ಆಫೀಸ್ನಲ್ಲಿ ನಿಮ್ಮ ನಡವಳಿಕೆ ಹೇಗಿರಬೇಕು? ಅನವಶ್ಯಕ ಮಾತುಗಳು ಕೆಲಸಕ್ಕೇ ಕುತ್ತು ತರಬಹುದು ಎಚ್ಚರ
ಸಮಾಜದಲ್ಲಿ ಪ್ರತಿಯೊಬ್ಬರ ಸ್ವಭಾವ, ಆಲೋಚಿಸುವ ರೀತಿ, ನೀತಿಗಳು ಹಾಗೂ ವರ್ತನೆಗಳು ಭಿನ್ನವಾಗಿರುತ್ತವೆ. ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಸ್ವಭಾವದಲ್ಲಿ, ಆಲೋಚಿಸುವ ಕ್ರಮದಲ್ಲಿ ಸಾಮ್ಯತೆ ಇದ್ದರೆ ಸ್ನೇಹಿತರಾಗುತ್ತಾರೆ. ಇಲ್ಲದಿದ್ದರೆ, ಪರಿಚಯಕ್ಕೆ ಸೀಮಿತವಾಗುತ್ತದೆ. ಕೆಲವೊಂದು ಸಲ ಸ್ವಭಾವಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜಗಳಗಳಾಗುವ ಸಂಭವವೇ ಇರುತ್ತದೆ.
ಕೆಲಸದ ಸ್ಥಳದಲ್ಲಿ ಸದಾ ಮುಖಾಮುಖಿಯಾಗಬೇಕಾದ ಸಂದರ್ಭದಲ್ಲಿ ವೈಮನಸ್ಸುಗಳು ಉಂಟಾಗದಂತೆ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ. ಹೀಗಾಗಿ ಕೆಲಸದಲ್ಲಿ ಸ್ಥಳದಲ್ಲಿ ಯಾವುದೇ ವೈಯಕ್ತಿಕ ಚಿಂತನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಬಹಳ ಜಾಗ್ರತೆ ವಹಿಸುವುದು ಅಗತ್ಯವಾಗಿರುತ್ತದೆ.

ಕಂಪೆನಿಗಳಾಗಿರಬಹುದು, ಕಚೇರಿಗಳಾಗಿರುಬಹುದು ಬಹುತೇಕ ಕಡೆ ವೈಯಕ್ತಿಕ ಅಭಿಪ್ರಾಯಗಳು, ಆಲೋಚನೆಗಳ ಅಗತ್ಯವೇ ಬೀಳುವುದಿಲ್ಲ. ಆದರೂ ಕೆಲವೊಂದು ಸಲ ತಮ್ಮ ಮಾತನಾಡುವಾಗ ಬಾಯಿಗೆ ಬಂದದ್ದನ್ನು ಮಾತನಾಡಿ ಬಿಡುತ್ತಾರೆ. ಇದರಿಂದ ಕೆಲಸದ ವಾತಾವರಣ ಕೆಡುತ್ತದೆ. ಈ ಮಾತಿನಿಂದಾಗಿಯೇ ತಮ್ಮ ಕೆಲಸಗಳಿಗೆ ಕುತ್ತು ತರುವ ಸಂದರ್ಭಗಳು ಹೆಚ್ಚಿರುತ್ತದೆ. ಹೀಗಾಗಿ ಮಾತನಾಡುವ ಮುನ್ನ ಎಚ್ಚರವಿರಲಿ.
ಒಂದು ಉದಾಹರಣೆ ಹೇಳುವುದಾದರೆ, ಒಂದು ಕಂಪೆನಿಯ ಕಾರ್ ಡ್ರೈವರ್, ತನ್ನ ಕಂಪೆನಿಯ ಉದ್ಯೋಗಿಗಳನ್ನು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಬಿಡುವುದಷ್ಟೆ ಆತನ ಕೆಲಸವಾಗಿರುತ್ತದೆ. ಉದ್ಯೋಗಿಗಳ ಜೊತೆ ಹೆಚ್ಚು ಮಾತನಾಡಬಾರದೆಂಬ ನಿಯಮವೂ ಇರತ್ತದೆ. ಆದರೂ ಕಾರು ಡ್ರೈವರ್ ತನ್ನ ಮಾತಿನಲ್ಲಿ ಹಿಡಿತವಿಲ್ಲದ ವ್ಯಕ್ತಿಯಾಗಿರುತ್ತಾನೆ.
ಒಮ್ಮೆ ಆತನ ಕಾರಿನಲ್ಲಿ ಮೂರು ಮಂದಿ ಮಹಿಳಾ ಉದ್ಯೋಗಿಗಳು ಕುಳಿತುಕೊಂಡು ಮನೆಗೆ ಹೋಗುತ್ತಿರುತ್ತಾರೆ. ಇಬ್ಬರು ಮಹಿಳಾ ಉದ್ಯೋಗಿಳು ಇಳಿದಾದ ಮೇಲೆ ಕಾರ್ ಡ್ರೈವರ್, ಕೊನೆಯಲ್ಲಿ ಉಳಿದಿದ್ದ ಮಹಿಳಾ ಉದ್ಯೋಗಿಯ ಜೊತೆಗೆ, ಈಗಾಗಲೆ ಕಾರಿನಿಂದ ಇಳಿದು ಹೋದ ಉದ್ಯೋಗಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ.
'ಮೇಡಂ, ಆ ಮಹಿಳಾ ಉದ್ಯೋಗಿಗಳು ಹಾಕಿಕೊಂಡು ಬರುವ ಸೆಂಟ್ನ ವಾಸನೆ ಹಿಡಿದು ವಾಂತಿ ಬರುವ ರೀತಿಯಿದೆ. ಯಾಕಾದ್ರು ಅವರು ನಮ್ಮ ಕಾರಿಗೆ ಬರುತ್ತಾರೊ' ಅಂತ ಏನೇನು ಮಾತನಾಡುತ್ತಾನೆ.
ಡ್ರೈವರ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಉದ್ಯೋಗಿ, 'ಈ ಡ್ರೈವರ್ ನನ್ನ ಸಹದ್ಯೋಗಿಗಳು ಕಾರಿನಿಂದ ಇಳಿದ ತಕ್ಷಣ ಅವರ ಮೇಲೆ ದೂರು ಹೇಳುತ್ತಾನೆ. ಈಗ ನಾನು ಕಾರಿನಿಂದ ಇಳಿದ ಮೇಲೂ ನನ್ನ ಮೇಲೂ ಇದೇ ರೀತಿಯ ಕೆಟ್ಟ ಆಲೋಚನೆಗಳನ್ನು ವ್ಯಕ್ತಪಡಿಸದೆ ಇರಲಾರ. ಈತನ ವಿರುದ್ಧ ಮೇಲಿನ ಅಧಿಕಾರಿಗಳಿಗೆ ದೂರನ್ನು ನೀಡಬೇಕೆಂದು' ಆಲೋಚಿಸುತ್ತಾಳೆ.
ಅನಗತ್ಯ ಮಾತಿಗೆ ಹಾಕಿ ಕಡಿವಾಣ?
ಕೆಲಸದ ಅವಧಿಯಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯ ನಾವು ಮಾಡುವ ಕೆಲಸಕ್ಕೆ ಅಗತ್ಯವೇ ಬೀಳುವುದಿಲ್ಲ. ಆದರೂ ಮನಸಿಗೆ ಬಂದದ್ದನ್ನು ಮಾತನಾಡಲು ತವಕಿಸುತ್ತೇವೆ. ಇದು ಒಳ್ಳೆಯ ಉದ್ಯೋಗಿಯ ಲಕ್ಷಣವಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ.
ನಮ್ಮ ಆಲೋಚನೆಗಳ ರೀತಿಯಲ್ಲಿ ಎಲ್ಲರ ಆಲೋಚನೆಗಳು ಇರಬೇಕು ಅಂತೇನಿಲ್ಲ. ಆದರೂ ಪದೇ ಪದೇ ಸಮಯ ಸಿಕ್ಕಾಗಲೆಲ್ಲ ಹಾಗೂ ಕೆಲಸದ ಅವಧಿಯಲ್ಲೂ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಹೋದರೆ ನಮ್ಮ ಮೇಲಿನ ಅಧಿಕಾರಿಗಳಿಗೆ ಕಿರಿಕಿರಿ ಆಗಬಹುದು. ಇದರಿಂದ ನಿಮ್ಮನ್ನು ಕೆಲಸದಲ್ಲಿ ಪ್ರೋತ್ಸಾಹಿಸದೇ ಹೋಗಬಹುದು. ಇದು ಹೀಗೆಯೇ ಮುಂದುವರೆದು ಕೆಲಸಕ್ಕೂ ಕುತ್ತು ತರಬಹುದೆಂಬ ಎಚ್ಚರ ಇದ್ದರೆ ಒಳ್ಳೆಯದು.
ಕೆಲಸದ ಕುರಿತ ಚರ್ಚೆಗೆ ಸೀಮಿತವಾಗಲಿ
ಯಾವುದೇ ಕೆಲಸದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಎಲ್ಲವನ್ನು ಕಲಿತಿರುವುದಿಲ್ಲ. ಕಲಿತಷ್ಟು ಕಲಿಯುವಂತಹದ್ದ ಸಾಗರದಷ್ಟು ಗೋಚರಿಸುತ್ತಿರುತ್ತದೆ. ಹೀಗಾಗಿ ಕಲಿಯಬೇಕೆಂಬ ಹಂಬಲ ಇರುವವನಿಗೆ ಕೆಲಸದ ಅವಧಿಯಲ್ಲಿ ತಮ್ಮ ವೈಯಕ್ತಿಕ ಊಟ, ಬಟ್ಟೆಗೆ ಬಗೆಗೂ ಗಮನ ಇರುವುದಿಲ್ಲ. ಅಷ್ಟರ ಮಟ್ಟಿಗೆ ಕೆಲಸದಲ್ಲಿ ನಿರತನಾಗಿರುತ್ತಾನೆ. ಇಂತಹ ಮನಃಸ್ಥಿತಿ ಇದ್ದವರು ಮಾತ್ರ ತಮ್ಮ ಸಹದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯಗಳಿಗೆ ಆಸ್ಪದ ಕೊಡುವುದಿಲ್ಲ. ಅಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತಾ ನಾವು ಮುಂದಾಗಬೇಕು.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications