ಫಿಟ್ ಮೈಸೂರು ಕಾರ್ಯಕ್ರಮ ನಡೆಸಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ವಿ. ಅವರ ನೇತೃತ್ವದ ವೈದ್ಯಕೀಯ ತಂಡವು ಮೈಸೂರು ನಗರದ ಸುಮಾರು 200ಕ್ಕೂ ಹೆಚ್ಚು ಜಿಮ್ ತರಬೇತುದಾರರಿಗೆ ಸಿಪಿಆರ್ ವಿಧಾನದ ಬಳಕೆಯ ಕುರಿತು ಮಾಹಿತಿ ಮತ್ತು ಈ ವೈದ್ಯಕೀಯ ವಿಧಾನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿ ಗಮನಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ಜಿಮ್ ಮಾಡುವವರಲ್ಲಿ ಜಿಮ್ ಮಾಡುವ ಸಮಯದಲ್ಲಿ ಹೃದಯ ಸ್ತಂಭನವಾಗುತ್ತಿದೆ ಎಂಬ ಅಂಶವು ಚಾಲ್ತಿಯಲ್ಲಿದ್ದು, ಜಿಮ್ ಮಾಡುವುದರಿಂದ ಹೃದಯ ಸ್ತಂಭನವಾಗುತ್ತದೆ ಎಂಬುದು ಸತ್ಯವಲ್ಲ ಎಂದು ಹೃದ್ರೋಗ ತಜ್ಞರಾದ ಡಾ. ಕೇಶವಮೂರ್ತಿ ಅವರು ಮನದಟ್ಟು ಮಾಡಿ ಜಿಮ್ ತರಬೇತಿದಾರರಿಗೆ ಶಕ್ತಿ ತುಂಬಿದ್ದಾರೆ.
ತಮ್ಮ ದೇಹದ ಸಾಮರ್ಥ್ಯಕ್ಕನುಗುಣವಾಗಿ ನಿಯಮಿತವಾಗಿ ಜಿಮ್ ಮಾಡುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದ್ದು, ಈ ನಿಟ್ಟಿನಲ್ಲಿ. ಪ್ರತಿಯೊಬ್ಬ ಜಿಮ್ ತರಬೇತುದಾರು ಜೀವ ರಕ್ಷಣಾ ವಿಧಾನದ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕ ವಾಗಿದೆ ಎಂಬುದು ಅವರ ಸಲಹೆಯಾಗಿದೆ. ಜಿಮ್ ನಡೆಸುವವರು ತಮ್ಮಲ್ಲಿರುವ ತರಬೇತಿದಾರರಿಗೆ ಕಾರ್ಡಿಯೋ ಪಲ್ಮನರಿ ರಿಸಕ್ಸಿಟೇಷನ್ (CPR) ಬಗ್ಗೆ ತರಬೇತಿ ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ. ಇದರಿಂದ ಜಿಮ್ ಮಾಡಲು ತೆರಳುವವರಿಗೂ ಯಾವುದೇ ಆತಂಕವಿರುವುದಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications