ಜಮ್ಮುಕಾಶ್ಮೀರದಲ್ಲಿ 43 ಲಕ್ಷ ರೂ. ಬಿರಿಯಾನಿ 'ಬಿಲ್ ವಿದ್ಯೆ' ತೋರಿಸಿದವರ ವಿರುದ್ಧ ಎಫ್ಐಆರ್
ದೇಶದಲ್ಲಿ ಇದುವರೆಗೆ ನಾವು ಹಲವು ಅನೇಕ ಹಗರಣಗಳು ನಡೆದಿವೆ ಎಂದು ನಾವು ಕೇಳಿದ್ದೇವೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿರಿಯಾನಿ ಹಗರಣ ನಡಿದಿದೆ. ಇದೀಗ ಇಂತಹದೊಂದು ಹಗರಣವು ಬಯಲಿಗೆ ಬಂದಿದೆ. ಹೌದು ರುಚಿಕರವಾದ ಬಿರಿಯಾನಿ ತಿಂದು ತೇಗಿದ್ದಾರೆ ಎನ್ನಲಾದ ಈ ಘಟನೆ ಬೆಳಕಿಗೆ ಬಂದಿದೆ. ಕಾಶ್ಮೀರದಲ್ಲಿ ಜನರು ಇದನ್ನು ಕೇಳಿ ಎಲ್ಲರೂ ಅಚ್ಚರಿ ಪಡುವಂತಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಬಿರಿಯಾನಿ ಹಗರಣ ಹೊರಬಿದ್ದಿದೆ. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ.
ಸರ್ಕಾರದ ಹಣವನ್ನು ಹೇಗೆ ಪೋಲು ಮಾಡಬಹುದು ಮತ್ತು ಯಾವ ವಸ್ತುಗಳಲ್ಲಿ ವ್ಯರ್ಥವಾಗಬಹುದು ಎಂಬುದಕ್ಕೆ ಆಶ್ಚರ್ಯಕರ ಉದಾಹರಣೆಯೊಂದು ಜಮ್ಮು ಮತ್ತು ಕಾಶ್ಮೀರದಿಂದ ಹೊರಬಿದ್ದಿದೆ. ಇಲ್ಲಿನ ಕ್ರೀಡಾ ಅಧಿಕಾರಿಗಳು ಆಟಗಾರರ ಮೂಲ ಸೌಕರ್ಯ ಹೆಚ್ಚಿಸುವ ಸಲುವಾಗಿ ಪಡೆದ 43 ಲಕ್ಷ ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಕಬಳಿಸಿದ್ದಾರೆ. ಇದೀಗ ಈ ವಿಷಯ ಬೆಳಕಿಗೆ ಬಂದಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 43 ಲಕ್ಷ ರೂ. ಬಿರಿಯಾನಿ ಹಗರಣ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದಾರೆ.

45 ಲಕ್ಷ ರೂ. ಮೌಲ್ಯದ ಬಿರಿಯಾನಿ
ವಾಸ್ತವವಾಗಿ ಎಸಿಬಿ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಫುಟ್ಬಾಲ್ ಅಸೋಸಿಯೇಷನ್ (ಜೆಕೆಎಫ್ಎ) ಅಧಿಕಾರಿಗಳ ವಿರುದ್ಧ ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ನಿಂದ ಪಡೆದ 45 ಲಕ್ಷ ರೂಪಾಯಿಯನ್ನು ಫುಟ್ ಬಾಲ್ ಸಂಸ್ಥೆಯ ಪದಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಎಸಿಬಿ ಅಧಿಕಾರಿಗಳ ಪ್ರಕಾರ, ಜೆಕೆಎಫ್ಎ ಮಾಜಿ ಅಧ್ಯಕ್ಷ ಜಮೀರ್ ಅಹ್ಮದ್ ಠಾಕೂರ್, ಖಜಾಂಚಿ ಎಸ್ಎಸ್ ಬಂಟಿ, ಮುಖ್ಯ ಕಾರ್ಯನಿರ್ವಾಹಕ ಎಸ್ಎ ಹಮೀದ್, ಜಿಲ್ಲಾ ಅಧ್ಯಕ್ಷ ಜೆಕೆಎಫ್ಎ ಫಯಾಜ್ ಅಹ್ಮದ್ ಮತ್ತು ಇತರರು ಸೇರಿದಂತೆ ಜೆ & ಕೆ ಫುಟ್ಬಾಲ್ ಅಸೋಸಿಯೇಷನ್ನ ಸದಸ್ಯರು ನಕಲಿ ಬಿಲ್ಗಳನ್ನು ತಯಾರಿಸಿ ಹಣವನ್ನು ವಂಚಿಸಿದ್ದಾರೆ.

ರೆಸ್ಟೋರೆಂಟ್ಗಳ ಬಿರಿಯಾನಿ ಬಿಲ್ ನಕಲಿ
ಸಿಕ್ಕಿರುವ ಮಾಹಿತಿ ಪ್ರಕಾರ ಖೇಲೋ ಇಂಡಿಯಾ ಹಾಗೂ ಮುಫ್ತಿ ಸ್ಮಾರಕ ಗೋಲ್ಡ್ ಕಪ್ ನಂತಹ ಟೂರ್ನಿಗಳ ಫುಟ್ ಬಾಲ್ ಪಂದ್ಯಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲು ಹಣ ನೀಡಲಾಗಿದೆ. ಈ ಪಂದ್ಯಗಳ ಆಯೋಜನೆಯಲ್ಲಿ ಜಿಲ್ಲಾ ತಂಡಕ್ಕೆ ಬಿರಿಯಾನಿ ನೀಡುವ ಹೆಸರಿನಲ್ಲಿ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳು ಮುಘಲ್ ದರ್ಬಾರ್, ಪೊಲೊ ವ್ಯೂ ಶ್ರೀನಗರದಂತಹ ರೆಸ್ಟೋರೆಂಟ್ಗಳ 43,06,500 ರೂ. ಬಿಲ್ ತಯಾರಿಸಲಾಗಿದೆ ಆದರೆ ಇಡೀ ಕಾಶ್ಮೀರದ ಯಾವುದೇ ಜಿಲ್ಲೆಯಲ್ಲಿ ಯಾವುದೇ ತಂಡಕ್ಕೆ ತಿನ್ನಲು ಬಿರಿಯಾನಿ ನೀಡಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ.

ದೂರಿನ ಮೇರೆಗೆ ತನಿಖೆ
ವಿಷಯ ಬೆಳಕಿಗೆ ಬಂದ ನಂತರ ಎಸಿಬಿ ಜೆಕೆ, ಪಿಸಿ ಆಕ್ಟ್ 2006ರ ಸೆಕ್ಷನ್ 5(2) ಮತ್ತು ಸೆಕ್ಷನ್ 465, 46 ರ ಸೆಕ್ಷನ್ 5(1)(ಸಿ), 5(1)(ಡಿ) 30/22 ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಎಸಿಬಿ ಅಧಿಕಾರಿಗಳ ಪ್ರಕಾರ, ಸೋಪೋರ್ನ ಮುಷ್ತಾಕ್ ಅಹ್ಮದ್ ಭಟ್ ನೀಡಿದ ದೂರಿನ ನಂತರ ಬ್ಯೂರೋ ತನಿಖೆ ನಡೆಸಿತು. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಮತ್ತು ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಏಜೆನ್ಸಿಗಳು ನೀಡಿದ ಹಣವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದು ಇನ್ನೂ ತನಿಖೆಯಾಗಬೇಕಿದೆ.

ಒಂದೇ ವ್ಯಕ್ತಿಯ ಕೈ ಬರಹ
ಜಮ್ಮು ಮತ್ತು ಕಾಶ್ಮೀರ ಫುಟ್ಬಾಲ್ ಅಸೋಸಿಯೇಷನ್ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಈ ಹಣವನ್ನು ಬಳಸಿದ್ದು ಈ ತನಿಖೆಯಲ್ಲಿ ಕಂಡುಬಂದಿದೆ. ಈ ಎಲ್ಲಾ ಬಿಲ್ಗಳು ಒಂದೇ ವ್ಯಕ್ತಿಯ ಕೈಬರಹವನ್ನು ಹೊಂದಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನವಾಗಿಲ್ಲ, ಆದರೆ ಈ ಪ್ರಕರಣವು ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬ್ಲಾಕ್ಮೇಲ್ ಪ್ರಕರಣವನ್ನು ಬಹಿರಂಗಪಡಿಸಿದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications