ಊರಿನಿಂದ ಬರುವಾಗ 100 ರೂಪಾಯಿ ತಂದಿದ್ದವನ ಕೈಯಲ್ಲಿ ಈಗ 200 ಕೋಟಿ
ಬೆಂಗಳೂರು, ಜನವರಿ 04: ಸ್ವಯಂ ಆಗಿ ಬೆಳೆದವರ ಹೆಚ್ಚು ಸ್ಪೂರ್ತಿದಾಯಕವಾಗಿರುತ್ತವೆ. ಏಕೆಂದರೆ ಅಂತಹವರ ಜೀವನ ಕಥೆಯು ಮತ್ತೊಬ್ಬರಿಗೆ ಸ್ಫೂರ್ತಿಯಾಗುತ್ತದೆ. ಅಂತಹ ಒಂದು ಕಥೆಯು ಮಲಯ್ ದೇಬನಾಥ್ ಅವರದ್ದು.
ತನ್ನ ಶಾಲಾ ಶಿಕ್ಷಣದ ನಂತರ ಉತ್ತರ ಬಂಗಾಳದ ಒಂದು ಸಣ್ಣ ಹಳ್ಳಿಯಿಂದ ಬಂದ ಅವರು ತನ್ನ ಪರಿಶ್ರಮ ಮತ್ತು ದೃಢತೆಯಿಂದ ಕೇವಲ 100 ರೂಪಾಯಿಯಿಂದ 200 ಕೋಟಿ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದರು.

ಮಲಯ್ ದೇಬನಾಥ್, ಅವರ ಅಕ್ಕ ಮತ್ತು ಅವರ ಇಬ್ಬರು ಕಿರಿಯ ಸಹೋದರರು ಇನ್ನೂ ಶಾಲೆಯಲ್ಲಿ ಓದುತ್ತಿದ್ದರು. ಅವರ ತಂದೆಗೆ ಸರಿಯಾದ ಕೆಲಸವಿಲ್ಲದೆ ಅವರ ಕುಟುಂಬವು ಕಡುಕಷ್ಟದ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿತ್ತು.
ದೇಬನಾಥ್ ಅವರು ಶಾಲೆ ಓದುತ್ತಲೇ ಹಳ್ಳಿಯಲ್ಲಿ ಅವರ ಕುಟುಂಬವು ನಡೆಸುತ್ತಿದ್ದ ಸಣ್ಣ ಚಹಾ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಅವರು ತನ್ನ 12 ನೇ ತರಗತಿ ಡಿಪ್ಲೊಮಾವನ್ನು ಗಳಿಸುವವರೆಗೂ ಇದು ಮೂರು ವರ್ಷಗಳ ಕಾಲ ಮುಂದುವರೆಯಿತು. ಬಳಿಕ ಅವರು ತನ್ನ ಅಧ್ಯಯನವನ್ನು ಬಿಟ್ಟು ತನ್ನ ತಾಯಿ ಕೊಟ್ಟ 100 ರೂಪಾಯಿ ಜೊತೆ ದೆಹಲಿಗೆ ಹೊರಟನು.
ದೆಹಲಿಯಲ್ಲಿ ಅವರು ಕ್ಯಾಟರರ್ಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಕೆಲಸ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಟೇಬಲ್ ಪಾಲಿಶ್ ಮಾಡುವುದಾಗಿತ್ತು. ಅವರ ಬಹುಪಾಲು ಸ್ನೇಹಿತರು ಒತ್ತಡದಿಂದ ಕೆಲಸದಿಂದ ತೊರೆದರು. ಆದರೆ ದೇಬನಾಥ್ ಅವರು ಮಾಲೀಕರ ಪ್ರೀತಿಯನ್ನು ಪಡೆದರು. ಒಂದು ವರ್ಷದ ನಂತರ ಅವರ ವೇತನವು 500 ರೂ.ನಿಂದ 3,000 ರೂ.ಗೆ ಏರಿತು. ದೇಬನಾಥ್ ತಮ್ಮ ವೇತನವನ್ನು ಮಾಸಿಕ ಮನೆಗೆ ಕಳುಹಿಸಲು 18 ಗಂಟೆಗಳ ಕೆಲಸವನ್ನು ಮಾಡುತ್ತಿದ್ದರು.
ಬಳಿಕ ಹೋಟೆಲ್ ಕೆಲಸ ಬಿಟ್ಟು ಅವರು ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದರು. ನಂತರ ದೆಹಲಿ ಮೂಲದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಶುರುಮಾಡಿದರು. ಅಲ್ಲದೆ, ಅವರು ಹೋಟೆಲ್ ನಿರ್ವಹಣೆಯಲ್ಲಿ ITDC (ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಕೋರ್ಸ್ ಅನ್ನು ಪೂರ್ಣಗೊಳಿಸಿದರು.
ಈವೆಂಟ್ ಕಂಪನಿಯಲ್ಲಿ ಕೆಲಸ ಮಾಡುವಾಗ ಅವರು ಹೆಚ್ಚು ಪ್ರಸಿದ್ಧಿ ಪಡೆದರು. ಹೊಸ ಕಾಂಟ್ಯಾಕ್ಟ್ಗಳನ್ನು ಪಡೆದರು. ಇದು ನಂತರ ಅವರ ಸ್ವಂತ ಅಡುಗೆ ಕಂಪನಿಯನ್ನು ಪ್ರಾರಂಭಿಸಲು ಸಹಾಯ ಮಾಡಿತು. ಅದೇ ದೇಬನಾಥ್ ಕ್ಯಾಟರರ್ಸ್ ಮತ್ತು ಡೆಕೊರೇಟರ್ಸ್ ಆಗಿ ಇದು ಯಶಸ್ಸನ್ನು ಸಾಧಿಸಿತು.
ಪ್ರಸ್ತುತ, ಅವರು ದೆಹಲಿ, ಪುಣೆ, ಜೈಪುರ, ಅಜ್ಮೀರ್ ಮತ್ತು ಗ್ವಾಲಿಯರ್ ಸೇರಿದಂತೆ 35 ಕ್ಕೂ ಹೆಚ್ಚು ಸೇನಾ ಮೆಸ್ ಸೌಲಭ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಯಶಸ್ವಿ ವ್ಯಾಪಾರದಿಂದಾಗಿ ಉತ್ತರ ಬಂಗಾಳದ ಚಹಾ ತೋಟಗಳು ಸೇರಿದಂತೆ ಸುಮಾರು 200 ಕೋಟಿ ರೂ. ಮಾರುಕಟ್ಟೆ ಮೌಲ್ಯವಿದೆ. ಹೀಗೆ ಅವರ ಅಚಲವಾದ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದಾಗಿ ಅವರ ಜೀವನವು ಯಶಸ್ಸಿನ ಉತ್ತುಂಗಕ್ಕೆ ಏರಿತು.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್










Click it and Unblock the Notifications