'ಹೆಂಡತಿ ಬೇಕು': ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಸಂಚರಿಸಿದ ಚಾಲಕ!
ದಾಮೋಹ್ ಫೆಬ್ರವರಿ 19: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಮದುವೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಧು ವರರ ಹುಡುಕಾಟ ಬಲೂ ಜೋರಾಗಿ ಸಾಗುತ್ತದೆ. ಕೆಲವರಿಗೆ ಹುಡುಗಿ ಸಿಕ್ಕರೆ ಇನ್ನೂ ಕೆಲವರಿಗೆ ಹುಡುಗಿ ಸಿಗುವುದೇ ದೊಡ್ಡ ಸವಾಲಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಚಾಲಕನೊಬ್ಬ ಸಂಚಾರ ಮಾಡುತ್ತಿರುವುದು ಮಧ್ಯಪ್ರದೇಶದ ಬೀದಿಗಳಲ್ಲಿ ಕಂಡುಬಂದಿದೆ.
ಮಧ್ಯಪ್ರದೇಶದ ದಾಮೋಹ್ನ ವ್ಯಕ್ತಿಯೊಬ್ಬ ತನ್ನ ಇ-ರಿಕ್ಷಾ ಮೇಲೆ ಬಯೋ ಡೇಟಾ ಹಾಕಿಕೊಂಡು ಪ್ರಯಾಣಿಸುವ ದೃಶ್ಯ ಕಂಡು ಬಂದಿದೆ. ಅಂದಹಾಗೆ 29 ವರ್ಷದ ದೀಪೇಂದ್ರ ರಾಥೋಡ್ ತನಗಾಗಿ ವಧುವನ್ನು ಹುಡುಕಲು ಈ ವಿಶಿಷ್ಟವಾದ ವಿಧಾನವನ್ನು ತೆಗೆದುಕೊಂಡಿದ್ದಾರೆ. ಅವರು ತಮ್ಮ ಇ-ರಿಕ್ಷಾದ ಮೇಲೆ ತಮ್ಮ ಮದುವೆಗಾಗಿ ವಧು ಬೇಕಾಗಿರುವ ಬಗ್ಗೆ ಬಯೋ ಡೇಟಾದ ಹೋರ್ಡಿಂಗ್ ಮಾಡಿಸಿಕೊಂಡು ವೈಯಕ್ತಿಕ ವಿವರಗಳನ್ನು ಲಗತ್ತಿಸಿದ್ದಾರೆ.

ಮದುವೆ ಎಲ್ಲರ ಜೀವನದ ಪ್ರಮುಖ ಘಟ್ಟ. ಈ ಕಾಲಘಟ್ಟದ ಅನುಭವವನ್ನು ಎಲ್ಲರೂ ಬಹಳ ಮುತುವರ್ಜಿಯಿಂದ ಕಾಪಾಡಿಟ್ಟುಕೊಳ್ಳಲು ಬಯಸುತ್ತಾರೆ. ದೀಪೇಂದ್ರ ಅವರ ಪ್ರಕಾರ, ಅವರು ಮದುವೆಯಾಗಲು ಬಯಸುತ್ತಾರೆ. ಆದರೆ ಸಮಾಜದಲ್ಲಿ ಮಹಿಳೆಯರ ಕೊರತೆಯಿಂದಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕಲಾಗಲಿಲ್ಲ. ಧರ್ಮ ಮತ್ತು ಜಾತಿ ಭೇದಗಳು ತನಗೆ ಮುಖ್ಯವಲ್ಲ. ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ತನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಥೋರ್ ವಧುವನ್ನು ಹುಡುಕಲು ವಧು ವರರ ವೇದಿಕೆಗೂ ಸೇರಿಕೊಂಡರು. ಆದರೆ ಅವರಿಗೆ ತನ್ನ ನಗರದಿಂದ ಮಹಿಳೆಯನ್ನು ಹುಡುಕಲಾಗಲಿಲ್ಲ. ನಂತರ ಅವರು ತಮ್ಮ ವಿವರಗಳೊಂದಿಗೆ ಹೋರ್ಡಿಂಗ್ ಅನ್ನು ಹಾಕಲು ನಿರ್ಧರಿಸಿದರು.
ಹೋರ್ಡಿಂಗ್ನಲ್ಲಿ 29 ವರ್ಷದ ದೀಪೇಂದ್ರ ರಾಥೋಡ್ ಅವರ ಎತ್ತರ, ಹುಟ್ಟಿದ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ಗೋತ್ರ ಇತ್ಯಾದಿಗಳನ್ನು ಒಳಗೊಂಡ ವಿವರಗಳನ್ನು ಮುದ್ರಿಸಲಾಗಿದೆ.
ಪರಿಪೂರ್ಣ ಜೀವನ ಸಂಗಾತಿಯನ್ನು ಪಡೆಯುವ ಅವರ ವಿಧಾನವನ್ನು ದೀಪೇಂದ್ರ ಅವರ ಪೋಷಕರು ಸಹ ಬೆಂಬಲಿಸುತ್ತಾರೆ. "ನನ್ನ ಪೋಷಕರು ಪೂಜೆಯಲ್ಲಿ ನಿರತರಾಗಿದ್ದಾರೆ, ಆದ್ದರಿಂದ ನನಗೆ ಹುಡುಗಿಯನ್ನು ಹುಡುಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಆದ್ದರಿಂದ ನಾನು ಅದನ್ನು ಮಾಡಬೇಕಾಗಿದೆ" ಎಂದು ರಾಥೋರ್ ಹೇಳಿದ್ದಾರೆ.
ರಾಥೋಡ್ ತನ್ನ ಸ್ವಂತ ಇ-ರಿಕ್ಷಾವನ್ನು ಓಡಿಸುವ ಮೂಲಕ ತನ್ನ ಕುಟುಂಬವನ್ನು ನಡೆಸುತ್ತಾರೆ. ಇದರಿಂದ ನನಗೆ ಅಂದುಕೊಂಡ ಜೀವನ ಸಂಗಾತಿ ಸಿಕ್ಕರೆ ನನಗೆ ಸಂತೋಷವಾಗುತ್ತದೆ ಎನ್ನುತ್ತಾರೆ ರಾಥೋಡ್ ಅವರು.
ಕಲಬುರಗಿಯಲ್ಲಿ ಭಯಾನಕ ಘಟನೆ:
ಮದುವೆ ಮಾಡಿಲ್ಲ ಎಂದು ತನ್ನ ತಾಯಿಯನ್ನೇ ಮಗ ಕೊಲೆ ಮಾಡಿದ ಹೇಯಾ ಕೃತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋಚಾವರಂನಲ್ಲಿ ಇತ್ತೀಚೆಗೆ ನಡೆದಿತ್ತು.
ಶೋಭಾ (45) ಮಗನಿಂದಲೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಮಗ ಅನೀಲ್ ಎಂಬಾತ ಈ ಕೃತ್ಯ ಎಸಗಿದ್ದು ಮದುವೆ ಮಾಡಿಸಿಲ್ಲ ಅಂತಾ ಕುಡಿದ ನಶೆಯಲ್ಲಿ ಜಗಳವಾಡಿ ಕಟ್ಟಿಗೆಯಿಂದ ಹೊಡೆದು ಯಾಯಿಯನ್ನು ಕೊಂದಿದ್ದಾನೆ. ಘಟನೆ ಬಳಿಕ ಕೊಲೆ ಮಾಡಿದ ಅನೀಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications