Get Updates
Get notified of breaking news, exclusive insights, and must-see stories!

ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ತನಿಖೆ ಯಾಕೆ? ಏನಿದು ಪ್ರಕರಣ?

ನವದೆಹಲಿ, ಆಗಸ್ಟ್ 19: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕಳೆದ ತಿಂಗಳು ಆಮ್ ಆದ್ಮಿ ಸರಕಾರ ರದ್ದು ಮಾಡಿದ ಮದ್ಯ ನೀತಿ ವಿರುದ್ಧ ಅವ್ಯವಹಾರದ ಆರೋಪ ಬಂದ ಹಿನ್ನೆಲೆಯಲ್ಲಿ ಸಿಬಿಐ ರೇಡ್ ಮಾಡಿದೆ.

ಏಳು ರಾಜ್ಯಗಳ 20 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಮನೀಶ್ ಸಿಸೋಡಿಯ ಮನೆ ಅಲ್ಲದೇ ದಾಮನ್ ಮತ್ತು ದಿಯುನಲ್ಲಿರುವ ದೆಹಲಿಯ ಮಾಜಿ ಅಬಕಾರಿ ಆಯುಕ್ತ ಎ ಗೋಪಿಕೃಷ್ಣ ಅವರ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.

"ಸಿಬಿಐ ನನ್ನ ಮನೆ ಬಳಿ ಬಂದಿದೆ. ನನ್ನ ವಿರುದ್ಧ ಅವರಿಗೆ ಏನೂ ಸಿಗುವುದಿಲ್ಲ. ಆದರೆ, ತನಿಖೆಗೆ ನನ್ನ ಸಹಕಾರವಂತೂ ಇರುತ್ತದೆ," ಎಂದು ಮನೀಶ್ ಸಿಸೋಡಿಯಾ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಹಿಂದೆಯೇ ಮನೀಶ್ ಸಿಸೋಡಿಯಾ ಮೇಲೆ ಕೇಂದ್ರ ಸರಕಾರ ಟಾರ್ಗೆಟ್ ಮಾಡುತ್ತದೆ ಎಂದು ಹೇಳಿದ್ದರು. ಶುಕ್ರವಾರ ನಡೆದ ರೇಡ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, "ಹಿಂದೆಯೂ ಹಲವು ಬಾರಿ ರೇಡ್‌ಗಳಾಗಿವೆ. ಏನೂ ಸಿಕ್ಕಿಲ್ಲ. ಈಗಲೂ ಏನೂ ಸಿಕ್ಕಲ್ಲ" ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಮನೀಶ್ ಸಿಸೋಡಿಯಾ ಮನೆ ಸೇರಿ ಇಂದು 21 ಸ್ಥಳಗಳ ಮೇಲೆ ಸಿಬಿಐ ರೇಡ್ ಮಾಡಿರುವುದು ದೆಹಲಿಯ ಅಬಕಾರಿ ನೀತಿ ಪ್ರಕರಣದ ಸಂಬಂಧ. ದೆಹಲಿಯಲ್ಲಿದ್ದ ಹಿಂದಿನ ಅಬಕಾರಿ ನೀತಿಯನ್ನು ರದ್ದು ಮಾಡಿ ದೆಹಲಿ ಸರಕಾರ ಕಳೆದ ವರ್ಷ ಹೊಸ ಅಬಕಾರಿ ನೀತಿಯನ್ನು ತಂದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸದ್ಯ ಕೇಳಿಬಂದಿರುವ ಪ್ರಮುಖ ಆರೋಪ.

ಮದ್ಯ ಮಾರಾಟ ಪರವಾನಿಗೆಗಳನ್ನು ಅಕ್ರಮವಾಗಿ ನೀಡಲಾಗಿದೆ. ಪರವಾನಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನೀತಿ ರೂಪಿಸಲಾಗಿದೆ ಎಂಬ ಆರೋಪಗಳಿವೆ.

ಜುಲೈನಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿ ನೀಡಿದ ವರದಿ ಆಧಾರದ ಮೇಲೆ ಸಿಬಿಐ ತನಿಖೆ ನಡೆಯುತ್ತಿದೆ.

ಸಿಸೋಡಿಯಾ ಮೇಲಿನ ಆರೋಪವೇನು?

ಸಿಸೋಡಿಯಾ ಮೇಲಿನ ಆರೋಪವೇನು?

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಗಮನಕ್ಕೆ ಬಾರದೆಯೇ ಅಬಕಾರಿ ನೀತಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಪರವಾನಿಗೆ ಶುಲ್ಕದ ಮೇಲೆ 144.36 ಕೋಟಿ ರೂ ಮನ್ನಾ ಮಾಡುವ ನಿರ್ಧಾರವನ್ನೂ ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಾರದೆಯೇ ಮಾಡಲಾಗಿದೆ ಎಂಬ ಆರೋಪ ಇದೆ.

ವಿದೇಶೀ ಮದ್ಯದ ದರಗಳನ್ನು ಪರಿಷ್ಕರಿಸುವ ಮೂಲಕ ಮತ್ತು ಬಿಯರ್ ಮೇಲಿನ ಆಮದು ಸುಂಕವನ್ನು ತೆಗೆದುಹಾಕುವ ಮೂಲಕ ಲಿಕರ್ ಲೈಸೆನ್ಸ್‌ದಾರರಿಗೆ ಉದ್ದೇಶಪೂರ್ವಕವಾಗಿ ಅನುಕೂಲ ಆಗುವಂತೆ ಮನೀಶ್ ಸಿಸೋಡಿಯಾ ನೋಡಿಕೊಂಡರು. ವಿದೇಶೀ ಮದ್ಯ ಸರಕು ಕಡಿಮೆಗೆ ಲಭ್ಯವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರದ ಬೊಕ್ಕಸಕ್ಕೆ ಆದಾಯ ಕಡಿಮೆ ಆಗುತ್ತದೆ ಎಂಬ ವಾದ ಇದೆ.

ಅಕ್ರಮ ಹೇಗೆ?

ಅಕ್ರಮ ಹೇಗೆ?

ಮದ್ಯ ಮಾರಾಟಕ್ಕೆ ಲೈಸೆನ್ಸ್ ನೀಡಿಕೆಯಲ್ಲಿ ನಡೆದ ಅವ್ಯವಹಾರ ಒಂದೆಡೆಯಾದರೆ, ಸರಕಾರದ ಅಬಕಾರಿ ನೀತಿಯಲ್ಲಿ ಮಾಡಲಾದ ಬದಲಾವಣೆಯನ್ನು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಾರದೇ ಇದ್ದದ್ದೂ ಅಕ್ರಮ ಎನಿಸಿದೆ.

ನಿಯಮಗಳ ಪ್ರಕಾರ ಈಗಾಗಲೇ ಜಾರಿಯಲ್ಲಿರುವ ಒಂದು ನೀತಿಯಲ್ಲಿ ಏನೇ ಬದಲಾವಣೆ ಮಾಡಬೇಕಿದ್ದರೂ ಅದನ್ನು ಸಂಪುಟದ ಮುಂದಿಡಬೇಕು. ಅನುಮೋದನೆಗೆ ಲೆಫ್ಟಿನೆಂಟ್ ಗವರ್ನರ್‌ಗೆ ಕಳುಹಿಸಬೇಕು. ಎಲ್‌ಜಿ ಮತ್ತು ಕ್ಯಾಬಿನೆಟ್ ಅನುಮೋದನೆ ಇಲ್ಲದೆ ಮಾಡಲಾದ ಬದಲಾವಣೆಗಳು ಸಿಂಧು ಎನಿಸುವುದಿಲ್ಲ. ಇದು 2010ರ ದೆಹಲಿ ಅಬಕಾರಿ ನಿಯಮ ಹಾಗೂ 1993ರ ವ್ಯವಹಾರ ವಹಿವಾಟು ನಿಯಮಗಳಲ್ಲಿ ಸ್ಪಷ್ಟವಾಗಿ ನಮೂದಿತವಾಗಿದೆ.

ಕಳೆದ ತಿಂಗಳು ಅಬಕಾರಿ ನೀತಿ ರದ್ದು

ಕಳೆದ ತಿಂಗಳು ಅಬಕಾರಿ ನೀತಿ ರದ್ದು

ದೆಹಲಿ ಸರಕಾರದ ಹೊಸ ಅಬಕಾರಿ ನೀತಿಯನ್ನು ಸದ್ಯ ರದ್ದು ಮಾಡಲಾಗಿದೆ. ಜುಲೈ 30ರಂದು ಡಿಸಿಎಂ ಮನೀಶ್ ಸಿಸೋಡಿಯಾ ಅಬಕಾರಿ ನೀತಿ ರದ್ದು ಮಾಡಿರುವುದನ್ನು ಪ್ರಕಟಿಸಿದರು. ಆಗಸ್ಟ್ 1ರಿಂದ ಮತ್ತೆ ಹಳೆಯ ನೀತಿಯನ್ನೇ ಜಾರಿಗೆ ತರಲಾಗಿದೆ.

ಈಗ ದೆಹಲಿ ಸರಕಾರ ತನ್ನ ಹೊಸ ಅಬಕಾರಿ ನೀತಿಯನ್ನು ಪರಿಷ್ಕರಿಸುತ್ತಿದೆ. ಇದು ಸಿದ್ಧಗೊಂಡ ಬಳಿಕ ಮತ್ತೆ ಹೊಸ ನೀತಿ ಜಾರಿಗೆ ಬರಲಿದೆ. ಈ ಹೊಸ ನೀತಿಯಲ್ಲಿ ಮದ್ಯದಂಗಡಿಗಳು ಬೆಳಗ್ಗೆ 3ಗಂಟೆಯವರೆಗೆ ಬಾಗಿಲು ತೆರೆಯಲು ಅವಕಾಶ ಇರಲಿದೆ. ಪರವಾನಿಗೆದಾರರು ಎಷ್ಟು ಬೇಕಾದರೂ ರಿಯಾಯಿತಿ ನೀಡಬಹುದು. ಮದ್ಯದ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಬಹುದು. ಇವೇ ಮುಂತಾದ ಹಲವು ಸೌಲಭ್ಯಗಳಿಗೆ ಅವಕಾಶ ಸಿಗುತ್ತದೆ.

ಇನ್ನು, ದೆಹಲಿಯ ಹಳೆಯ ಮದ್ಯ ನೀತಿಯಲ್ಲಿ ಸರಕಾರಿ ಸ್ವಾಮ್ಯದ ಮಳಿಗೆಗಳು ಮಾತ್ರವೇ ಮದ್ಯ ಮಾರಾಟ ಮಾಡಲು ಅವಕಾಶ ಇದೆ. ಇದೂ ಸೇರಿ ಮದ್ಯ ಮಾರಾಟಕ್ಕೆ ಇನ್ನೂ ಹತ್ತು ಹಲವು ನಿರ್ಬಂಧಗಳು ಇವೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+