ಕನಗನವಾಡಿಯ ಬಸ್ಸಿನ ಸಂಖ್ಯೆಯೂ 24, ಅಪಘಾತವಾದ ದಿನಾಂಕವೂ 24
ಮಂಡ್ಯ ಜಿಲ್ಲೆಯ ಕನಗನವಾಡಿಯಲ್ಲಿ ಮೂವತ್ತು ಮಂದಿಯ ಪ್ರಾಣಕ್ಕೆ ಎರವಾದ ಬಸ್ಸಿನ ಬಗ್ಗೆ ನಾನಾ ಬಗೆಯ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಸ್ಟೇರಿಂಗ್ ಲಾಕ್ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂಬುದರಿಂದ ಮೊದಲುಗೊಂಡು ಚಾಲಕನ ನಿರ್ಲಕ್ಷ್ಯ ಎಂಬ ಆರೋಪದ ತನಕ ಅವು ನಾನಾ ನಮೂನೆಯಲ್ಲಿವೆ. ಆದರೆ ಪೂರ್ಣವಾದ ತನಿಖೆ ಆದ ಮೇಲೆ ಸತ್ಯ ಗೊತ್ತಾಗಬಹುದು.
ಸದ್ಯಕ್ಕೆ ತಲೆ ಮರೆಸಿಕೊಂಡಿರುವ ಬಸ್ ನ ಚಾಲಕನೇ ಸಿಕ್ಕು, ನಿಜವಾಗಲೂ ಏನು ನಡೆಯಿತು ಎಂಬುದನ್ನು ವಿವರಿಸಬೇಕು. ಅದೂ ಪ್ರಾಮಾಣಿಕತೆಯಿಂದ ವಿವರಿಸಿದರಷ್ಟೇ ಸತ್ಯ ಏನು ಎಂದು ಗೊತ್ತಾಗುತ್ತದೆ. ಈ ಮಧ್ಯೆ ವಿಚಿತ್ರವಾದ ವಿಷಯವೊಂದು ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಅದೇನೆಂದರೆ ಸಂಖ್ಯೆ. ಹೌದು ಬಸ್ ನ ಸಂಖ್ಯೆಯ ಬಗ್ಗೆಯೇ ಆ ಚರ್ಚೆ.

ಬಸ್ ನ ಸಂಖ್ಯೆ ಕೆ.ಎ 19- ಎ 5676. 5+6+7+6=24 ಆಗುತ್ತದೆ. ಇನ್ನು ಅಪಘಾತ ನಡೆದಿರುವುದು ನವೆಂಬರ್ 24ನೇ ತಾರೀಕು. ಆದ್ದರಿಂದ ಆ ಸಂಖ್ಯೆ ಕೂಡ ಅಪಘಾತ ಸಂಭವಿಸುವುದಕ್ಕೆ ಕಾರಣವಾ ಎಂದು ಮಾತುಕತೆ ಆಗುತ್ತದೆ. ಈ ಬಗ್ಗೆ ನಂಬಿಕೆ ಇಲ್ಲದವರು ಅದೇ ಬಸ್ ಇಷ್ಟು ವರ್ಷಗಳಲ್ಲಿ, ಅದೆಷ್ಟು ತಿಂಗಳಲ್ಲಿ 24ನೇ ತಾರೀಕು ಸಂಚಾರ ಮಾಡಿರುತ್ತದೆ. ಆಗೆಲ್ಲ ಏನೂ ಆಗಿಲ್ಲವಲ್ಲ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಂಖ್ಯೆ 24ರ ಬಗ್ಗೆ ಮಾತ್ರ ಚರ್ಚೆ ಆಗುವಂತಾಗಿದೆ.
ಸಂಖ್ಯಾಶಾಸ್ತ್ರಜ್ಞರನ್ನು ಈ ಬಗ್ಗೆ ಕೇಳಿದರೆ 2 ಅಂದರೆ ಚಂದ್ರ, 4 ಅಂದರೆ ರಾಹು. ಅವೆರಡನ್ನು ಒಟ್ಟಾಗಿ ಮಾಡಿದರೆ ಬರುವ ಸಂಖ್ಯೆ 6. ಅದು ಶುಕ್ರ. ಮಾಲೀಕರ ಜನ್ಮ ದಿನಾಂಕದ ವಿವರವೂ ಸಿಕ್ಕರೆ ಸ್ಪಷ್ಟವಾಗಿ ಹೇಳಬಹುದು ಎನ್ನುತ್ತಾರೆ. ಆದರೆ ಈಗ ಆಗಿರುವ ಜೀವ ಹಾನಿಯ ಮಧ್ಯೆ ಇಂಥ ಎಲ್ಲ ಚರ್ಚೆಯಲ್ಲಿ ಏನು ಅರ್ಥವಿದೆ?
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications