ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು
ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ಏಷ್ಟೋ ಪೀಳಿಗೆಯನು ಬಡಿದೆಬ್ಬಿಸಿದ್ದು ಸುಳ್ಳಲ್ಲ.
ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು.
ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ಅವರ ದೂರದೃಷ್ಟಿತ್ವದ ಫಲವಾಗಿದೆ.
ತಮ್ಮ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಸಮರ್ಥಣೆ ಮಾಡಿಕೊಳ್ಳುವಾಗ ನೀಡುತ್ತಿದ್ದ ಉದಾಹರಣೆ, ಉಲ್ಲೇಖಗಳು, ವಿರೋಧ ಪಕ್ಷದವರು ಮೆಚ್ಚುವಂಥ ಮಾತುಗಳು ಇಂದಿನ ರಾಜಕಾರಣಿಗಳಿಗೆ ಮಾದರಿ. ವಾಜಪೇಯಿ ಅವರು ಭಾಷಣಗಳ ಸಂಗ್ರಹಯೋಗ್ಯ ವಿಡಿಯೋಗಳು ಇಲ್ಲಿವೆ.
ಪೋಖ್ರಾನ್ ಅಣು ಪರೀಕ್ಷೆ ಬಗ್ಗೆ ಸಮರ್ಥನೆ
ಅಣು ಪರೀಕ್ಷೆಯ ಉದ್ದೇಶವೇನು? ದೇಶದ ಮುಂದೆ ಯಾವ ಆತಂಕ ಎದುರಾಗಿತ್ತು? ಎಂದು ಕೇಳಲಾಯಿತು. 1974ರಲ್ಲಿ ಸದನದಲ್ಲಿದ್ದೆ ಶ್ರೀಮತಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಅಣು ಪರೀಕ್ಷೆಯಾದಾಗ, ವಿಪಕ್ಷದಲ್ಲಿದ್ದರೂ ಸ್ವಾಗತ ಮಾಡಿದ್ದೆ. ಏಕೆಂದರೆ, ದೇಶದ ಭದ್ರತೆಗಾಗಿ ಅವಶ್ಯವಾಗಿತ್ತು. ಆತಂಕ ಎದುರಾದಾಗ ತಯಾರಿ ಮಾಡಿಕೊಳ್ಳಬೇಕೆ?
ಅಧ್ಯಕ್ಷ್ ಮಹೋದಯ್, ನನ್ನ ರಾಜೀನಾಮೆ ಸ್ವೀಕರಿಸಿ
ಅಧ್ಯಕ್ಷ್ ಮಹೋದಯ್, ನನ್ನ ರಾಜೀನಾಮೆ ಸ್ವೀಕರಿಸಿ ಎಂದು 13 ದಿನಗಳ ನಂತರ ಎನ್ಡಿಎ ಸರ್ಕಾರ ಉರುಳಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು 1996ರ ಮೇ 27ರಂದು ಸಂಸತ್ತಿನಲ್ಲಿ ಮಾಡಿದ ಭಾಷಣ ಸ್ಮರಣೀಯ.
ಅಟಲ್ ಬಿಹಾರಿ ವಾಜಪೇಯಿ ಉಗ್ರ ಭಾಷಣ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ವಿಪಕ್ಷಗಳಿಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳುತ್ತಾ, ಮಾಡಿದ ಉಗ್ರ ಭಾಷಣ ಇಲ್ಲಿದೆ.
ಅವಕಾಶವಾದಿ ರಾಜಕಾರಣಿಗಳ ಬಗ್ಗೆ ಟೀಕೆ
ಅವಕಾಶ ರಾಜಕೀಯ ಮಾಡಿದ ಶರದ್ ಪವಾರ್ ಬಗ್ಗೆ ಕಟು ಶಬ್ದಗಳಿಂದ ಟೀಕಿಸಿ, ಶ್ರೀರಾಮಚಂದ್ರ ಹೇಳಿದ ವಾಕ್ಯವನ್ನು ಉಲ್ಲೇಖಿಸಿ, ಮೃತ್ಯುವಿಗೆ ನಾನು ಹೆದರುವುದಿಲ್ಲ, ಹೆಸರು ಹಾಳಾಗುವುದರ ಬಗ್ಗೆ ಮಾತ್ರ ಭಯವಿದೆ. ನನ್ನ ರಾಜಕೀಯ ಜೀವನ ಪಾರದರ್ಶಕವಾಗಿದೆ ಎಂದರು.
ಜನರ ಸಮರ್ಥನೆಯೇ ನಮಗೆ ಮುಖ್ಯ
ಸದನದಲ್ಲಿ ಇಬ್ಬರಿದ್ದರೂ ನಂತರ ಈ ಸಂಖ್ಯೆ ಸಂಪಾದಿಸಿದ್ದು, ಜನರ ಸಮರ್ಥನೆ ಯಿಂದ ಮಾತ್ರ. ಸಂವಿಧಾನದ ನಿರ್ಮಾತೃಗಳು ವಿವಾಹದ ಬಗ್ಗೆ ತಿಳಿಸಿರುವಾಗ ಸಮಾಜದ ಬದಲಾವಣೆ ಏಕೆ ಸಾಧ್ಯವಿಲ್ಲ.
ಬೆಂಕಿಯ ಕಿಡಿಯ ಜತೆ ಆಟ ಬೇಡ
ಬೇರೆಯವರ ಮನೆಗೆ ಬೆಂಕಿ ಹಾಕುವ ಮೊದಲು ನಿಮ್ಮ ಮನೆಗೆ ಬೆಂಕಿ ಬೀಳುತ್ತಿರುವುದನ್ನು ನೋಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಆಟಲ್ ಬಿಹಾರಿ ವಾಜಪೇಯಿ ಅವರ ಖಡಕ್ ಮಾತುಗಳು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications