ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?
ಹಾಯ್ ಬೆಂಗಳೂರ್ ಕವರ್ ಪೇಜ್ ಸಿದ್ಧವಾಗುತ್ತಿತ್ತು. ಅದಕ್ಕೆ ಫೋಟೋ ಬೇಕು. ಅದನ್ನು ನೋಡದ ಹೊರತು ಹೆಡ್ಡಿಂಗ್ ಕೊಡಲು ರವಿ ಬೆಳಗೆರೆ ಸಿದ್ಧರಿಲ್ಲ. ಆ ಕಡೆಯಿಂದ ವರದಿಗಾರ, ಸರ್ ಫೋಟೋ ಮೇಲ್ ಮಾಡಿದ್ದೀನಿ ಅಂತಿದ್ದಾನೆ. ಇತ್ತ ಆಫೀಸ್ ನಲ್ಲಿ ಇರೋನು, ಫೋಟೋ ಬಂದಿಲ್ಲ ಎನ್ನುತ್ತಿದ್ದಾನೆ.
ಇವರಿಗೆ ಎಲ್ಲಿತ್ತೋ ಸಿಟ್ಟು, ತಗೋ ಬೋಳಿಮಗನೇ ಅವನ ಜತೆ ಮಾತಾಡು. ನಿಮಗೆಲ್ಲ ನಾನೇ ವಿಚಾರಿಸಿ ಹೇಳಬೇಕಾ ಅಂದವರೇ ತಮ್ಮ ಕೈಯಲ್ಲಿದ್ದ ಐಫೋನ್ ಅನ್ನು ಎಂಟು- ಹತ್ತು ಅಡಿ ದೂರದಲ್ಲಿ ಇದ್ದ ಕಂಪ್ಯೂಟರ್ ಸೆಕ್ಷನ್ ನವನ ಕಡೆಗೆ ತೂರಿ ಎಸೆದರು ಬೆಳಗೆರೆ.
ಅದು ಐಫೋನ್ 3GS. ಆಗಿನ ಬೆಲ್ 45,000 ರುಪಾಯಿ. ನಾಲ್ಕೈದು ದಿನಗಳ ಹಿಂದಷ್ಟೇ ಖರೀದಿಸಿದ್ದ ಫೋನ್. ಅಯ್ಯೋ ಏನಾದೀತೋ ಎಂಬ ಆತಂಕ ನಮ್ಮದು. ಆದರೆ ಇವರ ಸಿಟ್ಟು ಕಡಿಮೆ ಆಗಿದ್ದರೆ ಕೇಳಿ.

ಇನ್ನೊಂದು ಸಲ, ತಮ್ಮ ಬಳಿ ಚಾಲಕನಿಗೆ ನೀಡಿದ್ದ ಸೂಚನೆ ಪಾಲಿಸಲಿಲ್ಲ ಎಂಬ ಕಾರಣಕ್ಕೆ ತಾರಾಮಾರಾ ಹೊಡೆದುಬಿಟ್ಟರು. ಅದ್ಯಾವ ಪರಿ ಅಂದರೆ, ಅವನ ಕೈಗೆ ಕಟ್ಟು ಹಾಕಿಸಿಕೊಂಡು ಬಂದು ನಿಂತ. "ಇವನಿಗೆ ಐದು ಸಾವಿರ ರುಪಾಯಿ ಕೊಟ್ಟು ಕಳಿಸು, ರೆಸ್ಟ್ ತಗೊಳ್ಳಲಿ. ಹೀಗೆ ಸಿಟ್ಟು ಮಾಡಿಕೊಂಡು ಇವನಿಗೆ ಹೊಡೆಯುವುದರಿಂದ ನನಗೇ ನಷ್ಟ," ಎಂದಿದ್ದರು.
ರವಿ ಬೆಳಗೆರೆ ತಮ್ಮ ಸಿಟ್ಟು, ಹಠದ ಕಾರಣಕ್ಕೆ ಕಳೆದುಕೊಂಡಿದ್ದು ಹೆಚ್ಚು. ಹೊರಗಿನಿಂದ ನೋಡಿ, ಅವರ ಪ್ರತಿಭೆಗೆ ಶರಣಾಗಿ ಹತ್ತಿರ ಹೋದರೆ ಗಾಬರಿ ಆಗಿಬಿಡುತ್ತಿತ್ತು. ಹಿಂದೆ- ಮುಂದೆ ನೋಡದೆ ರೇಗಿ ಬಿಡುತ್ತಿದ್ದರು. ದಿಢೀರನೇ, ಈಗಿಂದಲೇ ಕೆಲಸಕ್ಕೆ ಬರಬೇಡ ಅಂದುಬಿಡುತ್ತಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ವಿಪರೀತ ಹಚ್ಚಿಕೊಳ್ಳುತ್ತಿದ್ದರು. ಮನೆ ಅಡ್ವಾನ್ಸ್, ಎಷ್ಟೋ ಮಂದಿಗೆ ಮನೆ ಕಟ್ಟುವುದಕ್ಕೆ ಸಹ ಹಣ ಕೊಟ್ಟಿದ್ದರು. ಆದರೆ ಆ ವ್ಯಕ್ತಿಗಳು ನಿಷ್ಠೆ ಬದಲಿಸಿದರೋ ಅಂತಲೋ ಅಥವಾ ತಮಗೆ ಸಿಟ್ಟು ತರಿಸಿದರೋ ಅಂತಲೋ ಕೂಗಾಡುವುದೋ ಬೈಯ್ಯುವುದೋ ಮಾಡಿಬಿಡುತ್ತಿದ್ದರು. ಅಲ್ಲಿಯ ತನಕ ಮಾಡಿದ ಸಹಾಯವೆಲ್ಲ ಹೊಳೆಯೆಲ್ಲ ಹುಣಸೇಹಣ್ಣು ತೊಳೆದಂತೆ ಆಗುತ್ತಿತ್ತು.
ವೃತ್ತಿಯ ಕಾರಣಕ್ಕೆ ಹತ್ತಿರ ಇದ್ದ ಎಷ್ಟೋ ಗೆಳೆಯರನ್ನು ರವಿ ಬೆಳಗೆರೆ ದೂರ ಮಾಡಿಕೊಂಡು ಬಿಟ್ಟರು. ಕೆಲವರು ತಾವಾಗಿಯೇ ದೂರವಾದರು. ಮತ್ತೆ ಕೆಲವರು ಅಂತರ ಕಾಯ್ದುಕೊಂಡರು.
ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪ್ರಶಸ್ತಿ- ಗೌರವಗಳು ಮತ್ಯಾವಾಗಲೋ ಬಂದವು. ಇವರ ಜಿಲ್ಲೆಯವರೇ ಮಂತ್ರಿ ಆದರಲ್ಲಾ, ಸರ್ಕಾರದಲ್ಲಿ ಪವರ್ ಫುಲ್ ಬೇರೆ. ಇನ್ನೇನು ಋಣ ಸಂದಾಯ ಮಾಡಿದ್ದಾರೆ ಅಂತ ಮಾತನಾಡಿಕೊಳ್ಳುವಂತಾಯಿತು. ಆದರೆ ವಾಸ್ತವದಲ್ಲಿ ಆ ಎಲ್ಲ ಪ್ರಶಸ್ತಿ- ಗೌರವಗಳು ಬಹಳ ಹಿಂದೆಯೇ ಸಿಗಬೇಕಾಗಿತ್ತು.
ಆಯಕಟ್ಟಿನ ಹುದ್ದೆಯಲ್ಲಿ ಇರುವವರನ್ನು ಬೆಳಗೆರೆ ಸರಿಯಾಗಿಯೇ ತಿವಿದಿರುತ್ತಿದ್ದರು. ಅದು ಮುಖ್ಯಮಂತ್ರಿ ಇರಲಿ, ಮತ್ತೊಬ್ಬರಿರಲಿ. ತಡವಿಕೊಂಡು ಗೋಳು ಹೊಯ್ದುಕೊಂಡಿರುತ್ತಿದ್ದರು. ಈ ಎಲ್ಲದರಿಂದ ರವಿ ಬೆಳಗೆರೆ ಕಳೆದುಕೊಂಡಿದ್ದೇ ಹೆಚ್ಚು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications