ಆಘಾತಕಾರಿ ವರದಿ: ಮಾಲಿನ್ಯದಿಂದ 2019ರಲ್ಲಿ 9 ಮಿಲಿಯನ್ ಜನರು ಸಾವು
ಪ್ಯಾರಿಸ್, ಮೇ 18: ಮಾಲಿನ್ಯ ಕಾರಣದಿಂದಾಗಿ 2019ರಲ್ಲಿ ಜಗತ್ತಿನಲ್ಲಿ ಸುಮಾರು 9 ಮಿಲಿಯನ್ ಜನರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಬುಧವಾರ ಬಿಡುಗಡೆಯಾದ ಜಾಗತಿಕ ವರದಿ ತಿಳಿಸಿದೆ.ಇದು ಮಾನವನಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮಾನವ ನಿರ್ಮಿತ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಭೂ ಮಾಲಿನ್ಯ ತಕ್ಷಣ ಮಾನವನ ಸಾವಿಗೆ ಕಾರಣವಾಗುವುದು ವಿರಳ. ಆದರೆ ಇದು ಹೃದಯ ಸಂಬಂಧಿ ರೋಗಗಳು, ಕ್ಯಾನ್ಸರ್, ಉಸಿರಾಟದ ತೊಂದರೆ, ಅತಿಸಾರ ಸೇರಿದಂತೆ ಅನೇಕ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಯುದ್ಧ, ಭಯೋತ್ಪಾದನೆ, ಮಲೇರಿಯಾ, ಎಚ್ಐವಿ, ಕ್ಷಯರೋಗ, ಮಾದಕ ದ್ರವ್ಯಗಳ ವ್ಯಸನ, ಮದ್ಯಪಾನವು ಮನುಷ್ಯನ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮ ಮಾಲಿನ್ಯವು ಜಾಗತಿಕ ಆರೋಗ್ಯದ ಮೇಲೆ ಉಂಟು ಮಾಡುತ್ತಿದೆ ಎಂದು ಮಾಲಿನ್ಯ ಮತ್ತು ಆರೋಗ್ಯದ ಮೇಲಿನ ಲ್ಯಾನ್ಸೆಟ್ ಆಯೋಗದ ವರದಿ ಹೇಳಿದೆ. ಮಾಲಿನ್ಯವು ಮಾನವನ ಆರೋಗ್ಯ ಮತ್ತು ಭೂಮಿಯ ಆರೋಗ್ಯಕ್ಕೆ ಅಸ್ತಿತ್ವವದ ಬೆದರಿಕೆಯಾಗಿದೆ. ಇದು ಆಧುನಿಕ ಸಮಾಜದ ಸುಸ್ಥಿರತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ವರದಿಯಲ್ಲಿದೆ.

ವಾಯು ಮಾಲಿನ್ಯದ ಕಾರಣ
ವರದಿಯ ಪ್ರಕಾರ, ವಾಯು ಮಾಲಿನ್ಯದ ಕಾರಣ 2019ರಲ್ಲಿ ವಿಶ್ವದಲ್ಲಿ 6.7 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ. ಪಳೆಯುಳಿಕೆ ಇಂಧನ ಮತ್ತು ಜೈವಿಕ ಇಂಧನವು ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೆ ಹೆಚ್ಚು ಕಾರಣಗಾಗಿದೆ.
"ನಾವು ಶುದ್ಧ ಮತ್ತು ಹಸಿರು ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಅಂಶಗಳು ಜೀವಿಗಳೊಂದಿಗೆ ಗಾಢವಾಗಿ ಬೆಸೆದಿರುವುದರಿಂದ, ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಾಸಾಯನಿಕ ಮಾಲಿನ್ಯ ಕೂಡ ಜೀವವೈವಿಧ್ಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ," ಎಂದು ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪಲೂಷನ್ ವರದಿಯ ಸಂಶೋಧಕರಲ್ಲಿ ಪ್ರಮುಖರಾಗಿರುವ ರಿಚರ್ಡ್ ಫೆಲ್ಲರ್ ಹೇಳಿದರು.
ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ
2015ರಿಂದ ಇಲ್ಲಿಯವರೆಗಿನ ಸಮೀಕ್ಷೆ ಪ್ರಕಾರ ಮಾಲಿನ್ಯ ಕಾರಣದಿಂದ ಜಗತ್ತಿನಲ್ಲಿ ಆರು ಮಂದಿಯಲ್ಲಿ ಒಬ್ಬರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಲಾನ್ಸೆಟ್ ಪ್ಲಾನೆಟರಿ ಹೆಲ್ತ್ ವರದಿಯ ಪ್ರಕಾರ, ವಿಶ್ವದಲ್ಲಿ ವಾಯು ಮಾಲಿನ್ಯದ ಕಾರಣ 2000 ರಲ್ಲಿ 2.9 ಮಿಲಿಯನ್ ಜನರು ಮೃತಪಟ್ಟಿದ್ದಾರೆ. 2015 ರಲ್ಲಿ 4.2 ಮಿಲಿಯನ್ ಮಂದಿ ನಿಧನರಾಗಿದ್ದಾರೆ. 2019ರಲ್ಲಿ 4.5 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ.

ರಾಸಾಯನಿಕ ಮಾಲಿನ್ಯ
ರಾಸಾಯನಿಕ ಮಾಲಿನ್ಯ ಒಂದರಿಂದಲೇ ಜಗತ್ತಿನಲ್ಲಿ 9 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. 2021ರಲ್ಲಿ ಅಲ್ಜೀರಿಯಾ ದೇಶವು ಪೆಟ್ರೋಲ್ ನಲ್ಲಿ ಸೀಸ ಅಂಶ ಇರುವುದನ್ನು ನಿಷೇಧಿಸಿದೆ. ಸೀಸ-ಆಸಿಡ್ ಬ್ಯಾಟರಿಗಳು ಮತ್ತು ಇ-ತ್ಯಾಜ್ಯದ ಅನಿಯಂತ್ರಿತ ಮರುಬಳಕೆಯು ಜನರು ವಿಷಕಾರಿ ವಸ್ತುಗಳ ಸಂಪರ್ಕಕ್ಕೆ ಬರಲು ಕಾರಣವಾಗಿದೆ.

ಕೀಟನಾಶಕಗಳು ಕೂಡ ಅಪಾಯಕಾರಿ
ಇನ್ನೊಂದೆಡೆ ಆಹಾರ ಪದಾರ್ಥಗಳು, ತರಕಾರಿಗಳು, ಮೀನುಗಳು, ಚಾಕೊಲೇಟ್ ಗಳ ರಫ್ತು ಸಂದರ್ಭದಲ್ಲಿ ಅದು ಕೆಡದಂತೆ ನೋಡಿಕೊಳ್ಳಲು, ಪ್ಯಾಕ್ ಮಾಡಲು ಬಳಸುವ ಸೀಸ, ಅರ್ಸೆನಿಕ್, ಕ್ಯಾಡ್ಮಿಯಮ್, ಪಾದರಸ, ಕೀಟನಾಶಕಗಳು ಕೂಡ ಮಣ್ಣು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ವರದಿಯ ಅಂಶಗಳು ತಿಳಿಸಿದೆ.
Recommended Video
-
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ












Click it and Unblock the Notifications