Get Updates
Get notified of breaking news, exclusive insights, and must-see stories!

Skeleton Lake: ಭಾರತದಲ್ಲಿ ನಿಗೂಢ ಅಸ್ಥಿಪಂಜರಗಳ ಸರೋವರ: ಗುಂಡಿಗೆ ಗಟ್ಟಿ ಇದ್ದವರು ಮಾತ್ರ ಓದಿ...

ಭಾರತದಲ್ಲಿ ಲೆಕ್ಕವಿಲ್ಲದಷ್ಟು ನಿಗೂಢ ಸ್ಥಳಗಳಿವೆ. ನಮ್ಮ ದೇಶದಲ್ಲಿ ಕಂಡುಬರುವ ಅನೇಕ ದೇವಾಲಯಗಳಲ್ಲಿ ಅನೇಕ ರಹಸ್ಯಗಳು ಅಡಗಿವೆ. ದೇವಾಲಯಗಳಲ್ಲದೆ ಹಲವು ನಿಗೂಢ ಸ್ಥಳಗಳೂ ಇವೆ. ಈ ಸ್ಥಳಗಳಲ್ಲಿ ಇರುವ ರಹಸ್ಯಗಳಿಂದಾಗಿ ಅನೇಕ ಜನರು ಈ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಾರೆ. ವಾಸ್ತವವಾಗಿ ಅಂತಹ ನಿಗೂಢ ಸ್ಥಳಗಳು ಇಂದಿಗೂ ಕಾಣಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ. ಇವುಗಳಲ್ಲಿ ಒಂದು ಭಯಾನಕ ಸ್ಥಳವೆಂದರೆ ಅಸ್ಥಿಪಂಜರಗಳ ಸರೋವರ.

ಅಸ್ಥಿಪಂಜರಗಳ ಸರೋವರ ಎಲ್ಲಿದೆ?

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸುಮಾರು 16,470 ಅಡಿ (5,020 ಮೀ) ಎತ್ತರದಲ್ಲಿ ರೂಪಕುಂಡ ಎಂಬ ಹಿಮನದಿಯ ಸರೋವಿದೆ. ಸರೋವರದ ಬಳಿ ನೂರಾರು ಅಸ್ಥಿಪಂಜರಗಳು ಕಂಡುಬರುವುದರಿಂದ ಸ್ಥಳೀಯರು ಇದನ್ನು ಅಸ್ಥಿಪಂಜರ ಸರೋವರ ಎಂದು ಕರೆಯುತ್ತಾರೆ.

The mysterious skeleton lake of india in kannada

ಈ ಸರೋವರವು ಹಿಮಾಲಯದ ಮಡಿಲಲ್ಲಿದೆ ಮತ್ತು ಸರೋವರದ ಸುತ್ತಲಿನ ಪ್ರದೇಶದಲ್ಲಿ ಜನವಸತಿಯಿಲ್ಲ. ಈ ಸರೋವರ ಹಿಮನದಿಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಆವೃತವಾಗಿದೆ. ಇದು ಉತ್ತರಾಖಂಡದ ಜನಪ್ರಿಯ ಟ್ರೆಕ್ಕಿಂಗ್ ತಾಣವೂ ಹೌದು...

ಸರಿಸುಮಾರು 3 ಮೀ ಆಳದಲ್ಲಿ ಇರುವ ಈ ರೂಪಕುಂಡದ ತೀರದಲ್ಲಿ ನೂರಾರು ಪ್ರಾಚೀನ ಮಾನವ ಅವಶೇಷಗಳಿವೆ. ಈ ಸರೋವರ ಚಳಿಗಾಲದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಗೊಳ್ಳುತ್ತದೆ. ಮಂಜುಗಡ್ಡೆ ಕರಗಿದಾಗ ಅಸ್ಥಿಪಂಜರಗಳು ವ್ಯಾಪಕವಾಗಿ ಗೋಚರಿಸುತ್ತವೆ. ಹಾಗಾದರೆ ಈ ಆಸ್ಥಿಪಂಜರಗಳು ಯಾರದ್ದು?

ಈ ಅಸ್ಥಿಪಂಜರಗಳು ಯಾರದ್ದು?

1942 ರಲ್ಲಿ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದಾಗ ಈ ಅಸ್ಥಿಪಂಜರ ಸರೋವರ ಮೊದಲು ಕಂಡುಹಿಡಿಯಲಾಯಿತು. ಈಶಾನ್ಯದ ಮೂಲಕ ಭಾರತಕ್ಕೆ ನುಸುಳಲು ಬಯಸಿದ ಜಪಾನಿನ ಸೈನಿಕರ ಅಸ್ಥಿಪಂಜರಗಳು ಇವು ಎಂದು ಬ್ರಿಟಿಷರು ನಂಬಿದ್ದರು. ಅಲ್ಲದೆ ಈ ಬೆಟ್ಟ ಪುರಾತನ ಯುದ್ಧಭೂಮಿಯಾಗಿತ್ತು. ಕಳೆದುಹೋದ ಯೋಧರ ದೇಹಗಳನ್ನು ಇಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತದೆ.

The mysterious skeleton lake of india in kannada

ಅಲ್ಲದೆ ಮಾರಣಾಂತಿಕ ರೋಗದಿಂದಾಗಿ ಇಡೀ ಗ್ರಾಮ ನಾಶವಾಗಿದೆ. ಗ್ರಾಮದ ಆಸ್ಥಿಪಂಜರಗಳೇ ಇವು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಮೃತ ದೇಹದ ಅಸ್ಥಿಪಂಜರಗಳು ಹೊರತುಪಡಿಸಿ ಬೇರೇನೂ ಉಳಿದಿಲ್ಲ. ಈ ಎಲ್ಲಾ ಸಿದ್ಧಾಂತಗಳು ಸಮರ್ಥನೀಯವಾಗಿದ್ದರೂ, ಮತ್ತೊಂದು ಪರ್ಯಾಯ ನಂಬಿಕೆಯೆಂದರೆ, ಈ ಸಾವುಗಳು ಆರಾಧನೆ ಅಥವಾ ಧಾರ್ಮಿಕ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟ ಗುಂಪು ಆತ್ಮಹತ್ಯೆಗಳಾಗಿರಬಹುದು ಎನ್ನಲಾಗುತ್ತದೆ.

ಸ್ಥಳೀಯ ದಂತಕಥೆಯ ಪ್ರಕಾರ, ಕನ್ನಾಜ್‌ನ ರಾಜ ರಾಜಾ ಜಸ್ತವಾಲ್ ತನ್ನ ಗರ್ಭಿಣಿ ಪತ್ನಿ ರಾಣಿ ಪಾಲಂಬಾ ಮತ್ತು ಅವರ ಸೇವಕರೊಂದಿಗೆ ನಂದಾ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಗೆ ತೆರಳಿದ್ದನು. ಅಲ್ಲಿ ಅವರು ಭಾರೀ ಬಿರುಗಾಳಿಯನ್ನು ಎದುರಿಸಬೇಕಾಯಿತು. ಹೀಗಾಗಿ ಇಡೀ ಗುಂಪು ರೂಪಕುಂಡ ಸರೋವರದ ಬಳಿ ಕಣ್ಮರೆಯಾಯಿತು. ಆ ಗುಂಪಿನ ಅಸ್ಥಿಪಂಜರಗಳು ಇವಾಗಿವೆ ಎಂದು ನಂಬಲಾಗುತ್ತದೆ.

ಸರೋವರ ಸಂಶೋಧನೆ

ಈ ಅಸ್ಥಿಪಂಜರಗಳನ್ನು ಮೊದಲು 1942 ರಲ್ಲಿ ಬ್ರಿಟಿಷ್ ಕಾನ್‌ಸ್ಟೆಬಲ್‌ಗಳು ಪತ್ತೆ ಮಾಡಿದರು. ಬಳಿಕ ಇಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಅವರು B840 ಗಿಂತ ಹಿಂದಿನದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆದರೆ ಈ ಅಸ್ಥಿಪಂಜರಗಳು ಯಾರದ್ದು ಎನ್ನುವ ಬಗ್ಗೆ ಮಾತ್ರ ಇನ್ನೂ ನಿಖರವಾಗಿಲ್ಲ.

ಈ ಪ್ರದೇಶದ ಸುತ್ತಲು ಪ್ರದೇಶದಲ್ಲಿ ಜನವಾಸವಿಲ್ಲ. ಹೀಗಾಗಿ ಈ ಸರೋವರಕ್ಕೆ ರಕ್ಷಣೆ ನಿಡುವುದು ಕಷ್ಟವಾಗಿದೆ. ಆಗಾಗ ಅಸ್ಥಿಪಂಜರಗಳು ಕಣ್ಮರೆಯಾಗುತ್ತಿರುತ್ತವೆ. ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂಬರುವ ವರ್ಷಗಳಲ್ಲಿ ಈ ಅವಶೇಷಗಳು ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ.

ಅಸ್ಥಿಪಂಜರಗಳು ಕಣ್ಮರೆ

ಅಲ್ಲದೆ ಅನೇಕ ಸಂಶೋಧಕರು ಹಾಗೂ ಪ್ರವಾಸಿಗರು ತಮ್ಮೊಂದಿಗೆ ಇಲ್ಲಿನ ಅವಶೇಷಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಅತ್ಯಾಸಕ್ತಿಯ ಸಂಶೋಧಕರು ಮತ್ತು ವಿಜ್ಞಾನಿಗಳು ಸಂಶೋಧನಾ ಉದ್ದೇಶಗಳಿಗಾಗಿ ಅಸ್ಥಿಪಂಜರಗಳನ್ನು ಒಯ್ಯುತ್ತಾರೆ. ಆದ್ದರಿಂದ, ಪ್ರದೇಶವನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ.

ಇದನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ನಿರ್ಧರಿಸಿದ್ದಾರೆ. ರೂಪಕುಂಡ್ ಸುಂದರವಾದ ಮತ್ತು ರಮಣೀಯವಾದ ಸರೋವರವಾಗಿದ್ದು, ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ತ್ರಿಶೂಲ್ ಮತ್ತು ನಂದ ಕಂಡಿ ಎಂಬ ಎರಡು ಶಿಖರಗಳ ತಳಹದಿಯ ಸಮೀಪವಿರುವ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ.

ಉತ್ಸವ ಹಾಗೂ ಟ್ರಕ್ಕಿಂಗ್ ಸ್ಥಳ

ಅಲ್ಲದೆ ಇಲ್ಲಿ ಸ್ಥಳೀಯ ಜನರು ಅನೇಕ ಉತ್ಸವಗಳನ್ನು ನಡೆಸುತ್ತಾರೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ರೂಪಗುಂಡ್‌ನಲ್ಲಿ ನಂದಾ ದೇವಿ ರಾಜ್ ಜಾಟ್ ಎಂಬ ಉತ್ಸವವನ್ನು ಆಚರಿಸಲಾಗುತ್ತದೆ. ಇದರಲ್ಲಿ ನಂದಾದೇವಿಯನ್ನು ಪೂಜಿಸಲಾಗುತ್ತದೆ. ಶರತ್ಕಾಲದಲ್ಲಿ ಸಾಹಸ ಪ್ರಿಯರಿಗೆ ಚಾರಣ ಮಾಡಲು ರೂಪಕುಂಡ್ ಅದ್ಭುತವಾದ ಸ್ಥಳವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+