ಏರೋ ಇಂಡಿಯಾ ವಿಶೇಷ : ಬೀದರ್ ವಾಯುನೆಲೆಯ 'ಸೂರ್ಯಕಿರಣ' ಏರ್ ಕ್ರಾಫ್ಟ್
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 20ರಿಂದ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನ ಆರಂಭಗೊಂಡಿದೆ. ತಾಲೀಮು ನಡೆಸುತ್ತಿರುವ ವೇಳೆ ಹಾಕ್ ವಿಮಾನಗಳಾದ ಸೂರ್ಯ ಕಿರಣ್ ಡಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟ ಘಟನೆ ನಡೆದಿದೆ. ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ ವಿಮಾನ ತಂಡದ ಬಗ್ಗೆ ಒಂದಷ್ಟು ಸಂಗತಿ ಇಲ್ಲಿದೆ...
ಭಾರತೀಯ ವಾಯು ಸೇನೆ(ಐಎಎಫ್) ನ ಏರೋಬ್ಯಾಟಿಕ್ಸ್ ಪ್ರದರ್ಶನ ತಂಡವಾಗಿರುವ ಸೂರ್ಯ ಕಿರಣ್(SKAT) ಆರಂಭವಾಗಿದ್ದು, 1996ರಲ್ಲಿ. ಐಎಎಫ್ ನ 52ನೇ ಸ್ಕ್ವಾಡ್ರನ್ ನ ಭಾಗವಾಗಿದೆ.
9 ವಿಮಾನಗಳ ತಂಡ ಒಮ್ಮೆಗೆ ಗಗನಕ್ಕೆ ಚಿಮ್ಮಿ ಪ್ರದರ್ಶನ ನೀಡುತ್ತವೆ. 2011ರ ತನಕ ಎಚ್ಎಎಲ್ ನಿರ್ಮಿತ ಈಗ ಸೂರ್ಯ ಕಿರಣ್ ವಿಮಾನವು ಮಿಲಿಟರಿ ತರಬೇತಿ ಏರ್ ಕ್ರಾಫ್ಟ್ ಆಗಿ ಬಳಕೆಯಲ್ಲಿತ್ತು.

ಕರ್ನಾಟಕದ ಬೀದರ್ ವಾಯುನೆಲೆಯ ಸೂರ್ಯ ಕಿರಣ್ ವಿಮಾನಗಳನ್ನು 2011ರಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ, 2017ರಲ್ಲಿ ಹಾಕ್ ಎಂಕೆ132 ಏರ್ ಕ್ರಾಫ್ಟ್ ಗಳು ಮತ್ತೆ ಹಾರಾಟ ಆರಂಭಿಸಿದವು.
'Always the Best' ಎಂಬ ಧ್ಯೇಯ ವಾಕ್ಯದೊಡನೆ ಕಿತ್ತಳೆ ಹಾಗೂ ಬಿಳಿ ಬಣ್ಣದ ಈ ವಿಮಾನಗಳು ಆಕರ್ಷಣೀಯವಾಗಿರುತ್ತವೆ.
2011ರ ಕಿರಣ್ Mk II ಏರ್ ಕ್ರಾಫ್ಟ್ ಒಂದು ಗಂಟೆಗೆ 450 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಈ ಹೊಸ Hawk ಏರ್ ಕ್ರಾಫ್ಟ್ ಒಂದು ಗಂಟೆಗೆ ಸುಮಾರು 650 ಕಿಮೀ ವೇಗದಲ್ಲಿ ಚಲಿಸುತ್ತದೆ. 2017ರಲ್ಲಿ ಏರೋ ಇಂಡಿಯಾಕ್ಕೆ ಮರಳಿದ ಸೂರ್ಯ ಕಿರಣ್ ವಿಮಾನದ ಏರೋಬ್ಯಾಟಿಖ್ ನೇತೃತ್ವವನ್ನು ಕಮ್ಯಾಂಡರ್ ವೇಣು ನಂಬೀಸನ್ ವಹಿಸಿಕೊಂಡಿದ್ದರು.
ಅಪಘಾತಗಳು:
2006ರಲ್ಲಿ ಮಾರ್ಚ್ 18ರಂದು ಬೀದರ್ ವಾಯುನೆಲೆಯ್ಲ್ಲಿ ತರಬೇತಿ ವೇಳೆ ಸೂರ್ಯ ಕಿರಣ್ ವಿಮಾನ ಸ್ಫೋಟಗೊಂಡು ವಿಂಗ್ ಕಮ್ಯಾಂಡರ್ ಧೀರಜ್ ಭಾಟೀಯಾ ಹಾಗೂ ಸ್ಕ್ವಾಡ್ರನ್ ಲೀಡರ್ ಶೈಲಂದರ್ ಸಿಂಗ್ ತೀವ್ರವಾಗಿ ಗಾಯಗೊಂಡರು.
2007ರಲ್ಲಿ ಎಚ್ ಜೆ ಟಿ 16 ಕಿರಣ್ ಮಿಲಿಟರಿ ತರಬೇತಿ ವಿಮಾನವು ಏರೋಬ್ಯಾಟಿಕ್ ಪ್ರದರ್ಶನದ ವೇಳೆ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಅದೃಷ್ಟವಶಾತ್, ಪೈಲಟ್ ಪ್ರಾಣಪಾಯದಿಂದ ಬಚಾವಾದರು.
2009ರ ಜನವರಿ 21ರಂದು ಬೀದರ್ ನಲ್ಲಿ ತರಬೇತಿ ವೇಳೆ ವಿಮಾನ ಅಪಘಾತವಾಗಿ ವಿಂಗ್ ಕಮ್ಯಾಂಡರ್ ಆರ್ ಎಸ್ ಧಳಿವಾಲ್ ಅವರು ತೀವ್ರವಾಗಿ ಗಾಯಗೊಂಡರು.
2019ರ ಫೆಬ್ರವರಿ 19ರಂದು ಎರಡು ಸೂರ್ಯ ಕಿರಣ್ ವಿಮಾನಗಳು ಅಪಘಾತಕ್ಕೀಡಾಗಿ, ಓರ್ವ ಪೈಲಟ್ ಸಾಹಿಲ್ ಗಾಂಧಿ ಮೃತಪಟ್ಟರೆ, ಉಳಿದ ಮೂವರಿಗೆ ತೀವ್ರಗಾಯಗಳಾಯಿತು.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications