ಬಲೂನು ಮಾರಿ ಬದುಕು ಕಟ್ಟಿಕೊಳ್ಳಬೇಕಾ ಪುಟಾಣಿ ಮಕ್ಕಳು?
ಅಪ್ಪನದೋ ಅಮ್ಮನದೋ ಅಂಗೈಯನ್ನು ತಮ್ಮ ಪುಟ್ಟ ಕೈಯಲ್ಲಿ ಗಟ್ಟಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕಾಡಿ ಬೇಡಿ ಪಡೆದುಕೊಂಡ ಬಣ್ಣ ಬಣ್ಣದ ಬಲೂನು ಹಿಡಿದು ಬಾಲ್ಯದಲ್ಲಿ ನಾವೆಲ್ಲರೂ ಜಾತ್ರೆಯಲ್ಲಿ ಸುತ್ತಿರುತ್ತೇವೆ. ಆ ನೆನಪುಗಳು ಯಾವತ್ತೂ ನಮಗೆ ಮರೆಯುವುದಿಲ್ಲ.
ಆದರೆ, ಧರ್ಮಸ್ಥಳದ ದೀಪೋತ್ಸವದಲ್ಲಿ ಸಾವಿರಾರು ಜನರ ಮಧ್ಯ ಸಾಗುತ್ತಿರಬೇಕಾದರೆ ಯಾವುದೋ ಮಗುವೊಂದು ಕರೆದಂತಾಗಿ ತಿರುಗಿ ನೋಡಿದರೆ ಕೊಳೆಯಾದ ಹರಕು ಬಟ್ಟೆ ತೊಟ್ಟ ಒಂದಿಬ್ಬರು ಪುಟಾಣಿ ಮಕ್ಕಳು ತಮ್ಮ ಪುಟ್ಟ ಬಡಕಲು ಕೈಗಳಲ್ಲಿ ಐದತ್ತು ಬಣ್ಣ ಬಣ್ಣದ ಬಲೂನ್ಗಳನ್ನು ಹಿಡಿದು "ಲೇಲೋ ಬಯ್ಯಾ" ಎಂದು ಅಂಗಲಾಚುತ್ತಿದ್ದವು.
ಎಂತಹ ಕಲ್ಲು ಮನಸ್ಸು ಇರುವವನು ನೋಡಿದರೂ ಒಂದೇ ಕ್ಷಣದಲ್ಲಿ ಮನಸ್ಸು ಕರಗಿ ಬಿಡಬೇಕು. ಅಂತಹ ಆದ್ರತೆ. ಮುಗ್ಧತೆ. ನಾವೆಲ್ಲರೂ ಆ ವಯಸ್ಸಿನಲ್ಲಿ ನಾವು ನಮ್ಮ ಖುಷಿಗಾಗಿ ಅತ್ತು ಬಲೂನು ಕೊಡಿಸಿಕೊಂಡರೆ, ಆ ಮಕ್ಕಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅಳು ಮುಖ ಮಾಡಿಕೊಂಡು ಮಾರುತ್ತಿದ್ದದ್ದು ಎಂತಹ ವಿಚಿತ್ರವಲ್ಲವೇ. ಇನ್ನೂ ತಮ್ಮ ಎದುರಿಗಿರುವ ಜಗತ್ತು ಏನೆಂದು ತಿಳಿಯುವ ಮೊದಲೇ ಆ ಪುಟ್ಟ ಮಕ್ಕಳು ಅಲೆಮಾರಿಗಳಾಗಿ ಬಲೂನು ಮಾರಾಟ ಮಾಡುತ್ತಾ ಮುಂದೆ ತಮ್ಮ ಜೀವನದ ದಾರಿಯನ್ನೇ ಮಾರಾಟವಾದ ಬಲೂನಿನಂತೆ ಮರೆತು ಬಿಡುತ್ತಾರೆನೋ.

ಆದರೆ ಇದೇ ರೀತಿಯ ದೃಶ್ಯಗಳು ರಸ್ತೆಯ ಅನೇಕ ಕಡೆಗಳಲ್ಲಿ ಸಾಮಾನ್ಯವೆಂಬತೆ ಕಾಣುತ್ತಿತ್ತು. ಇದನೆಲ್ಲಾ ಗಮನಿಸಿದರೆ ಆ ಮಗ್ಧತೆ, ಆದ್ರತೆಗಳೇ ಕೆಲವರಿಗೆ ಹಣ ಮಾಡುವ ಮಾರ್ಗಗಳಂತೆ ಕಾಣಿಸಿರಬೇಕೇನೋ ಅಥವಾ ಆ ಪುಟ್ಟ ಮಕ್ಕಳ ಕೆಲವು ತಂದೆ ತಾಯಿಯರಿಗೆ ಅದುವೇ ಅನಿವಾರ್ಯವೆನೋ.. ಅದೆನೇ ಇರಲಿ, ಆ ಮಕ್ಕಳನ್ನು ನೋಡಿದ ತಕ್ಷಣ ನಿಮಗೆ ಕರುಣೆ ಉಕ್ಕಿದರೆ ನಿಮ್ಮ ಕೈಯಲ್ಲಿ ದೊಡ್ಡ ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ. ಸಾಧ್ಯವಿದ್ದರೆ ಅವರಿಗೆ ತಿನ್ನಲು ಏನಾದರೂ ತೆಗೆದುಕೊಡಿ. ಅದು ಬಿಟ್ಟು ಸಹಾಯದ ಸೋಗಿನಲ್ಲಿ ಆ ಮಕ್ಕಳ ಬಳಿ ಬಲೂನು ಖರೀದಿಸಲು ದಯವಿಟ್ಟು ಹೋಗಬೇಡಿ. ಯಾಕೆಂದರೆ ನೀವು ಕರುಣೆ ತೋರಿ ಖರೀದಿಸುವುದು ಅವರ ಬಾಲ್ಯವನ್ನು ಕಸಿದುಕೊಳ್ಳಬಹುದು. ಮಕ್ಕಳ ಬಳಿ ಯಾರೂ ಖರೀದಿ ಮಾಡದಿದ್ದರೆ ಖಂಡಿತವಾಗಿ ವ್ಯಾಪಾರಿಗಳು ಈ "ಎಮೋಷನಲ್ ಮಾರಾಟ" ದ ದಾರಿಯನ್ನು ಬಿಡುತ್ತಾರೆ.
ಅದರಲ್ಲೂ ಇತ್ತೀಚಿಗೆ ಮಕ್ಕಳನ್ನು ಬಳಸಿ ಭಿಕ್ಷೆ ಬೇಡುವುದು, ಬಲೂನು ಮಾರಾಟ ಮಾಡಿಸುವುದು, ಪುಟ್ಟ ಮಗುವನ್ನು ಕಂಕುಳಲ್ಲಿ ಹಿಡಿದು ಕೊಂಡು ಅದರ ಉಪಯೋಗ ಪಡೆಯುವುದು ಒಂದು ರೀತಿಯಲ್ಲಿ ದಂಧೆಯೇ ಆಗಿಬಿಟ್ಟಿದೆ. ನಮ್ಮ ದೇಶದಲ್ಲಿ ಬಾಲ ಕಾರ್ಮಿಕ ಪದ್ದತಿಗೆ ನಿಷೇಧವಿದ್ದರೂ ಈ ದಂಧೆಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ವಿಫಲವಾಗಿರುವುದು ನಮ್ಮ ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಕಾಣುತ್ತಿದೆ.

ಬಾಲ ಕಾರ್ಮಿಕರ ಬಗ್ಗೆ ವರ್ಷಪೂರ್ತಿ ಮಾಹಿತಿ ಜಾಥಾ ಮಾಡುವ ನಮ್ಮ ಅಧಿಕಾರಿ ವರ್ಗಕ್ಕೆ ಈ ರೀತಿ ಬಲೂನು ಮಾರುತ್ತಾ, ಬಿಕ್ಷೆ ಬೇಡುತ್ತಾ ತಮ್ಮ ಜೀವನ ಶುರುವಾಗುವ ಮೊದಲಿನಿಂದಲೇ ತಮ್ಮ ಜೀವನ ಪೂರ್ತಿ ಬೀದಿಯಲ್ಲಿ ಕಳೆಯುವವರ ಕುರಿತು ಮಾಹಿತಿ ಇಲ್ಲವೇ ,ಇದ್ದರೆ ಈ ಮೂಖ ಮೌನವೇಕೆ ...? ಭಾರತದಂತಹ ದೇಶದಲ್ಲಿ ಇನ್ನೂ ಎಷ್ಟು ದಿನ ಮಕ್ಕಳು ಬೀದಿಯಲ್ಲಿ ಬಲೂನು ಮಾರುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳಬೇಕು..! ಇದಕ್ಕೆಲ್ಲಾ ಉತ್ತರವೇ ಇಲ್ಲವೇ ಅಥವಾ ಉತ್ತರ ಯಾರಿಗೂ ಬೇಕಿಲ್ಲವೇ..?
- ಸಂಜಯ್ ಚಿತ್ರದುರ್ಗ, ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications