ಹೊಸವರ್ಷ ಆಚರಣೆಗೆ ಮಂಜಿನ ನಗರಿ ಸಜ್ಜು: ಕೊಡಗಿನಲ್ಲಿ ಪ್ರವಾಸಿಗರ ಕಲರವ
ಮಡಿಕೇರಿ, ಡಿಸೆಂಬರ್ 29: ವಾರಾಂತ್ಯದ ರಜೆಗಳ ಜೊತೆಯಲ್ಲಿಯೇ ಹೊಸವರ್ಷವೂ ಆಗಮನವಾಗುತ್ತಿರುವ ಕಾರಣದಿಂದಾಗಿ ಎಲ್ಲೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ನಗರದಲ್ಲಿ ಸದಾ ಕೆಲಸದಲ್ಲಿ ನಿರತರಾಗಿದ್ದವರು ತಮ್ಮ ಎಲ್ಲ ಜಂಜಡಗಳನ್ನು ಬದಿಗೊತ್ತಿ ರಿಲ್ಯಾಕ್ಸ್ ಗಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನವರು ಕೊಡಗಿನ ಕಡೆಗೆ ಆಗಮಿಸುತ್ತಿರುವುದರಿಂದ ಇಲ್ಲಿನ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಭರ್ತಿಯಾಗಿವೆ. ದೂರದ ಊರುಗಳಲ್ಲಿ ಕೆಲಸ ಮಾಡಿಕೊಂಡಿದ್ದವರು ತಮ್ಮ ಊರಿಗೆ ಮರಳಿರುವ ಕಾರಣದಿಂದಾಗಿ ಜನಜಂಗುಳಿ ಕಾಣಿಸುತ್ತಿದೆ.
ಒಂದೆರಡು ದಶಕಗಳ ಹಿಂದೆ ಕೇವಲ ಕೃಷಿ ಚಟುವಟಿಕೆಯಷ್ಟೇ ಕೊಡಗಿನ ಆದಾಯದ ಮೂಲವಾಗಿತ್ತು. ಆದರೆ ಪ್ರವಾಸೋದ್ಯಮ ಅಭಿವೃದ್ಧಿಯಾದ ಬಳಿಕ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ. ಹೋಟೆಲ್ ಉದ್ಯಮವೂ ಚೇತರಿಸಿದೆ. ಹೋಂಸ್ಟೇಗಳು ಹುಟ್ಟಿಕೊಂಡಿರುವುದರಿಂದ ಆರ್ಥಿಕ ಚೇತರಿಕೆ ಕಂಡು ಬಂದಿದೆ. ಬಹುತೇಕ ವ್ಯಾಪಾರ ವಹಿವಾಟುಗಳು ಪ್ರವಾಸಿಗರನ್ನು ನಂಬಿ ನಡೆಯುತ್ತಿದೆ. ಹೋಂಸ್ಟೇಗಳು ಕೂಡ ಪ್ರವಾಸಿಗರನ್ನು ಅವಲಂಭಿಸಿರುವ ಕಾರಣದಿಂದಾಗಿ ಪ್ರವಾಸಿಗರನ್ನು ಸೆಳೆಯುವುದು ಅನಿವಾರ್ಯವಾಗಿದೆ.

ಭೂಕುಸಿತ ಮತ್ತು ಕೊರೋನಾದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿತ್ತು. ಪ್ರವಾಸಿಗರು ಜಿಲ್ಲೆಯತ್ತ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ಹೊರಗಿನವರು ಬಂದು ಬಂಡವಾಳ ಸುರಿದು ಹೋಟೆಲ್, ಹೋಂಸ್ಟೇ, ರೆಸಾರ್ಟ್ ಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಲು ಸೃಷ್ಟಿಯಾಗುತ್ತಿವೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿವೆ. ಹಾಗೆಯೇ ಟ್ರಾವೆಲ್ಸ್ ಉದ್ಯಮ ಚೇತರಿಕೆ ಕಂಡಿದೆ. ಮೊದಲೆಲ್ಲ ಕೆಲವೇ ಕೆಲವು ಸಮಯಗಳಲ್ಲಿ ಮಾತ್ರ ಪ್ರವಾಸಿಗರು ಬರುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ವರ್ಷಪೂರ್ತಿ ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಸಾಗರೋಪಾದಿಯಲ್ಲಿ ಆಗಮಿಸುವುದು ಸಾಮಾನ್ಯವಾಗಿದೆ. ಕಳೆದೊಂದು ದಶಕದಲ್ಲಿ ಕೊಡಗು ಸಾಕಷ್ಟು ಅಭಿವೃದ್ಧಿಯನ್ನು ಕಾಣುವಂತಾಗಿದೆ.
ಇದೀಗ ಕೃಷಿ ಜತೆಗೆ ಹಲವು ರೀತಿಯ ವ್ಯಾಪಾರ ವಹಿವಾಟುಗಳು ತೆರೆದುಕೊಂಡಿವೆ. ಅಲ್ಲಲ್ಲಿ ಹೋಟೆಲ್ ಗಳು, ಮಾಲ್ ಗಳು, ಅಂಗಡಿ ಮಳಿಗೆಗಳು ನಿರ್ಮಾಣವಾಗಿವೆ. ಇವೆಲ್ಲವೂ ಕೊಡಗಿನ ಬದಲಾವಣೆಗೆ ಕಾರಣವಾಗುತ್ತಿವೆ. ಕೊಡಗಿನಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳು ದೊರೆಯುತ್ತಿರುವುದರಿಂದ ಹೊರಗಿನಿಂದ ಬರುವ ಪ್ರವಾಸಿಗರಿಗೆ ಪ್ರವಾಸ ಕಷ್ಟವಾಗುತ್ತಿಲ್ಲ. ಇನ್ನು ನಿನ್ನೆ ಮೊನ್ನೆಯವರೆಗೂ ಇಲ್ಲಿ ಮಳೆಯಿತ್ತು. ಇದೀಗ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಮಂಜಿನ ನಡುವೆ ಸಣ್ಣಗೆ ನಡುಕ ಹುಟ್ಟಿಸುವ ಚಳಿಯಲ್ಲಿ ಮೈಕೊಟ್ಟು ಓಡಾಡುವುದು ಮಜಾ ಕೊಡುತ್ತಿದೆ.

ಹೋಂಸ್ಟೇ, ರೆಸಾರ್ಟ್, ಹೋಟೆಲ್ ಗಳು ಭರ್ತಿ
ಇಂತಹ ಸುಂದರ ಪರಿಸರದಲ್ಲಿ ಒಂದೆರಡು ದಿನಗಳ ಕಾಲ ಇದ್ದು ಹೋಗಲೆಂದು ಬರುವವರ ಸಂಖ್ಯೆ ಜಾಸ್ತಿಯಿದೆ. ಉಳಿದಂತೆ ನಿಸರ್ಗ ನಿರ್ಮಿತ ಹಲವು ಪ್ರವಾಸಿ ತಾಣಗಳೆಲ್ಲವನ್ನು ನೋಡಿಕೊಂಡು ಒಂದಷ್ಟು ಹೊತ್ತು ಅಲ್ಲಿಯೇ ಕಾಲ ಕಳೆದು ಹೋಗುವುದು ಪ್ರವಾಸಿಗರ ಇರಾದೆಯಾಗಿದೆ. ಪ್ರತಿ ವರ್ಷ ಕೊಡಗಿನಲ್ಲಿಯೇ ವರ್ಷಾಚರಣೆ ಮಾಡಬೇಕೆಂದು ಬಹಳಷ್ಟು ಮಂದಿಯ ಬಯಕೆಯಾಗಿದೆ. ಅಂತಹವರು ಪ್ರತಿವರ್ಷವೂ ಇಲ್ಲಿಗೆ ಬರುತ್ತಾರೆ. ಇದಕ್ಕಾಗಿ ಮೊದಲೇ ರೆಸಾರ್ಟ್, ಹೋಟೆಲ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತಾರೆ.
ಈ ಬಾರಿಯಂತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಕೊಡಗು ಮಾತ್ರವಲ್ಲದೆ, ಮಲೆನಾಡು ಕಡೆಗೆ ಮುಖ ಮಾಡಿರುವ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಹೀಗಾಗಿ ಹೋಟೆಲ್, ರೆಸಾರ್ಟ್, ಹೋಂಸ್ಟೇ ಗಳು ಭರ್ತಿಯಾಗಿವೆ. ಆದುದರಿಂದ ಕೊನೆಗಳಿಗೆಯಲ್ಲಿ ಮಲೆನಾಡಿನ ಕಡೆಗೆ ಹೋಗಲು ಮನಸ್ಸು ಮಾಡಿದವರು ವಾಸ್ತವ್ಯದ ಬಗ್ಗೆ ಮೊದಲೇ ತಿಳಿದುಕೊಂಡು ತೆರಳುವುದು ತುಂಬಾ ಒಳ್ಳೆಯದು. ಅದು ಏನೇ ಇರಲಿ ಈ ಸಮಯದಲ್ಲಿ ಪ್ರವಾಸಿಗರಿಗೆ ಮಲೆನಾಡಿನ ಅನುಭವ ವಿಭಿನ್ನವಾಗಿರುತ್ತದೆ.

ಇದೆಲ್ಲದರ ನಡುವೆ ಕೊಡಗಿಗೆ ಹೋದವರು ಭಾಗಮಂಡಲದ ತ್ರಿವೇಣಿಸಂಗಮದಲ್ಲಿ ಮಿಂದು ತಲಕಾವೇರಿಗೆ ತೆರಳಿ ಕಾವೇರಿಯ ದರ್ಶನ ಮಾಡಿಕೊಂಡು ಮಡಿಕೇರಿಯ ಕೋಟೆ ಕೊತ್ತಲಗಳನ್ನು ನೋಡಿ ಹಾಗೆಯೇ ಓಂಕಾರೇಶ್ವರನ ಪ್ರಾರ್ಥಿಸಿ, ರಾಜಾಸೀಟಿನಲ್ಲಿ ನಿಸರ್ಗದ ಚೆಲುವನ್ನು ಆಸ್ವಾದಿಸಿ, ಅಬ್ಬಿ ಜಲಪಾತದ ಭೋರ್ಗರೆತವನ್ನು ಕಣ್ಣಾರೆ ಕಂಡು, ಮಂದಾಲಪಟ್ಟಿಯಲ್ಲಿ ಮೈಚೆಲ್ಲಿ ನಿಸರ್ಗಧಾಮದಲ್ಲಿ ಅಡ್ಡಾಡಿ ಬಂದರೆ ಇಲ್ಲಿನ ಅನುಭವಗಳು ರೋಮಾಂಚನವಾಗಿರುತ್ತವೆ. ಅಷ್ಟೇ ಅಲ್ಲದೆ ಮರೆಯಲಾರದ ನೆನಪಾಗಿ ಉಳಿದು ಬಿಡುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications