ಕನಗನವಾಡಿಯ ಬಸ್ಸಿನ ಸಂಖ್ಯೆಯೂ 24, ಅಪಘಾತವಾದ ದಿನಾಂಕವೂ 24
ಮಂಡ್ಯ ಜಿಲ್ಲೆಯ ಕನಗನವಾಡಿಯಲ್ಲಿ ಮೂವತ್ತು ಮಂದಿಯ ಪ್ರಾಣಕ್ಕೆ ಎರವಾದ ಬಸ್ಸಿನ ಬಗ್ಗೆ ನಾನಾ ಬಗೆಯ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಸ್ಟೇರಿಂಗ್ ಲಾಕ್ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂಬುದರಿಂದ ಮೊದಲುಗೊಂಡು ಚಾಲಕನ ನಿರ್ಲಕ್ಷ್ಯ ಎಂಬ ಆರೋಪದ ತನಕ ಅವು ನಾನಾ ನಮೂನೆಯಲ್ಲಿವೆ. ಆದರೆ ಪೂರ್ಣವಾದ ತನಿಖೆ ಆದ ಮೇಲೆ ಸತ್ಯ ಗೊತ್ತಾಗಬಹುದು.
ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಬಸ್ ನ ಚಾಲಕನೇ ಸಿಕ್ಕು, ನಿಜವಾಗಲೂ ಏನು ನಡೆಯಿತು ಎಂಬುದನ್ನು ವಿವರಿಸಬೇಕು. ಅದೂ ಪ್ರಾಮಾಣಿಕತೆಯಿಂದ ವಿವರಿಸಿದರಷ್ಟೇ ಸತ್ಯ ಏನು ಎಂದು ಗೊತ್ತಾಗುತ್ತದೆ. ಈ ಮಧ್ಯೆ ವಿಚಿತ್ರವಾದ ವಿಷಯವೊಂದು ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಅದೇನೆಂದರೆ ಸಂಖ್ಯೆ. ಹೌದು ಬಸ್ ನ ಸಂಖ್ಯೆಯ ಬಗ್ಗೆಯೇ ಆ ಚರ್ಚೆ.

ಬಸ್ ನ ಸಂಖ್ಯೆ ಕೆ.ಎ 19- ಎ 5676. 5+6+7+6=24 ಆಗುತ್ತದೆ. ಇನ್ನು ಅಪಘಾತ ನಡೆದಿರುವುದು ನವೆಂಬರ್ 24ನೇ ತಾರೀಕು. ಆದ್ದರಿಂದ ಆ ಸಂಖ್ಯೆ ಕೂಡ ಅಪಘಾತ ಸಂಭವಿಸುವುದಕ್ಕೆ ಕಾರಣವಾ ಎಂದು ಮಾತುಕತೆ ಆಗುತ್ತದೆ. ಈ ಬಗ್ಗೆ ನಂಬಿಕೆ ಇಲ್ಲದವರು ಅದೇ ಬಸ್ ಇಷ್ಟು ವರ್ಷಗಳಲ್ಲಿ, ಅದೆಷ್ಟು ತಿಂಗಳಲ್ಲಿ 24ನೇ ತಾರೀಕು ಸಂಚಾರ ಮಾಡಿರುತ್ತದೆ. ಆಗೆಲ್ಲ ಏನೂ ಆಗಿಲ್ಲವಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಂಖ್ಯೆ 24ರ ಬಗ್ಗೆ ಮಾತ್ರ ಚರ್ಚೆ ಆಗುವಂತಾಗಿದೆ.
ಸಂಖ್ಯಾಶಾಸ್ತ್ರಜ್ಞರನ್ನು ಈ ಬಗ್ಗೆ ಕೇಳಿದರೆ 2 ಅಂದರೆ ಚಂದ್ರ, 4 ಅಂದರೆ ರಾಹು. ಅವೆರಡನ್ನು ಒಟ್ಟಾಗಿ ಮಾಡಿದರೆ ಬರುವ ಸಂಖ್ಯೆ 6. ಅದು ಶುಕ್ರ. ಮಾಲೀಕರ ಜನ್ಮ ದಿನಾಂಕದ ವಿವರವೂ ಸಿಕ್ಕರೆ ಸ್ಪಷ್ಟವಾಗಿ ಹೇಳಬಹುದು ಎನ್ನುತ್ತಾರೆ. ಆದರೆ ಈಗ ಆಗಿರುವ ಜೀವ ಹಾನಿಯ ಮಧ್ಯೆ ಇಂಥ ಎಲ್ಲ ಚರ್ಚೆಯಲ್ಲಿ ಏನು ಅರ್ಥವಿದೆ?
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications