Mahalaya Amavasya 2023: ಮಹಾಲಯ ಅಮಾವಾಸ್ಯೆಯ ಮುಹೂರ್ತ ಹಾಗೂ ಆಚರಣೆ ವಿಧಾನ
ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಮಹಾಲಯ ಅಮಾವಾಸ್ಯೆಯು ಹಿಂದೂಗಳು ತಮ್ಮ ಪೂರ್ವಜರನ್ನು ನೆನೆದು ಅವರಿಗೆ ಗೌರವ ನೀಡಿ ತರ್ಪಣ ಬಿಡುವ ಮಹತ್ವದ ದಿನವಾಗಿದೆ. ಇದು 15 ದಿನಗಳ ಸುದೀರ್ಘ ಪಿತೃ ಪಕ್ಷದ ಶ್ರಾದ್ಧ ಆಚರಣೆಗಳ ಕೊನೆಯ ದಿನವಾಗಿರುತ್ತದೆ.
ಈ ವರ್ಷ ಮಹಾಲಯ ಅಮಾವಾಸ್ಯೆಯು ಅಕ್ಟೋಬರ್ 14, 2023 ರಂದು ಬರುತ್ತದೆ. ಈ ದಿನದಂದು ಜನರು ತಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಿ ಮತ್ತು ಅವರ ಆತ್ಮಕ್ಕೆ ಮೋಕ್ಷ ಸಿಗಲು ಪಿತೃ ತರ್ಪಣ ಮತ್ತು ಪಿಂಡ ಪ್ರದಾನವನ್ನು ಮಾಡುತ್ತಾರೆ.

ಹಿಂದೂಗಳಲ್ಲಿ ಅಮವಾಸ್ಯೆಗೆ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಮಹಾಲಯ ಅಮಾವಾಸ್ಯೆಯು ಮುಖ್ಯವಾಗಿ ಪೂರ್ವಜರು ಮತ್ತು ಪೂರ್ವಜರಿಗೆ ಸಮರ್ಪಿತವಾಗಿದೆ. ಮಹಾಲಯ ಅಮಾವಾಸ್ಯೆಯನ್ನು ಸರ್ವಪಿತ್ರಿ ಅಮಾವಾಸ್ಯೆ , ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ತೀರ್ಥ ಸ್ನಾನ ಮಾಡುವುದು, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು, ಸಾತ್ವಿಕ ಆಹಾರವನ್ನು ತಯಾರಿಸುವುದು, ಬ್ರಾಹ್ಮಣರನ್ನು ಆಹ್ವಾನಿಸುವುದು ಮತ್ತು ಮತ್ತು ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಮುಂತಾದ ಆಚರಣೆಗಳು ಈ ದಿನ ನಡೆಯುತ್ತದೆ.
ಮಹಾಲಯ ಅಮಾವಾಸ್ಯೆ 2023
ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ಅಪಾರ ಧಾರ್ಮಿಕ ಮಹತ್ವವಿದೆ. ಪಿತೃ ಅಥವಾ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜನರು ಒಳಿತಿಗಾಗಿ ಮತ್ತು ಸಮೃದ್ಧಿಗಾಗಿ ಪಿತೃ ಪಕ್ಷದ ಸಮಯದಲ್ಲಿ ವಿವಿಧ ಆಚರಣೆಗಳನ್ನು ಮಾಡುತ್ತಾರೆ. ಪಿತೃಪಕ್ಷದ ಕೊನೆಯ ದಿನದಂದು ಪಿತೃ ತರ್ಪಣ ಮತ್ತು ಪಿಂಡದಾನವನ್ನು ಮಾಡುವುದರಿಂದ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಮತ್ತು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.

ಈ ವರ್ಷ ಮಹಾಲಯ ಅಮಾವಾಸ್ಯೆಯು ಅಮಾವಾಸ್ಯೆ ತಿಥಿಯಂದು ಅಶ್ವಿನಾ ಮಾಸದಲ್ಲಿ ಅಂದರೆ ಅಕ್ಟೋಬರ್ 14, 2023 ರಂದು ಬರುತ್ತದೆ. ಮಹಾಲಯ ಅಮಾವಾಸ್ಯೆ 2023 ಅಕ್ಟೋಬರ್ 13, 2023-09:50 ರಾತ್ರಿ ಆರಂಭವಾಗಿ ಅಮವಾಸ್ಯೆ ತಿಥಿ ಅಕ್ಟೋಬರ್ 14, 2023, 11:24 ರಾತ್ರಿ ಕೊನೆಗೊಳ್ಳುತ್ತದೆ.
ಕುತುಪ ಮುಹೂರ್ತ: 2023 ರ ಅಕ್ಟೋಬರ್ 14 ರಂದು ಬೆಳಗ್ಗೆ 11:44 ರಿಂದ ಮಧ್ಯಾಹ್ನ 12:30 ರವರೆಗೆ
ರೋಹಿಣಿ ಮುಹೂರ್ತ: 2023 ರ ಅಕ್ಟೋಬರ್ 14 ರಂದು ಮಧ್ಯಾಹ್ನ 12:30 ರಿಂದ 1:16 ರವರೆಗೆ
ಮಧ್ಯಾಹ್ನ ಮುಹೂರ್ತ ಅಂದರೆ ಅಪರಾಹ್ನ ಮುಹೂರ್ತ: 2023ರ ಅಕ್ಟೋಬರ್ 14 ರಂದು ಮಧ್ಯಾಹ್ನ 1:16 ರಿಂದ 3:35 ರವರೆಗೆ.
ಮಹಾಲಯ ಅಮಾವಾಸ್ಯೆಯಂದು ಪಾಲಿಸಬೇಕಾದ ಆಚರಣೆಗಳು ಇಲ್ಲಿವೆ
1.ಬೆಳಿಗ್ಗೆ ಬೇಗನೆ ಎದ್ದು ತೀರ್ಥ ಸ್ನಾನ ಮಾಡಿ.
2. ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
3. ಮನೆಯಲ್ಲಿ ಸಾತ್ವಿಕ ಆಹಾರವನ್ನು ತಯಾರಿಸಿ ಬ್ರಾಹ್ಮಣರನ್ನು ಆಹ್ವಾನಿಸಿ.
4. ಅವರನ್ನು ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿ ಮತ್ತು ತರ್ಪಣ ಆಚರಣೆಯನ್ನು ಮಾಡಿ
5. ಬ್ರಾಹ್ಮಣರಿಗೆ ಉಪಹಾರ ನೀಡುವ ಮೊದಲು ಹಸುಗಳು, ನಾಯಿಗಳು, ಇರುವೆಗಳು ಮತ್ತು ಕಾಗೆಗಳಿಗೆ ಆಹಾರವನ್ನು ಅರ್ಪಿಸಿ.
4.ಕುಟುಂಬದ ಪುರುಷ ಸದಸ್ಯರು ಬ್ರಾಹ್ಮಣರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆಯನ್ನು ನೀಡಬೇಕು.
5. ಬ್ರಾಹ್ಮಣರ ಭೋಜನ ಮುಗಿದ ನಂತರ, ಎಲ್ಲಾ ಕುಟುಂಬದ ಸದಸ್ಯರು ಆಹಾರವನ್ನು ಸೇವಿಸಬಹುದು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications