ಪಶ್ಚಿಮ ಬಂಗಾಳದಲ್ಲಿ ಅಚ್ಚರಿ, ಮತದಾರನ ಚಿತ್ತ 'ಎಡದಿಂದ ಬಲ'ಕ್ಕೆ!
ಕೋಲ್ಕತ್ತಾ, ಮೇ 28: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಭವಿಷ್ಯವನ್ನೇ ಕತ್ತಲಾಗಿಸಿದ್ದು, ಪಶ್ಚಿಮ ಬಂಗಾಳದ ಫಲಿತಾಂಶ. ರಾಜ್ಯದಲ್ಲಿ ಬಿಜೆಪಿ ತನಗೊಬ್ಬ ಪ್ರತಿಸ್ಪರ್ಧಿ ಎಂದೇ ಎಣಿಸಿರದ ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಭಾರೀ ಆಘಾತವುಂಟಾಗಿದೆ.
ಅದರಲ್ಲೂ ಮತ ಹಂಚಿಕೆಯ ಪ್ರಮಾಣವನ್ನು ನೋಡಿದರೆ ಇಷ್ಟು ವರ್ಷ ಎಡಪಕ್ಷಕ್ಕೆ ಮತ್ತು ತೃಣಮೂಲ ಕಾಂಗ್ರೆಸ್ ನತ್ತ ಮಾತ್ರ ಒಲವು ತೋರಿದ್ದ ದಲಿತರು, ಒಬಿಸಿ, ಆದಿವಾಸಿಗಳು ಈ ಬಾರಿ ಬಿಜೆಪಿಯತ್ತ ವಾಲಿವೆ. ಅದೂ ಅನೂಹ್ಯ ಸಂಖ್ಯೆಯಲ್ಲಿ!
ದಿ ಹಿಂದು ಸಿಎಸ್ ಡಿಸಿ-ಲೋಕನೀತಿ ಫಲಿತಾಂಶೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಪಶ್ಚಿಮ ಬಂಗಾಳದ ಮತದಾರ ಎಡದಿಂದ ಬಲಕ್ಕೆ ವಾಲಿರುವ ಸ್ಪಷ್ಟ ಚಿತ್ರಣ ಈ ಸಮೀಕ್ಷೆಯ ಮೂಲಕ ಸಿಕ್ಕಿದೆ.
2014 ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ 18(42) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ ಬಿಜೆಪಿಯ ಮತಹಂಚಿಕೆಯ ಪ್ರಮಾಣ 2014 ಕ್ಕೆ ಹೋಲಿಸಿದರೆ ಶೇ.40 ರಷ್ಟು ಹೆಚ್ಚಾಗಿದೆ! ಇದು ಎಡಪಕ್ಷ ಮತ್ತು ಟಿಎಂಸಿ ಪಾಲಿಗೆ ದುಃಸ್ವಪ್ನವೇ ಸರಿ.

ಎಡದಿಂದ ಬಲಕ್ಕೆ...
ಲೋಕನೀತಿ ಸಮೀಕ್ಷೆಯ ಪ್ರಕಾರ 2019 ರಲ್ಲಿ ಪಶ್ಚಿಮ ಬಂಗಾಳದ ಟಿಪಿಕಲ್ ಎಡಪಂಥೀಯ ಮತದಾರರಾಗಿದ್ದ ಶೇ.39 ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ, ಶೇ.31 ರಷ್ಟು ಮತದಾರರು ಟಿಎಂಸಿಗೆ, ಶೇ.30 ರಷ್ಟು ಮತದಾರರು ಮಾತ್ರವೇ ಮತ್ತೆ ಎಡಪಕ್ಷಕ್ಕೆ ಮತಹಾಕಿದ್ದಾರೆ!
ಹಾಗೇ ಕಾಂಗ್ರೆಸ್ ನ ಮತದಾರರಾಗಿದ್ದ ಶೇ 32ರಷ್ಟು ಜನ ಬಿಜೆಪಿಗೆ ಮತಹಾಕಿದ್ದರೆ, ಟಿಎಂಸಿ ಗೆ ಶೇ. 20, ಎಡಪಕ್ಷಗಳಿಗೆ ಶೇ.4, ಕಾಂಗ್ರೆಸ್ ಗೆ ಶೇ.32 ರಷ್ಟು ಜನ ಮತ ಚಲಾಯಿಸಿದ್ದಾರೆ.

ಬಿಜೆಪಿ ಮತದಾರರು
ಬಿಜೆಪಿಯತ್ತ ವಾಲಿದ ಟಿಎಂಸಿ, ಎಡಪಕ್ಷದ ಮತದಾರರು

ಟಿಎಂಸಿ ಮತದಾರರು
ಟಿಎಂಸಿಗೆ ಆಘಾತ ನೀಡಿದ ಮತದಾರರು

ಎಡಪಕ್ಷದ ಮತದಾರರು
ಎಡಪಕ್ಷಕ್ಕೆ ಕೈಕೊಟ್ಟ ಮತಬ್ಯಾಂಕ್ ಗಳು

ಕಾಂಗ್ರೆಸ್ ಮತದಾರರು
ಕಾಂಗ್ರೆಸ್ ಕಡೆ ತಿರುಗಿಯೂ ನೋಡದ ಮತದಾರರು
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications