ಕನಗನವಾಡಿಯ ಬಸ್ಸಿನ ಸಂಖ್ಯೆಯೂ 24, ಅಪಘಾತವಾದ ದಿನಾಂಕವೂ 24
ಮಂಡ್ಯ ಜಿಲ್ಲೆಯ ಕನಗನವಾಡಿಯಲ್ಲಿ ಮೂವತ್ತು ಮಂದಿಯ ಪ್ರಾಣಕ್ಕೆ ಎರವಾದ ಬಸ್ಸಿನ ಬಗ್ಗೆ ನಾನಾ ಬಗೆಯ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಸ್ಟೇರಿಂಗ್ ಲಾಕ್ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂಬುದರಿಂದ ಮೊದಲುಗೊಂಡು ಚಾಲಕನ ನಿರ್ಲಕ್ಷ್ಯ ಎಂಬ ಆರೋಪದ ತನಕ ಅವು ನಾನಾ ನಮೂನೆಯಲ್ಲಿವೆ. ಆದರೆ ಪೂರ್ಣವಾದ ತನಿಖೆ ಆದ ಮೇಲೆ ಸತ್ಯ ಗೊತ್ತಾಗಬಹುದು.
ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಬಸ್ ನ ಚಾಲಕನೇ ಸಿಕ್ಕು, ನಿಜವಾಗಲೂ ಏನು ನಡೆಯಿತು ಎಂಬುದನ್ನು ವಿವರಿಸಬೇಕು. ಅದೂ ಪ್ರಾಮಾಣಿಕತೆಯಿಂದ ವಿವರಿಸಿದರಷ್ಟೇ ಸತ್ಯ ಏನು ಎಂದು ಗೊತ್ತಾಗುತ್ತದೆ. ಈ ಮಧ್ಯೆ ವಿಚಿತ್ರವಾದ ವಿಷಯವೊಂದು ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಅದೇನೆಂದರೆ ಸಂಖ್ಯೆ. ಹೌದು ಬಸ್ ನ ಸಂಖ್ಯೆಯ ಬಗ್ಗೆಯೇ ಆ ಚರ್ಚೆ.

ಬಸ್ ನ ಸಂಖ್ಯೆ ಕೆ.ಎ 19- ಎ 5676. 5+6+7+6=24 ಆಗುತ್ತದೆ. ಇನ್ನು ಅಪಘಾತ ನಡೆದಿರುವುದು ನವೆಂಬರ್ 24ನೇ ತಾರೀಕು. ಆದ್ದರಿಂದ ಆ ಸಂಖ್ಯೆ ಕೂಡ ಅಪಘಾತ ಸಂಭವಿಸುವುದಕ್ಕೆ ಕಾರಣವಾ ಎಂದು ಮಾತುಕತೆ ಆಗುತ್ತದೆ. ಈ ಬಗ್ಗೆ ನಂಬಿಕೆ ಇಲ್ಲದವರು ಅದೇ ಬಸ್ ಇಷ್ಟು ವರ್ಷಗಳಲ್ಲಿ, ಅದೆಷ್ಟು ತಿಂಗಳಲ್ಲಿ 24ನೇ ತಾರೀಕು ಸಂಚಾರ ಮಾಡಿರುತ್ತದೆ. ಆಗೆಲ್ಲ ಏನೂ ಆಗಿಲ್ಲವಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಂಖ್ಯೆ 24ರ ಬಗ್ಗೆ ಮಾತ್ರ ಚರ್ಚೆ ಆಗುವಂತಾಗಿದೆ.
ಸಂಖ್ಯಾಶಾಸ್ತ್ರಜ್ಞರನ್ನು ಈ ಬಗ್ಗೆ ಕೇಳಿದರೆ 2 ಅಂದರೆ ಚಂದ್ರ, 4 ಅಂದರೆ ರಾಹು. ಅವೆರಡನ್ನು ಒಟ್ಟಾಗಿ ಮಾಡಿದರೆ ಬರುವ ಸಂಖ್ಯೆ 6. ಅದು ಶುಕ್ರ. ಮಾಲೀಕರ ಜನ್ಮ ದಿನಾಂಕದ ವಿವರವೂ ಸಿಕ್ಕರೆ ಸ್ಪಷ್ಟವಾಗಿ ಹೇಳಬಹುದು ಎನ್ನುತ್ತಾರೆ. ಆದರೆ ಈಗ ಆಗಿರುವ ಜೀವ ಹಾನಿಯ ಮಧ್ಯೆ ಇಂಥ ಎಲ್ಲ ಚರ್ಚೆಯಲ್ಲಿ ಏನು ಅರ್ಥವಿದೆ?
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications