ತೆರಿಗೆ ಉಳಿತಾಯ; ಎಚ್ಆರ್ಎ, ಆರೋಗ್ಯ ವಿಮೆ ಮೂಲಕ ಲಕ್ಷ ರೂ. ಉಳಿಸಿ; ಹೇಗೆ ತಿಳಿಯಿರಿ
ವಾರ್ಷಿಕ ಆದಾಯವು 5 ಲಕ್ಷಗಿಂತ ಹೆಚ್ಚಿನ ಗಳಿಕೆ ಇದ್ದರೆ ಆದಾಯ ತೆರಿಗೆ ಇಲಾಖೆಯು ಕಡ್ಡಾಯವಾಗಿ ಐಟಿಆರ್ ಇ-ರಿಟರ್ನ್ ಮಾಡಲು ಸೂಚಿಸಿದೆ ಮತ್ತು 5ಲಕ್ಷಗಿಂತ ಕಡಿಮೆ ಆದಾಯವಿದ್ದರು ತೆರಿಗೆ ಇಲಾಖೆಗೆ ಐಟಿಆರ್ ಸಲ್ಲಿಸಬೇಕು. ಹೀಗಿರುವುವಾಗ, ನಾವು ಆದಾಯ ತರಿಗೆ ಕಟ್ಟುವ ಮೊದಲು ಕೆಲವು ವಿನಾಯತಿ ಪಡೆದಕೊಳ್ಳಬಹುದು ಇಂದು ಉತ್ತಮ ಯೋಜನೆಯ ಮೂಲಕ ಸಂಬಳ ಪಡೆಯುವ ಜನರು ವಾರ್ಷಿಕವಾಗಿ ಲಕ್ಷಾಂತರ ರೂ.ಯ ಕಟ್ಟುವ ತೆರಿಗೆಯನ್ನು ಉಳಿಸಬಹುದು.
ಆದಾಯ ತೆರಿಗೆಯ ಹಲವು ನಿಯಮಗಳಲ್ಲಿ ತೆರಿಗೆ ಕಡಿತದ ಸೌಲಭ್ಯವಿದೆ. ಇವುಗಳಲ್ಲಿ ಸೆಕ್ಷನ್ 80ಸಿ ಉದ್ಯೋಗಿಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಎಚ್ಆರ್ಎ, ಎನ್ಪಿಎಸ್ ಮತ್ತು ಆರೋಗ್ಯ ವಿಮೆ ಮೂಲಕ ನೀವು 2 ಲಕ್ಷಕ್ಕಿಂತ ಹೆಚ್ಚು ತೆರಿಗೆ ಉಳಿಸಬಹುದು. ಹೌದು ತೆರಿಗೆ ಉಳಿತಾಯ ಸಲಹೆಗಳು ಏನೆಂದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರತಿ ವರ್ಷವು ಕೊನೆಯ ದಿನಾಂಕ ಜುಲೈ 31ರಂದು ಇರುತ್ತದೆ ಆದರೆ ನೀವು ತೆರಿಗೆ ಕಟ್ಟುವುದು ನಿಮಗೆ ಕಡ್ಡಾಯವಿದೆ ಎಂದಾದರೆ ನೀವು ನಿಮ್ಮ ತೆರಿಗೆಯನ್ನು ಮುಂಚಿತವಾಗಿ ಸಲ್ಲಿಸಿಸುವುದು ಒಳಿತು.
ಸಾಮಾನ್ಯವಾಗಿ ಜನರು ತಮ್ಮ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳುತ್ತಾರೆ. ಆದರೂ ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇ-ರಿಟರ್ನ್ ಸಲ್ಲಿಸುವ ಕೊನೆಯಲ್ಲಿ ಜನರು ತೆರಿಗೆ ಉಳಿಸಲು ಕುಶಲತೆಯನ್ನು ಮಾಡುತ್ತಾರೆ. ಕೆಲವು ಜನರು ಅದನ್ನು ಮುಂಚಿತವಾಗಿ ಲೆಕ್ಕ ಹಾಕಿದರೂ. ನೀವು ತೆರಿಗೆಯನ್ನು ಉಳಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ನಿಮಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು. ಎಚ್ಆರ್ಎ, ಎನ್ಪಿಎಸ್ ಮತ್ತು ಆರೋಗ್ಯ ವಿಮೆ ಮೂಲಕ ನೀವು 2 ಲಕ್ಷಕ್ಕಿಂತ ಹೆಚ್ಚು ತೆರಿಗೆಯನ್ನು ಉಳಿಸಬಹುದು ಅದು ಹೇಗೆ ಎಂದು ನೀವು ಅರಿಯಬಹುದು.

ಬಾಡಿಗೆಯ ಹಣ ತೆರಿಗೆ ಮುಕ್ತ
ನೀವು ನಿಮ್ಮ ಅಜ್ಜನ ಮನೆಯಲ್ಲಿ ನಿಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರೆ. ನೀವು ಬಾಡಿಗೆ ಪಾವತಿಸುವುದಿಲ್ಲ. ಆದರೆ ನೀವು ನೀವು ಅಜ್ಜನಿಗೆ ತಿಂಗಳಿಗೆ 43,000 ರೂ. ಬಾಡಿಗೆ ಪಾವತಿಸಿದರೆ ಅಥವಾ ನೀವು ಬಾಡಿಗೆ ಹಣ ನೀಡುತ್ತಿದ್ದರೆ ಈ ಹಣ ಸಂಪೂರ್ಣ ಎಚ್ಆರ್ಎ ತೆರಿಗೆ ಮುಕ್ತವಾಗುತ್ತದೆ. ಇದರಿಂದ ವಾರ್ಷಿಕವಾಗಿ ನಿಮಗೆ 1.34 ಲಕ್ಷ ರೂಪಾಯಿ ಉಳಿತಾಯವಾಗಬಹುದು. ಮತ್ತೊಂದೆಡೆ, ನಿಮ್ಮ ಅಜ್ಜ ಶೇ.30 ಸ್ಟ್ಯಾಂಡರ್ಡ್ ಡಿಡಕ್ಷನ್ ನಂತರ ಬಾಡಿಗೆಗೆ ಪಡೆದ 5.16 ಲಕ್ಷ ರೂ.ಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಅವರು ಎನ್ಪಿಎಸ್ ಅಡಿಯಲ್ಲಿ ವಿನಾಯಿತಿ ಪಡೆಯುತ್ತಾರೆ.
ಮನೆ ಬಾಡಿಗೆ ಭತ್ಯೆ ಅಂದರೆ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತವೆ. ಇದು ನಿಮ್ಮ ಮೂಲ ವೇತನದ 40-50%ವರೆಗೆ ಇರುತ್ತದೆ. ನೀವು ಐಟಿಆರ್ ಸಲ್ಲಿಸಿದಾಗ ಮನೆ ಬಾಡಿಗೆ ಭತ್ಯೆಯ ಮೊತ್ತದ ಮೇಲೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತೀರಿ. ನಿಮ್ಮ ಕಂಪನಿಯು ಮನೆ ಬಾಡಿಗೆ ಭತ್ಯೆಯನ್ನು ನೀಡದಿದ್ದರೆ ಖಂಡಿತವಾಗಿಯೂ ಕಂಪನಿಯ ಎಚ್ಆರ್ ಜೊತೆ ಮಾತನಾಡಿ, ಇದರಿಂದ ನೀವು ತೆರಿಗೆ ಉಳಿಸಬಹುದು.

NPSನಲ್ಲಿ ತೆರಿಗೆ ಕಟ್ಟಲು ರಿಯಾಯಿತಿ
ಸೆಕ್ಷನ್ 80CCD ಅಡಿಯಲ್ಲಿ, ಎನ್ಪಿಎಸ್ನಲ್ಲಿ ಇರಿಸಲಾಗಿರುವ ಮೂಲ ವೇತನದ 10 ಪ್ರತಿಶತದವರೆಗೆ ತೆರಿಗೆ ಮುಕ್ತವಾಗಿದೆ. ಕಂಪನಿಯು ಎನ್ಪಿಎಸ್ನಲ್ಲಿ ರೂ 7,169 ಅಥವಾ ಮೂಲ ವೇತನದ 10 ಪ್ರತಿ ತಿಂಗಳು ಹಾಕುತ್ತದೆ. ಇದರ ತೆರಿಗೆ ಸುಮಾರು 27,000 ರೂ. ಇದೆ. ಆದರೆ ಎನ್ಇಎಸ್ನಲ್ಲಿ 50,000ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 15,600 ರೂಪಾಯಿಗಳನ್ನು ಸುಲಭವಾಗಿ ಉಳಿಸಬಹುದು.

ತೆರಿಗೆ ಮುಕ್ತ ಸೌಲಭ್ಯಗಳ ಲಾಭ
ಕಂಪನಿಯು ಒದಗಿಸುವ ಸೌಲಭ್ಯಗಳನ್ನು ತೆರಿಗೆ ಮುಕ್ತವಾಗಿಯೂ ಬಳಸಬಹುದು. ಆಹಾರ ಕೂಪನ್ಗಳು, LTA ಮತ್ತು ಗ್ಯಾಜೆಟ್ ಭತ್ಯೆಗಳಂತೆ, ಈ ಎಲ್ಲಾ ವೆಚ್ಚಗಳನ್ನು ಮನೆ ತೆರಿಗೆ ವಿನಾಯಿತಿಯಿಂದ ಕೆಲಸದಲ್ಲಿ ಸೇರಿಸಬಹುದು. ನೀವು ರೂ 22,000 ಆಹಾರ ಕೂಪನ್, ರೂ 60,000 ರ ಎಲ್ಟಿಎ ಮತ್ತು ರೂ 60,000 ಗ್ಯಾಜೆಟ್ ಭತ್ಯೆಯನ್ನು ಪಡೆದರೆ, ನೀವು ವಾರ್ಷಿಕ ತೆರಿಗೆಯಲ್ಲಿ ರೂ 42,500 ವರೆಗೆ ಸುಲಭವಾಗಿ ಉಳಿಸಬಹುದು.

ರಜೆಯ ಪ್ರಯಾಣ ಭತ್ಯೆ ಹಾಗೂ ತೆರಿಗೆ
ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ರಜೆಯ ಪ್ರಯಾಣ ಭತ್ಯೆಯನ್ನು ನೀಡುತ್ತವೆ. ಐಟಿಆರ್ ಸಲ್ಲಿಸುವಾಗ ನೀವು ಇದರ ಲಾಭವನ್ನು ಪಡೆಯಬಹುದು. ಇದರ ಅಡಿಯಲ್ಲಿ ನಿಮಗೆ ಎಲ್ಲೋ ಹೋಗಲು ಭತ್ಯೆ ನೀಡಲಾಗುತ್ತದೆ. ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಲಾಂಗ್ ಟೂರ್ ಹೋಗಬಹುದು. ಈ ಪ್ರವಾಸದ ವೆಚ್ಚದಲ್ಲಿ ನೀವು ನಿರ್ದಿಷ್ಟ ಮಿತಿಯವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಈ ಮಿತಿಯು ನಿಮ್ಮ ರಜೆಯ ಪ್ರಯಾಣ ಭತ್ಯೆಯಷ್ಟಿರಬಹುದು. ಆದ್ದರಿಂದ ಈಗ ನೀವು ಪ್ರಯಾಣಿಸಲು ಯೋಜಿಸಬೇಕು, ಆದರೆ ಮೊದಲು ಎಚ್ಆರ್ ಅವರೊಂದಿಗೆ ಮಾತನಾಡಿ ಮತ್ತು ನಿಮ್ಮ ಸಂಬಳದಲ್ಲಿ ರಜೆಯ ಪ್ರಯಾಣ ಭತ್ಯೆಯನ್ನು ಸೇರಿಸಬೇಕು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications