ಓಂಕಾರದಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ: ಹೇಗೆ?
ನಾವೆಷ್ಟೇ ಸಂಪಾದಿಸಿದರೂ, ಸಿರಿ ಸಂಪತ್ತನ್ನು ಕೂಡಿ ಹಾಕಿಕೊಂಡರೂ ಮಾನಸಿಕ ನೆಮ್ಮದಿ ಇಲ್ಲದೆ ಹೋದರೆ ಅದೊಂದು ಬದುಕಾಗಿರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಮಾನಸಿಕ ನೆಮ್ಮದಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಇಷ್ಟಕ್ಕೂ ನೆಮ್ಮದಿ ಪಡೆಯಲು ಏನೇನು ಮಾಡಬೇಕು? ಎಂಬುದನ್ನು ತಮ್ಮದೇ ವ್ಯಾಖ್ಯಾನಗಳ ಮೂಲಕ ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ಬಹಳಷ್ಟು ಸಲ ಮಾನಸಿಕ ನೆಮ್ಮದಿ ಹಾಳಾಗಲು ನಾವೇ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವೊಮ್ಮೆ ನಾವು ಮಾಡುವ ಎಡವಟ್ಟುಗಳು ನೆಮ್ಮದಿ ಕೆಡಿಸಿದರೆ, ಮಾಡುವ ಕೆಲಸಗಳು, ಒತ್ತಡದ ಜೀವನಗಳು ಕೂಡ ಬೇಸರ ತರಿಸಿ ಬಿಡುತ್ತವೆ. ಹಿಂದಿನ ಕಾಲದಲ್ಲಿ ಒಂದಷ್ಟು ಸಮಯವನ್ನು ದೇವರ ಧ್ಯಾನ, ಭಜನೆ ಮಾಡುವ ಮೂಲಕ ಕಳೆಯುತ್ತಿದ್ದರು ಇದರಿಂದ ಮಾನಸಿಕ ನೆಮ್ಮದಿ ಪಡೆಯುತ್ತಿದ್ದರು.

ಇವತ್ತು ಕೂಡ ಆ ರೀತಿಯಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿದೆ. ಆದರೆ ನಾವು ಕಾಲದ ಜತೆ ಓಡುತ್ತಿದ್ದೇವೆ. ಹೀಗಾಗಿ ಪ್ರಶಾಂತ ವಾತಾವರಣದಲ್ಲಿರುವ ಯಾವುದಾದರೊಂದು ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಹಸಿರು ಪರಿಸರದ ನಡುವೆ ಕಳೆದು ಬರಲು ಸಾಧ್ಯವಾಗುತ್ತಿಲ್ಲ. ಆದರೆ ಇದನ್ನು ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ.
ಒತ್ತಡದ ಮಧ್ಯೆ ಆರೋಗ್ಯಕರ ಜೀವನ ಹೇಗೆ?
ನಮ್ಮಲ್ಲಿನ ಮಾನಸಿಕ ನೆಮ್ಮದಿ ಹಲವು ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಅಧ್ಯಾತ್ಮಿಕ ಚಿಂತಕರ ಪ್ರಕಾರ ಮಾನಸಿಕ ನೆಮ್ಮದಿ ಪಡೆಯಲು ತೀರ್ಥಕ್ಷೇತ್ರಗಳಿಗೆ ಹೋಗ ಬೇಕಾಗಿಲ್ಲ. ಇದ್ದಲ್ಲಿಯೇ ಕುಳಿತು ಏಕಾಗ್ರತೆಯಿಂದ ಓಂಕಾರದ ಜಪ ಮಾಡಿದರೂ ಸಾಕು ಎಂದು ಹೇಳಿದ್ದಾರೆ. ಅವರ ಪ್ರಕಾರ ಒಂದೆಡೆ ಏಕಾಂತದಲ್ಲಿ ಕೂತು ಓಂಕಾರದ ಜಪ ಮಾಡಿ ಮಾನಸಿಕ ನೆಮ್ಮದಿ ನಿಮ್ಮಲ್ಲಿ ಕಾಣಿಸುತ್ತದೆ ಎಂದಿದ್ದಾರೆ.

ನಿಜಹೇಳಬೇಕೆಂದರೆ ಇವತ್ತಿನ ಒತ್ತಡದ ಬದುಕಿನಲ್ಲಿ ಕೂತರೂ, ನಿಂತರೂ ಏನಾದರೊಂದು ಯೋಚನೆ ಮಾಡುತ್ತಲೇ ಇರುತ್ತೇವೆ. ಅದು ಅನಿವಾರ್ಯವೂ ಹೌದು. ಆದರೆ ಅದರಲ್ಲೂ ಆಗಾಗ್ಗೆ ರಿಂಗಣಿಸುವ ಮೊಬೈಲ್, ಇನ್ನೇನೋ ಒತ್ತಡಗಳು ನಮ್ಮನ್ನು ಏಕಾಂತವಾಗಿ ಇರಲು ಬಿಡುತ್ತಿಲ್ಲ. ಹಾಗಾಗಿ ಒತ್ತಡದ ಮಧ್ಯೆ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡಬೇಕಾಗಿದೆ.
ಓಂಕಾರದ ಬಗ್ಗೆ ವಿವೇಕಾನಂದರು ಹೇಳಿದ್ದೇನು?
ದೈಹಿಕವಾಗಿ ಆರೋಗ್ಯವಾಗಿ ಇರಬೇಕಾದರೆ ಮಾನಸಿಕ ನೆಮ್ಮದಿ ಅಗತ್ಯ. ಮಾನಸಿಕವಾಗಿ ಆರೋಗ್ಯವಾಗಿದ್ದರೆ ನಾವು ನಮ್ಮ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ. ಓಂಕಾರದ ಕುರಿತಂತೆ ಹಿಂದಿನ ಕಾಲದಿಂದಲೂ ಮಹರ್ಷಿಗಳು, ಆಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನ ನೀಡಿರುವುದನ್ನು ನಾವು ಕಾಣಬಹುದು. ಅದರ ಮಹಿಮೆಯನ್ನು ಅರಿತು ಸಾರ್ಥಕತೆಯನ್ನು ಕಂಡಿದ್ದಾರೆ.

ಸ್ವಾಮಿ ವಿವೇಕಾನಂದರು ಓಂಕಾರದ ಕುರಿತಂತೆ ಹೇಳುತ್ತಾ ಜೀವದ ಮೇಲೆ ಅನೇಕ ಜನ್ಮ ಸಂಪ್ರದಾಯವಾದ ಸಂಸ್ಕಾರ ಎಂಬುವುದೊಂದೇ ಎಂಬುವುದನ್ನು ನಾವು ಮರೆಯಬಾರದು. ಈ ಸಂಸ್ಕಾರಗಳು ಹೆಚ್ಚು ಹೆಚ್ಚಾಗಿ ಅಂತರ್ಗತವಾಗಿದ್ದುಕೊಂಡು ಒಂದಿಷ್ಟು ಪ್ರಚೋದನೆ ಸಿಕ್ಕಾಗ ಹೊರಕ್ಕೆ ಕಾಣಿಸುತ್ತವೆ. ದ್ರವ್ಯರೂಪದ ಈ ಅಣುಗಳ ಸ್ಪಂದನವಿಲ್ಲ.
ಓಂಕಾರ ಓಡುವ ಮನಸ್ಸಿನ ಲಗಾಮು
ಈ ಜಗತ್ತು ಪ್ರಳಯಕ್ಕೊಳಗಾದ ಎಲ್ಲ ಬ್ರಹತ್ ಸ್ಪಂದನಗಳೂ ಕಾಣದೆ ಇದ್ದಾಗ ಸೂರ್ಯ, ನಕ್ಷತ್ರ, ಚಂದ್ರ ಮತ್ತು ಈ ಭೂಮಿಯೇ ಕರಗಿ ಹೋದರೂ ಅಣುಗಳ ಸ್ಪಂದನ ಮಾತ್ರ ನಿಲ್ಲುವುದೇ ಇಲ್ಲ. ಪ್ರತಿಯೊಂದು ಅಣುವೂ ಈ ದೊಡ್ಡ ದೊಡ್ಡ ಜಗತ್ತುಗಳು ಮಾಡುವ ಕೆಲಸವನ್ನೇ ಮಾಡುತ್ತವೆ. ಹಾಗೆಯೇ ಚಿತ್ತದ ಸ್ಪಂದನವೂ ಉಪಶಮನಗೊಂಡರೂ ಅದರ ದ್ರವ್ಯರೂಪವಾಗಿರುವ ಅಣುಗಳ ಸ್ಪಂದನವು ಮುಂದುವರಿದೇ ಇರುತ್ತದೆ.
ಯಾವುದೇ ಪ್ರೇರಣೆ ಒದಗಿದರೂ ಮತ್ತೆ ಮೈದೋರುತ್ತದೆ. ಓಂಕಾರ ಜಪದ ಪುನರಾವೃತ್ತಿಯೂ ಹಾಗೆಯೇ ಏಕೆಂದರೆ ಪವಿತ್ರವಾದುದರೊಂದಿಗಿನ ಒಂದು ಕ್ಷಣದ ಸಹವಾಸವಷ್ಟೆ ಸಾಕು ಅದೇ ಭವಸಾಗರವನ್ನು ದಾಟಿಸುವ ಹಡಗಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನಿಂದ ಬೇರ್ಪಡಿಸಿಕೊಂಡು ನೋಡುವುದನ್ನು ಕಲಿಯಬೇಕು. ಪವಿತ್ರವಾದ ಓಂಕಾರವನ್ನು ಜಪಿಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಹುಚ್ಚು ಕುದುರೆಯಂತೆ ಓಡುವ ನಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಾಗುತ್ತದೆ.
ಓಂಕಾರ ಜಪದಿಂದ ಸಂಕಲ್ಪ ಶಕ್ತಿ ವೃದ್ಧಿ
ಇನ್ನೊಂದೆಡೆ ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ಓಂಕಾರ ಜಪ ದೈನಂದಿನ ಚಟುವಟಿಕೆಗಳ ನಡುವೆ ಚಕ್ರದಂತೆ ತಿರುಗುತ್ತಲೇ ಇರಬೇಕು. ಆಗ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ಆಶ್ರಯ ಪಡೆದು ಎಷ್ಟೋ ಪಾಪಿಗಳು ಪವಿತ್ರರೂ, ಮುಕ್ತರೂ ಆಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನೊಳಗೆ ಅನಪೇಕ್ಷಣೀಯ ವಿಚಾರಗಳು, ಚಾಂಚಲ್ಯಗಳು ಪ್ರವೇಶಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಓಂಕಾರದ ಜಪ ಮಾಡುವುದರಿಂದ ಅವುಗಳನ್ನು ತಡೆಯಬಹುದಾಗಿದೆ.
ಪತಂಜಲಿಯ ಪ್ರಕಾರ ಓಂಕಾರವನ್ನು ಜಪಿಸಬೇಕು ಮತ್ತು ಅದರ ಅರ್ಥವನ್ನು ಪರಿಭಾವಿಸಬೇಕು. ಹೀಗೆ ಅದನ್ನು ಜಪಿಸುವ ಯೋಗಿಗೆ ಏಕಾಗ್ರತೆಯುಂಟಾಗುತ್ತದೆ. ಆ ಮೂಲಕ ಆತನ ಮನಸ್ಸು ಅಂತರಾತ್ಮದ ಕಡೆ ಹೊರಳಿ ಚಿತ್ತದ ಏಕಾಗ್ರತೆಗೆ ಅಡೆತಡೆಯಾದ ತೊಂದರೆಯಿಂದ ಬಿಡುಗಡೆ ಹೊಂದುತ್ತದೆ. ಓಂಕಾರದ ನಿರಂತರ ಜಪದಿಂದ ಹಾಗೂ ಚಿಂತನೆಯಿಂದ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ತೊಂದರೆಗಳು ಸದ್ದಿಲ್ಲದೆ ನಿವಾರಣೆಯಾಗುತ್ತದೆ. ಒಂದಷ್ಟು ಹೊತ್ತನ್ನು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಓಂಕಾರದ ಜಪದಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಒಂದಷ್ಟು ಮನಶಾಂತಿ, ನೆಮ್ಮದಿ ಪಡೆಯಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications