ABP-C Voter Opinion Poll: ಪುದುಚೆರಿಯಲ್ಲಿ ಬದಲಾದ ಜನಾಭಿಪ್ರಾಯ
ನವದೆಹಲಿ, ಜನವರಿ 18: ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕಿಂತ (ಎಸ್ಡಿಎ) ಶೇ 1.8ರಷ್ಟು ಅತ್ಯಲ್ಪ ಪ್ರಮಾಣದ ಮುನ್ನಡೆ ಸಾಧಿಸಲಿದೆ ಎಂದು ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಈ ಎರಡೂ ಮೈತ್ರಿಕೂಟಗಳು ಮತ ಹಂಚಿಕೆಯಲ್ಲಿ ಹೆಚ್ಚಳ ಕಂಡುಕೊಳ್ಳಲಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯ ಎಸ್ಡಿಎ ಮತ ಗಳಿಕೆ ಶೇ 3.1ರಷ್ಟು ಮಾತ್ರ ಏರಿಕೆಯಾಗಲಿದೆ. 2016ರ ಚುನಾವಣೆಯಲ್ಲಿ ಎಸ್ಡಿಎ ಶೇ 39.5ರಷ್ಟು ಮತ ಗಳಿಸಿದ್ದರೆ, ಈ ಬಾರಿ ಶೇ 42.6ರಷ್ಟು ಮತ ಪಡೆಯುವ ನಿರೀಕ್ಷೆಯಿದೆ.
ಆದರೆ ಎಐಎನ್ಆರ್ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ಎನ್ಡಿಎ ಈ ಬಾರಿ ಚುನಾವಣೆಯಲ್ಲಿ ಪುದುಚೆರಿಯನ್ನು ತಮ್ಮ ವಶ ಮಾಡಿಕೊಳ್ಳಲಿದೆ. ಕಳೆದ ಬಾರಿ ಕೇವಲ ಶೇ 30.5ರಷ್ಟು ಮತಗಳನ್ನು ಪಡೆದಿದ್ದ ಎನ್ಡಿಎ, ಈ ಬಾರಿ ಅದನ್ನು ಶೇ 44.4ಕ್ಕೆ ಹೆಚ್ಚಿಸಿಕೊಳ್ಳಲಿದೆ. ಇತರ ಪಕ್ಷಗಳು ಕಳೆದ ಬಾರಿ ಶೇ 30ರಷ್ಟು ಮತ ಪಡೆದಿದ್ದರೆ, ಈ ಸಲದ ಚುನಾವಣೆಯಲ್ಲಿ ಅದರ ಪ್ರಮಾಣ ಕೇವಲ ಶೇ 10ಕ್ಕೆ ಇಳಿಯಲಿದೆ.

30 ಸೀಟುಗಳಿರುವ ಪುದುಚೆರಿ ವಿಧಾನಸಭೆಯಲ್ಲಿ 2016ರ ಚುನಾವಣೆಯಲ್ಲಿ 17 ಸೀಟುಗಳನ್ನು ಗೆದ್ದಿದ್ದ ಎಸ್ಡಿಎ ಮೂರು ಸೀಟುಗಳನ್ನು ಕಳೆದುಕೊಂಡು 14ಕ್ಕೆ ಕುಸಿಯಲಿದೆ. ಎನ್ಡಿಎ ತನ್ನ ಸಂಖ್ಯೆಯನ್ನು 12 ರಿಂದ 16ಕ್ಕೆ ಹೆಚ್ಚಿಸಿಕೊಳ್ಳಲಿದೆ. ಎಸ್ಡಿಎದ ಡಿಎಂಕೆ ತಾನು ಪ್ರತ್ಯೇಕವಾಗಿ ಎಲ್ಲ 30 ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿರುವುದು ಎನ್ಡಿಎಗೆ ಮತ್ತಷ್ಟು ಸಂತಸ ನೀಡಿದೆ.
* ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಎಷ್ಟು ತೃಪ್ತಿಕರವಾಗಿದೆ?
ತುಂಬಾ ತೃಪ್ತಿಕರ: 37%
ತೃಪ್ತಿಕರ: 27%
ಅತೃಪ್ತಿಕರ: 32%
ಹೇಳಲು ಅಸಾಧ್ಯ: 04%
* ಕೇಂದ್ರ ಸರ್ಕಾರದ ಆಡಳಿತ ಸಮಾಧಾನ ತಂದಿದೆಯೇ?
ತುಂಬಾ ತೃಪ್ತಿಕರ: 33%
ತೃಪ್ತಿಕರ: 16%
ಅತೃಪ್ತಿಕರ: 44%
ಹೇಳಲು ಅಸಾಧ್ಯ: 07%
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications