ಈ ಪ್ರದೇಶದಲ್ಲಿ ಉಚಿತ ಕರೆ, ಡೇಟಾ ನೀಡಲು ಮುಂದಾದ ವೊಡಾಫೋನ್-ಐಡಿಯಾ, ಏರ್ಟೆಲ್
ನವದೆಹಲಿ: ದೇಶದಲ್ಲಿ ಮಳೆ ಹಲವು ಪ್ರದೇಶಗಳಲ್ಲಿ ಬಿಟ್ಟು ಬಿಡದೆ ಸುರಿಯುತ್ತಿದೆ. ಈ ವೇಳೆ ಹಲವು ಗಂಭೀರ ಚಿತ್ರಗಳು ಕಣ್ಣು ಮುಂದೆ ಬರುತ್ತವೆ. ಅದರಲ್ಲಿ ಕೇರಳದ ವಯನಾಡಿನ ಭೂಕುಸಿತದ ದೃಶ್ಯ ಕರಳು ಕಿತ್ತು ಬರುವಂತಿದೆ. ಈ ದುರ್ಘಟನೆಯಲ್ಲಿ ಅಪಾರ ಸಂಖ್ಯೆಯ ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಪಡೆಗಳಿಂದ ರಕ್ಷಣಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಅಲ್ಲಿಯ ಸಂತ್ರಸ್ಥರಿಗೆ ಅನುಕೂಲವಾಗಲೆಂದು ಹಲವು ಟೆಲಿಕಾಂ ಕಂಪನಿಗಳು ವಿಶೇಷ ಪ್ಯಾಕೇಜ್ ರಿಲೀಸ್ ಮಾಡಿವೆ.
ಖಾಸಗಿ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಹಾಗೂ ಏರ್ಟೆಲ್ ಕಂಪನಿಗಳು ವಯನಾಡ್ಗೆ ದೊಡ್ಡ ಘೋಷಣೆ ಮಾಡಿವೆ. Vi ತನ್ನ ವಯನಾಡ್ ಬಳಕೆದಾರರಿಗೆ ಉಚಿತ ಕರೆ ಮತ್ತು ಡೇಟಾವನ್ನು ಘೋಷಿಸಿದೆ. ಈ ಎರಡು ಕಂಪನಿಗಳು ಅಲ್ಲಿನ ಗ್ರಾಹಕರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಘೋಷಣೆ ಮಾಡಿವೆ.

ವೊಡಾಫೋನ್-ಐಡಿಯಾ ವಿಶೇಷ ಆಫರ್
Vi ತನ್ನ ವಯನಾಡ್ ಪ್ರಿಪೇಡ್ ಹಾಗೂ ಪೋಸ್ಟ್ ಪೇಡ್ ಬಳಕೆದಾರರಿಗೆ ಅನುಕೂಲಕ್ಕಾಗಿ ಹೊಸ ಯೋಜನೆ ಬಿಡುಗಡೆ ಮಾಡಿದೆ. ಪ್ರಿಪೇಡ್ ಬಳಕೆದಾರರು 7 ದಿನಗಳವರೆಗೆ ಉಚಿತ ಕರೆಯನ್ನು ನೀಡಲು ನಿರ್ಧರಿಸಿದೆ. ಕಂಪನಿಯು ಗ್ರಾಹಕರಿಗೆ ಪ್ರತಿದಿನ 1GB ಉಚಿತ ಡೇಟಾವನ್ನು 7 ದಿನಗಳವರೆಗೆ ನೀಡುತ್ತದೆ. ಹೆಚ್ಚುವರಿ ಡೇಟಾ ಸ್ವಯಂ ಚಾಲಿತವಾಗಿ ಬಳಕೆದಾರರ ಸಂಖ್ಯೆಗಳಿಗೆ ಕ್ರೆಡಿಟ್ ಆಗಲಿದೆ.
ಇನ್ನು ವಿಐ ತನ್ನ ಪೋಸ್ಟ್ ಪೇಡ್ ಬಳಕೆದಾರರ ಬಿಲ್ ಪಾವತಿ ದಿನಾಂಕವನ್ನು 10 ದಿನಗಳ ಹೆಚ್ಚಿಸಿದೆ. ಈ ಮೂಲಕ ಗ್ರಾಹಕರಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಕಂಪನಿ ಮಾಡಿದೆ.
ಸಂತ್ರಸ್ತ್ರರ ನೆರವಿಗೆ ಬಂದ ಏರ್ಟೆಲ್
ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್ಟೆಲ್ ಸಹ ವಯನಾಡಿನ ಬಳಕೆದಾರರ ನೆರವಿಗೆ ಮುಂದಾಗಿದೆ. ಏರ್ಟೆಲ್ ತನ್ನ ಬಳಕೆದಾರರಿಗೆ 3 ದಿನಗಳವರೆಗೆ ಉಚಿತ ಕರೆ ಮತ್ತು ಪ್ರತಿದಿನ 1 GB ಡೇಟಾವನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದೆ. ಇನ್ನು ಏರ್ಟೆಲ್ ಸಿಮ್ ಹೊಂದಿದ್ದು ವ್ಯಾಲಿಡಿಟಿ ಮುಗಿದು ಹೋಗಿದ್ದರೂ ಸಹ ಗ್ರಾಹಕರು ಇದರ ಲಾಭವನ್ನು ಪಡೆಯಬಹುದಾಗಿದೆ.

ವಯನಾಡಿನಲ್ಲಿ ಭೂ ಕುಸಿತ ಸಂಭವಿಸಿದ್ದು, ಈಗಾಗಲೇ 300ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಹಲವು ಜನರು ನಾಪತ್ತೆ ಆಗಿದ್ದಾರೆ. ನಾಪತ್ತೆ ಆದವರ ಶೋಧ ಕಾರ್ಯ ಭರದಿಂದ ನಡೆದಿದೆ. ಇನ್ನು ಸೇನೆ ತುಕುಡಿ ಹಾಗೂ ಎನ್ಡಿಆರ್ಎಫ್ ತಂಡಗಳಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications