UPSC ಯಶೋಗಾಥೆ: ಕುಟುಂಬದಲ್ಲಿ ಕಲಹದ ನಡುವೆ ಸಾಧನೆಗೈದ ಶಿವಾಂಗಿ
ಲಕ್ನೋ, ಜೂನ್ 1: ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಹೊರಬೀಳುತ್ತಿದ್ದಂತೆ ಹಲವಾರು ಕಷ್ಟಗಳ ಮಧ್ಯೆ ಸಾಧನೆಗೈದ ಮಹಿಳೆಯರ ಕಥೆಗಳು ಬಹಿರಂಗಗೊಂಡಿವೆ. ಹಲವಾರು ಕಷ್ಟಗಳನ್ನು ಎದುರಿಸಿ, ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಜನರ ಅನೇಕ ಸ್ಪೂರ್ತಿದಾಯಕ ಯಶಸ್ಸಿನ ಕಥೆಗಳು ಹೊರಬಂದಿವೆ.
ಸೋಮವಾರದಂದು (ಮೇ 30) ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರ ನಡುವೆ ಮದುವೆಯಾಗಿ ಗಂಡನ ಮನೆಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿ ಕೊನೆಗೆ ಪರೀಕ್ಷೆ ವೇಳೆ ವಿಚ್ಛೇದನದಂಥ ಕಠಿಣ ಜೀವನದ ಪರೀಕ್ಷೆ ಎದುರಿಸಿದ್ದ ಶಿವಾಂಗಿ, ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆ ಬರೆದು ಸಾಧನೆಗೈದಿದ್ದಾರೆ. ಉತ್ತರ ಪ್ರದೇಶದ ಹಾಪುರ್ನ ಶಿವಂಗಿ ಗೋಯಲ್ ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ 177 ರ್ಯಾಂಕ್ ಪಡೆದಿದ್ದಾರೆ. ಶಿವಾಂಗಿಯ ಪ್ರಯಾಣವು ಕಷ್ಟಗಳು ಮತ್ತು ಸವಾಲುಗಳಿಂದ ತುಂಬಿತ್ತು. ಮದುವೆಯಾದ ಇವರಿಗೆ 7 ವರ್ಷದ ಮಗಳಿದ್ದಾಳೆ.
ಶಿವಾಂಗಿ ಗೋಯಲ್ ಅವರ ಯಶಸ್ಸಿನ ಪ್ರಯಾಣವು ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೋಲುತ್ತದೆ. ಅವರ ಸಾಂಸರಿಕ ಜೀವನ ಸುಖಮಯವಾಗಿಲ್ಲ, ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ತುಂಬಿತ್ತು. ಇದರೊಂದಿಗೆ ಪತಿಯೊಂದಿಗೆ ವಿಚ್ಛೇದನ ಪ್ರಕರಣ ನಡೆಯುತ್ತಿರುವಾಗಲೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಶ್ಲಾಘನೀಯ.

ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಗೋಯಲ್, ಮದುವೆಗೆ ಮುಂಚೆಯೇ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರಂತೆ. ಆದರೆ ಎರಡು ಪ್ರಯತ್ನಗಳಲ್ಲಿ ವಿಫಲರಾಗಿದ್ದರು. ಅವರು ಮದುವೆಯಾದ ನಂತರ ಕೌಟುಂಬಿಕ ಹಿಂಸಾಚಾರ ಮತ್ತು ಅತ್ತೆಯ ಕಿರುಕುಳವನ್ನು ಎದುರಿಸುತ್ತಾರೆ ಮತ್ತು ತನ್ನ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಮರಳಲು ನಿರ್ಧರಿಸುತ್ತಾರೆ. ಇದರ ಮಧ್ಯೆ ಪರೀಕ್ಷೆಯಲ್ಲಿ ಸಾಧಿಸಲು ಪ್ರಯತ್ನಗಳನ್ನು ಬಿಡುವುದಿಲ್ಲ.
ಆದರೆ ಆಕೆಯ ಆಯ್ಕೆಗೆ ಆಕೆಯ ಪೋಷಕರು ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು. ಅವಳು ಏನು ಮಾಡಬೇಕೆಂದು ಬಯಸಿದ್ದರೋ ಅದನ್ನು ಮಾಡಿರುವುದಾಗಿ ಅವರು ಹೇಳುತ್ತಾರೆ. 'ಸಾಂಸಾರಿಕ ಹಿಂಸಾಚಾರದಲ್ಲಿ ಎರಡು ಪ್ರಯತ್ನಗಳಲ್ಲಿ ವಿಫಲವಾದ ನನಗೆ ಯುಪಿಎಸ್ಸಿಗೆ ಮತ್ತೆ ಏಕೆ ತಯಾರಿ ನಡೆಸಬಾರದು ಎಂದೆನಿಸಿತು. ಹೀಗಾಗಿ ಮತ್ತೊಮ್ಮೆ ನಾನು ಪರೀಕ್ಷೆಗೆ ತಯಾರಿ ನಡೆಸಿದೆ' ಎಂದಿದ್ದಾರೆ. ಅವರು ತಮ್ಮ ಯಶಸ್ಸನ್ನು ತಮ್ಮ ಮಗಳು ರೈನಾ ಮತ್ತು ಅವರ ಪೋಷಕರಿಗೆ ನೀಡಿದರು.
ಇದರೊಂದಿಗೆ ಶಿವಾಂಗಿ ಗೋಯಲ್ ಅವರು ಎಲ್ಲಾ ವಿವಾಹಿತ ಮಹಿಳೆಯರಿಗೆ ಸಂದೇಶವನ್ನು ನೀಡಿದ್ದಾರೆ. ಎಂಥ ಸಂದರ್ಭ ಬರಲಿ ಬಲವಾಗಿರಬೇಕು ಮತ್ತು ಅವರ ವೈವಾಹಿಕ ಮನೆಯಲ್ಲಿ ಏನಾದರೂ ತಪ್ಪು ಸಂಭವಿಸಿದರೆ ಅವರು ಭಯಪಡಬಾರದು ಎಂದು ಶಿವಂಗಿ ಹೇಳಿದ್ದಾರೆ. "ಮಹಿಳೆಯರು ಏನು ಬೇಕಾದರೂ ಮಾಡಬಹುದು" ಎಂದು ಅವರು ಹೇಳಿದರು.
UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2021 ರಲ್ಲಿ 177 ನೇ ರ್ಯಾಂಕ್ ಗಳಿಸಿದ ಗೋಯಲ್, ಸ್ವಯಂ-ಅಧ್ಯಯನ ಮತ್ತು ಕಟ್ಟುನಿಟ್ಟಾದ ದಿನಚರಿಯಿಂದ ತನ್ನ ಗುರಿಯನ್ನು ಸಾಧಿಸಿದ್ದಾರೆ. ಎಲ್ಲಾ ಸಮಯದಲ್ಲೂ ತನ್ನ ಕುಟುಂಬದತ್ತ ಗಮನ ಹರಿಸಿದ ಅವರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು. ತಮ್ಮ ನೆಲೆಯಲ್ಲಿ ನಿಲ್ಲಬೇಕು ಮತ್ತು ಕಿರುಕುಳದಿಂದ ಮುಕ್ತರಾಗಬೇಕು ಎಂಬುದನ್ನು ಅವರ ಆಸೆಯಾಗಿತ್ತು. ಸದ್ಯ ಅವರ ಆಸೆಯಂತೆ ಅವರು ಕನಸನ್ನು ನನಸಾಗಿಸಿಕೊಂಡಿದ್ದಾರೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications