ಬಾಲ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ಹೇಳಿದ ಅದ್ಭುತ ಕತೆ
ವಿವೇಕಾನಂದರು ವಿಶ್ವಮಾನ್ಯರಾಗಿ ಹೊರಹೊಮ್ಮಿದ್ದರ ಹಿಂದೆ ಗುರು ರಾಮಕೃಷ್ಣ ಪರಮಹಂಸರ ಪ್ರಭಾವ ಎಷ್ಟಿದೆಯೋ ಅವರ ವಿವೇಕಾನಂದರ ಪೋಷಕರ ಪ್ರಭಾವವೂ ಅಷ್ಟೇ ಇದೆ.
ವಿವೇಕಾನಂದರ ಪೋಷಕರಾದ ತಾಯಿ ಭುವನೇಶ್ವರಿ ಅವರ ಪ್ರಭಾವವಂತೂ ವಿವೇಕಾನಂದರ ಮೇಲೆ ತುಸು ಹೆಚ್ಚೇ ಇದೆ. ಬಾಲ್ಯದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ಹೇಳಿದ ಕತೆ ಇಲ್ಲಿದೆ.
ನರೇಂದ್ರರ ತಂದೆ ವಿಶ್ವನಾಥ ದತ್ತರು ಕೊಲ್ಕತ್ತಾದಲ್ಲಿ ಖ್ಯಾತ ವಕೀಲರಾಗಿದ್ದರು. ಮಗ ನರೇಂದ್ರನೂ ತಮ್ಮಂತೆಯೇ ವಕೀಲನಾಗಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ನಾಲಕ ನರೇಂದ್ರರ ಆಸೆ ಬೇರೆಯದ್ದೇ ಆಗಿತ್ತು.

ಆಗಿನ ಕಾಲದಲ್ಲಿ ಬ್ರಿಟೀಷ್ ಅಧಿಕಾರಿಗಳು, ಪ್ರಖ್ಯಾತರು, ಜಮೀನ್ದಾರುಗಳು ಎಲ್ಲರೂ ಸಾರೋಟಿನಲ್ಲಿ ಓಡಾಡುತ್ತಿದ್ದರು. ಸಾರೋಟಿನಲ್ಲಿ ಪ್ರಯಾಣಿಸುವುದು ಗೌರವದ ವಿಷಯವಾಗಿತ್ತು. ಇದನ್ನು ನರೇಂದ್ರ ಗಮನಿಸಿದ್ದರು.
ಒಮ್ಮೆ ಮನೆಗೆ ಬಂದ ಅತಿಥಿಗಳ ಮುಂದೆ ನರೇಂದ್ರರ ತಂದೆ ವಿಶ್ವನಾಥರು 'ದೊಡ್ಡವನಾಗಿ ಏನಾಗಬೇಕೆಂದುಕೊಂಡಿದ್ದೀಯ ಮಗು?' ಎಂದು ಕೇಳಿದರು. 'ಸಾರೋಟಿನ ಚಾಲಕ ಆಗಬೇಕೆಂದಿದ್ದೇನೆ' ಎಂದರು ಬಾಲಕ ನರೇಂದ್ರ.
ಮಗನ ಉತ್ತರ ಕೇಳಿ ಸಿಟ್ಟು ನೆತ್ತಿಗೆ ಹತ್ತಿದ ವಿಶ್ವನಾಥರು, ನರೇಂದ್ರನಿಗೆ ಕೆನ್ನೆಗೆ ಬಾರಿಸಿದರು. ನರೇಂದ್ರ ಅಳುತ್ತಾ ಓಡಿ ಅಮ್ಮ ಭುವನೇಶ್ವರಿ ಬಳಿ ಹೋಗಿ ನಡೆದ ಘಟನೆ ಹೇಳಿದ.
ಶಾಂತವಾಗಿ ಕೇಳಿಸಿಕೊಂಡ ಭುವನೇಶ್ವರಿ, ಗೋಡೆಯ ಮೇಲೆ ತೂಗು ಹಾಕಲಾಕಿದ್ದ ಶ್ರೀಕೃಷ್ಣ ಅರ್ಜುನನ್ನು ಕೂರಿಸಿಕೊಂಡು ಸಾರೋಟು ಓಡಿಸುತ್ತಿದ್ದ ಚಿತ್ರ ತೋರಿಸಿ, 'ಮಗು ಸಾರೋಟು ಓಡಿಸುವುದು ಕೆಟ್ಟ ಉದ್ಯೋಗವಲ್ಲ, ಆದರೆ ನೀನು ಓಡಿಸಬೇಕಾದುದು ಜನರು ಓಡಾಡುವ ರಥವನ್ನಲ್ಲ, ಬದಲಿಗೆ ಧರ್ಮದ ಸಾರೋಟನ್ನು' ಎಂದರು.
ಅಮ್ಮ ಹೇಳಿದ ಮಾತು ನರೇಂದ್ರರ ಮನದಲ್ಲಿ ಅಚ್ಚೊತ್ತಿತು. ಅಂತೆಯೇ ತಂದೆ ವಿಶ್ವನಾಥರಿಗೂ ತಮ್ಮ ತಪ್ಪಿನ ಅರಿವಾಯಿತು. ಶ್ರೀಕೃಷ್ಣನೇ ಮಾಡಿದ ಸಾರೋಟು ಚಾಲಕನ ಉದ್ಯೋಗವನ್ನು ನಾನು ನೀಚವೆಂಬಂತೆ ಕಂಡೆ ಎಂದು ಬೇಸರಿಸಿಕೊಂಡು, ಮಗ ನರೇಂದ್ರನನ್ನು ಮುದ್ದಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications